Advertisement

Minister K.N. Rajanna: ಕೆಲಸ ಪೂರ್ಣಗೊಳಿಸುವವರೆಗೆ ಟೋಲ್‌ ವಸೂಲಿಗೆ ಬಿಡುವುದಿಲ್ಲ

09:53 PM Jul 20, 2024 | Team Udayavani |

ಸಕಲೇಶಪುರ: ಹಾಸನ-ಸಕಲೇಶಪುರ- ಮಾರನಹಳ್ಳಿ ರಾಷ್ಟ್ರೀಯ ಹೆದ್ದಾರಿ 75ರ ಕಾಮಗಾರಿ ಪೂರ್ಣಗೊಳಿಸುವವರೆಗೆ ಹಾಗೂ ಕೆಲವೆಡೆ ಅವೈಜ್ಞಾನಿಕ ರಸ್ತೆ ಕಾಮಗಾರಿ ಸರಿಪಡಿಸುವವರೆಗೂ ಹಾಸನ-ಸಕಲೇಶಪುರ ಮಾರ್ಗದಲ್ಲಿ ಟೋಲ್‌ ವಸೂಲಿ ಮಾಡಲು ಬಿಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ತಿಳಿಸಿದರು.

Advertisement

ತಾಲೂಕಿನ ರಾ.ಹೆ. 75ರ ಕೊಲ್ಲಹಳ್ಳಿ ತಡೆಗೋಡೆ ಹಾಗೂ ವಿವಿಧ ಭೂ ಕುಸಿತ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಮಗಾರಿ ಯೋಜನೆ ರೂಪಿಸುವಾಗ ಅಧಿಕಾರಿಗಳು ಗೂಗಲ್‌ ನೋಡಿಕೊಂಡು ಮಾಡುತ್ತಾರೋ ಅಥವಾ ಸ್ಥಳಕ್ಕೆ ಬಂದು ಮಾಡುತ್ತಾರೋ ಎಂಬ ಅನುಮಾನ ಉಂಟಾಗುತ್ತಿದೆ. ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಗುಡುಗಿದರು.

Advertisement

Udayavani is now on Telegram. Click here to join our channel and stay updated with the latest news.

Next