Advertisement

ಟೋಲ್‌ ಸಭೆ ಸಚಿವೆ ಜಯಮಾಲಾ ಬೇಜವಾಬ್ದಾರಿ ಹೇಳಿಕೆ: ಭಟ್‌

10:02 AM Dec 01, 2018 | Team Udayavani |

ಉಡುಪಿ: ಸ್ಥಳೀಯರಿಗೆ ಟೋಲ್‌ ವಿನಾಯಿತಿ ವಿಚಾರ ಕೇಂದ್ರ ಸರಕಾರದ ಕೈಯಲ್ಲಿದೆ ಎಂದು ಸಚಿವೆ ಜಯಮಾಲಾ ಅವರು ನೀಡಿರುವ ಪ್ರತಿಕ್ರಿಯೆ ಬೇಜವಾಬ್ದಾರಿತನದ್ದು ಎಂದು ಉಡುಪಿ ಶಾಸಕ ರಘುಪತಿ ಭಟ್‌ ಟೀಕಿಸಿದ್ದಾರೆ.

Advertisement

ಜಯಮಾಲಾ ಅವರು ಲೋಕೋಪಯೋಗಿ ಸಚಿವ ರೇವಣ್ಣ ಸಮಕ್ಷಮದಲ್ಲಿ ಕರೆದ ಟೋಲ್‌ಗೇಟ್‌ ಸಭೆ ವಿಫ‌ಲವಾಗಿದೆ. ರೇವಣ್ಣ ಅವರು ಕನಿಷ್ಠ 10 ಕಿ.ಮೀ. ವ್ಯಾಪ್ತಿಯ ಸ್ಥಳೀಯರಿಗೆ ವಿನಾಯಿತಿ ಕೊಡಿ ಎಂಬ ಬೇಡಿಕೆ ಸಲ್ಲಿಸುವ ಬದಲು ಕೇಂದ್ರ ಸರಕಾರವನ್ನು ದೂರಿದ್ದಾರೆ. ಗುತ್ತಿಗೆದಾರರ ಪರ ವಕಾಲತ್ತು ಮಾಡಿದ್ದಾರೆ. ರಾಜ್ಯದ ವಿವಿಧೆಡೆ ಸ್ಥಳೀಯರಿಗೆ ಟೋಲ್‌ ವಿನಾಯಿತಿ ನೀಡಿರುವುದನ್ನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಲ್ಲೇಖೀಸಿದಾಗ ಸಚಿವ ರೇವಣ್ಣ ಅಧಿಕಾರಿಯ ಮಾತನ್ನು ತಡೆದು “ನಿಮಗೆ ಅಧಿಕಾರ ಕೊಟ್ಟವರಾರು?’ ಎಂದು ಬೆದರಿಸಿದ್ದಾರೆ. ಟೋಲ್‌ ಸ್ಥಳೀಯ ಸಮಸ್ಯೆಯಾಗಿದೆ. ಉಡುಪಿ ಜಿಲ್ಲಾಡಳಿತ ನೂರಾರು ಪೊಲೀಸರನ್ನು ನಿಯೋಜಿಸಿ ಜನರ ಮೇಲೆ ದಬ್ಟಾಳಿಕೆ ಮಾಡುವುದನ್ನು ಸಹಿಸಲಾಗದು. ಜಿಲ್ಲಾಡಳಿತವೇ ಎದುರು ನಿಂತು ಸ್ಥಳೀಯರಿಂದ ಟೋಲ್‌ ಸಂಗ್ರಹ ಮುಂದುವರಿಸಿದರೆ ಸಂಸದರ ಜತೆಗೆ ಜಿಲ್ಲೆಯ ಎಲ್ಲ 5 ಶಾಸಕರು ಸೇರಿ ಹೋರಾಟ ನಡೆಸಲಿದ್ದೇವೆ ಎಂದು ಶಾಸಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next