Advertisement

ನಾಳೆ ಪಿಇಎಸ್‌ ವಿವಿ 6ನೇ ಘಟಿಕೋತ್ಸವ

10:56 AM Nov 14, 2021 | Team Udayavani |

ಬೆಂಗಳೂರು; ಪಿಇಎಸ್‌ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವ ನ.15ರಂದು ನಡೆಯಲಿದೆ. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿವಿ ಕುಲಾಧಿಪತಿ ಪ್ರೊ. ಎಂ.ಆರ್‌. ದೊರೆಸ್ವಾಮಿ, ಈ ಬಾರಿ ಒಟ್ಟಾರೆ ಐವರಿಗೆ ಪಿಎಚ್‌.ಡಿ, ಒಬ್ಬರಿಗೆ ಎಂ.ಟೆಕ್‌ ಸಂಶೋಧನಾ ಪದವಿ, ರ್‍ಯಾಂಕ್‌ ಪಡೆದ 22 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು 59 ವಿದ್ಯಾರ್ಥಿಗಳಿಗೆ ರಜತ ಪದಕ ಒಳಗೊಂಡಂತೆ 2168 ಪ್ರಷರ್ಸ್‌ (ಪ್ರಸಕ್ತ ಶೈಕ್ಷಣಿಕ ಸಾಲಿನವರು) ಸೇರಿ 2249 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸೋಮವಾರ ಬೆಳಗ್ಗೆ 11.30ಕ್ಕೆ ಪಿಇಎಸ್‌ ವಿವಿ ಸಭಾಂಗಣದಲ್ಲಿ ಸಮಾರಂಭ ನಡೆಯಲಿದೆ.

ಉಪ ರಾಷ್ಟ್ರಪತಿ ಜೊತೆಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯಪಾಲರಾದ ಥಾವರ್‌ಚಂದ್‌ ಗೆಹಲೋತ್‌, ಸಚಿವರಾದ ಬೈರತಿ ಬಸವರಾಜು ಹಾಗೂ ಮುನಿರತ್ನ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. 2019ರಲ್ಲಿ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ್ದ ಪ್ರವಾಹದಿಂದ ಸಾಕಷ್ಟು ಶಾಲಾ ಕಟ್ಟಡಗಳು ಹಾಳಾಗಿದ್ದವು. ಈ ಪೈಕಿ ಪಿಇಎಸ್‌ ವಿವಿಯು ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಒಟ್ಟಾರೆ 9 ಶಾಲೆಗಳನ್ನು ದತ್ತು ಪಡೆದಿದೆ.

ಇದನ್ನೂ ಓದಿ:- ಆರ್ಟ್‌ ಗ್ಯಾಲರಿ, ಚಿತ್ರಕಲಾ ಪ್ರದರ್ಶನಕೆ ಚಾಲನೆ

ಹಾಳಾಗಿದ್ದ ಕಟ್ಟಡವನ್ನು ತೆರವುಗೊಳಿಸಿ ನೂತನವಾಗಿ ಸುಸಜ್ಜಿತ ಶಾಲಾ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಟ್ಟಿದೆ. ಈ ಶಾಲೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಗಾವಿ ಅಧಿವೇಶನದ ವೇಳೆ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು. ಪ್ಲೇಸ್‌ಮೆಂಟ್‌ನಲ್ಲಿ 1496 ಮಂದಿ ಅರ್ಹತೆ: ಪಿಇಎಸ್‌ ವಿಶ್ವವಿದ್ಯಾಲಯವು ಈ ಬಾರಿ ನಡೆಸಿದ ಕಾಲೇಜು ಕ್ಯಾಂಪಸ್‌ ಪ್ಲೇಸ್‌ ಮೆಂಟ್‌ನಲ್ಲಿ 1,496 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದು, ಈಗಾಗಲೇ 946 ಮಂದಿ ಉದ್ಯೋಗ ಪಡೆದಿದ್ದಾರೆ.

Advertisement

ಇಲ್ಲಿಯವರೆಗೂ 114 ಕಂಪನಿಗಳು ಕ್ಯಾಂಪಸ್‌ ಸಂದರ್ಶನ ನಡೆಸಿವೆ. ಇನ್ನೂ 71 ಸಂಸ್ಥೆಗಳು ಸಂದರ್ಶನ ನಡೆಸಲು ವಿವಿಯನ್ನು ಸಂಪರ್ಕಿಸಿವೆ ಎಂದು ವಿವಿ ಕುಲಸಚಿವ ಡಾ.ಕೆ.ಎಸ್‌. ಶ್ರೀಧರ್‌ ಮಾಹಿತಿ ನೀಡಿದರು. ಹೊಸ ಆಲೋಚನೆಗಳನ್ನು ಇಟ್ಟುಕೊಂಡು ಸ್ಟಾರ್ಟ್‌ ಅಪ್‌ ಕಂಪನಿಗಳನ್ನು ನಿರ್ಮಾಣ ಮಾ ಡುವ ಹಂಬಲವಿರುವ ಯುವಕರಿಗೆ “ಪೆಸು ವೆಂ ಚರ್‌ ಲ್ಯಾಬ್ಸ್’ ಹೆಸರಿನಲ್ಲಿ ಪ್ರೋತ್ಸಾಹ ನೀಡುತ್ತಿದೆ.

ಹೊಸ ಕಂಪನಿಗಳನ್ನು ನಿರ್ಮಿಸು ವವರಿಗಾಗಿ ಅರ್ಜಿ ಕರೆದಿದ್ದು, ಈ ವರೆಗೆ 200 ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 10 ಮಂದಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸ್ಟಾರ್ಟ್‌ ಅಪ್‌ ಕಂಪನಿಗಳನ್ನು ಆರಂಭಿಸಲು ಸಹಕಾರ ಮತ್ತು ಅವಶ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲಾ ಗುತ್ತಿದೆ ಎಂದು “ಪೆಸು ವೆಂಚರ್‌ ಲ್ಯಾಬ್ಸ್’ ಮುಖ್ಯಸ್ಥರಾಗಿರುವ ಸುರೇಶ್‌ ನರಸಿಂಹ ತಿಳಿಸಿದರು. ಕುಲಪತಿ ಡಾ.ಜೆ. ಸೂರ್ಯಪ್ರಸಾದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next