Advertisement

ನಾಳೆ ಚಂದ್ರಗ್ರಹಣ : ಮಠ, ಮಂದಿರಗಳಲ್ಲಿ ರಾತ್ರಿ ಭೋಜನವಿಲ್ಲ

07:00 AM Aug 06, 2017 | |

ಮಂಗಳೂರು/ ಉಡುಪಿ: ಚಂದ್ರಗ್ರಹಣ ಪ್ರಯುಕ್ತ ಆ. 7ರಂದು ಕರಾವಳಿಯ ಪ್ರಮುಖ ಮಠ, ಮಂದಿರಗಳ ಪೂಜೆ, ಪ್ರಸಾದ ಭೋಜನ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಭಕ್ತರು ಗಮನಿಸುವಂತೆ ಸೂಚಿಸಲಾಗಿದೆ.

Advertisement

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ರಾತ್ರಿಯ ಮಹಾಪೂಜೆ ಸಂಜೆ 6 ಗಂಟೆಗೆ ನಡೆಯಲಿದೆ. 6.30ರಿಂದ ದೇಗುಲದಲ್ಲಿ ಭಕ್ತರಿಗೆ ದೇವರ ದರ್ಶನ ಸಹಿತ ರಾತ್ರಿಯ ಭೋಜನ ಪ್ರಸಾದ ಇರುವುದಿಲ್ಲ. ಬೆಳಗ್ಗಿನ ಮತ್ತು ಮಧ್ಯಾಹ್ನದ ನಿತ್ಯ ಸೇವೆಗಳು ಎಂದಿನಂತೆಯೇ ನಡೆಯಲಿವೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ. 

ಉಡುಪಿ ಶ್ರೀಕೃಷ್ಣ ಮಠ: ಉಡುಪಿ ಶ್ರೀಕೃಷ್ಣಮಠದಲ್ಲಿ ಪೂಜೆಗಳು ಎಂದಿನಂತೆಯೇ ನಡೆಯಲಿವೆ. ಮಧ್ಯಾಹ್ನದ ಭೋಜನ ಪ್ರಸಾದ 12 ಗಂಟೆಯಿಂದ 1.30ರೊಳಗೆ ಮುಗಿಯಲಿದೆ.ರಾತ್ರಿ ಭೋಜನ ಇರುವುದಿಲ್ಲ ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ.

ಕಟೀಲು:  ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಧ್ಯಾಹ್ನ 1.30ಕ್ಕೆ ಪ್ರಸಾದ ಭೋಜನ ಮುಗಿಯುತ್ತದೆ. ರಾತ್ರಿ ಪೂಜೆ ಅಪರಾಹ್ನ 3 ಗಂಟೆಗೆ ನಡೆಯಲಿದೆ. ರಾತ್ರಿ ಊಟದ ವ್ಯವಸ್ಥೆ ಇರುವುದಿಲ್ಲ. ಸಂಜೆ ಆದ್ಯತೆ ಮೇರೆಗೆ ಫ‌ಲಾಹಾರ ವ್ಯವಸ್ಥೆ ಇದೆ. ರಾತ್ರಿ ಗ್ರಹಣದ ಅವಧಿಯಲ್ಲಿ ಶ್ರೀ ದೇವಿಗೆ ಸೀಯಾಳ ಅಭಿಷೇಕ ನಡೆಯಲಿದೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ.

ಧರ್ಮಸ್ಥಳ: ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಣ್ಣ ಮಟ್ಟಿನ ಬದಲಾವಣೆಯಷ್ಟೇ ಮಾಡಲಾಗಿದೆ. ಹಗಲು ದೇವರ ದರ್ಶನ, ಪೂಜೆ, ಪ್ರಸಾದ ವಿತರಣೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ರಾತ್ರಿ ವೇಳೆ 8.30ರ ಬದಲಿಗೆ 8 ಗಂಟೆಗೆದೇವರ ದರ್ಶನದ ಸರತಿ ಸಾಲು ನಿಲ್ಲಿಸಲಾಗುವುದು. ಅನಂತರ ದೇವರ ದರ್ಶನ, ಸೇವೆಗೆ ಅವಕಾಶ ಇಲ್ಲ ಎಂದು ಕ್ಷೇತ್ರದ ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next