Advertisement

ಟೊಮೆಟೋ ಮಾರುಕಟ್ಟೆ ನಿರ್ಬಂಧ ಸಡಿಲಗೊಳಿಸಿ

07:11 PM May 30, 2021 | Team Udayavani |

ಚಿಂತಾಮಣಿ: ತಾಲೂಕಿನ ಸಾವಿರಾರು ಎಕರೆಯಲ್ಲಿ ರೈತರುಟೊಮೆಟೋ ಬೆಳೆದಿದ್ದು, ಚಿಂತಾಮಣಿ ಮಾರುಕಟ್ಟೆಗೆ ವಿಧಿಸಿರುವಕಠಿಣ ಲಾಕ್‌ಡೌನ್‌ ಸಡಿಲಗೊಳಿಸಲು ಶಾಸಕ ಜೆ.ಕೆ.ಕೃಷ್ಣಾರೆಡ್ಡಿಡೀಸಿಗೆ ತಿಳಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವಅವರು, ಸಂಪೂರ್ಣ ಲಾಕ್‌ಡೌನ್‌ ಜಾರಿ ಮಾಡಿ, ಶುಕ್ರವಾರಮತ್ತು ಭಾನುವಾರ ಮಾತ್ರ ನಗರದಲ್ಲಿನ ಟೊಮೆಟೋಮಾರುಕಟ್ಟೆಗೆ ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ.ಇದರಿಂದ ಆ ದಿನ ಮಾರುಕಟ್ಟೆಗೆ ಟೊಮೆಟೋ ಹೆಚ್ಚು ಬರುತ್ತದೆ.

ಆಗ ಸ್ಥಳದ ಸಮಸ್ಯೆ ಆಗುತ್ತದೆ. ವ್ಯಾಪಾರಸ್ಥರು ಕಡಿಮೆ ರೇಟಿಗೆಖರೀದಿ ಮಾಡಲು ಮುಂದಾಗುತ್ತಾರೆ. ಇದರಿಂದ ರೈತರಿಗೆನಷ್ಟವಾಗುತ್ತದೆ. ಮಾರಕಟ್ಟೆಗೆ ತರಲು ಆಗುವ ವೆಚ್ಚ ಕೂಡಸಿಗುವುದಿಲ್ಲ ಎಂದಿದ್ದಾರೆ.

ಹೀಗಾಗಿ ಚಿಂತಾಮಣಿ ಟೊಮೆಟೋಮಾರುಕಟ್ಟೆಗೆ ವಿಧಿಸಿರುವ ಸಂಪೂರ್ಣ ಲಾಕ್ಡೌನ್ನಿಂದವಿನಾಯ್ತಿ ನೀಡಬೇಕು ಎಂದು ಶಾಸಕರು ಮಾಡಿದ ಮನವಿಗೆಸ್ಪಂದಿಸಿದ ಜಿಲ್ಲಾಧಿಕಾರಿ ಆರ್‌.ಲತಾ, ಮುಂದಿನ ಗುರುವಾರದಿಂದ ಟೊಮೆಟೋ ಮಾರುಕಟ್ಟೆಗೆ ವಿಧಿಸಿರುವ ಸಂಪೂರ್ಣ ಲಾಕ್‌ಡೌನ್‌ ಸಡಿಲಿಕೆ ಮಾಡಿ, ನಿತ್ಯ ವಹಿವಾಟು ನಡೆಯುವಂತೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next