Advertisement

ಚಿಕ್ಕಮಗಳೂರು: ಕಳೆದ ವರ್ಷ ಬಂಪರ್‌ಬೆಲೆ ಕಂಡಿದ ಟೊಮೇಟೊ ಬೆಳೆಗಾರರು ಈ ವರ್ಷ ಬೆಲೆ ಕುಸಿತದಿಂದ ಭಾರೀ ನಷ್ಟ ಅನುಭವಿಸುತ್ತಿದ್ದಾರೆ.

Advertisement

ಜಿಲ್ಲೆಯ ಬಯಲು ಭಾಗವಾದ ಕಡೂರು, ಅಜ್ಜಂಪುರ, ತರೀಕೆರೆ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟೊಮೇಟೊ ಬೆಳೆಯಲಾಗುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಸರಬರಾಜಾಗುತ್ತಿದೆ.

ಮಾರುಕಟ್ಟೆಗೆ ಬರುವ ಟೊಮೇಟೊವನ್ನು ಮಳೆ ಕಾರಣದಿಂದ ಜಿಲ್ಲೆಗೆ ಹಾಗೂ ಹೊರ ರಾಜ್ಯಗಳಿಗೆ ರವಾನೆ ಮಾಡಲು ಸಾಧ್ಯವಾಗದ ಕಾರಣ ಹಾಳಾಗುತ್ತಿದೆ. ಈ ಹಿಂದೆ ಪ್ರತೀ ಕ್ರೇಟ್‌ (25 ಕೆಜಿ) 800ರಿಂದ 900 ರೂ. ಬೆಲೆಗೆ ಹಾರಜಾಗುತ್ತಿತ್ತು. ಸದ್ಯ ಟೊಮೇಟೊ ಗುಣಮಟ್ಟದ ಆಧಾರದ ಮೇಲೆ 300ರಿಂದ 600, 700 ರೂ.ಗೆ ಇಂದು ಹರಾಜಾಗಿದೆ. ಒಟ್ಟಿನಲ್ಲಿ ಬೆಳೆಗಾರರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next