Advertisement

ಉದ್ಯಮಿಯಿಂದ ಶ್ರೀಜೇಶ್‌ಗೆ ಒಂದು ಕೋ.ರೂ. ಬಹುಮಾನ

01:15 AM Aug 10, 2021 | Team Udayavani |

ತಿರುವನಂತಪುರ: ಪುರುಷರ ಹಾಕಿಯಲ್ಲಿ 41 ವರ್ಷಗಳ ಬಳಿಕ ಭಾರತ ಪದಕ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಗೋಲ್‌ಕೀಪರ್‌ ಪಿ.ಆರ್‌. ಶ್ರೀಜೇಶ್‌ ಅವರಿಗೆ ದುಬಾೖನಲ್ಲಿರುವ ಕೇರಳ ಮೂಲದ ಉದ್ಯಮಿಯೊಬ್ಬರು ಒಂದು ಕೋಟಿ ನಗದು ಬಹುಮಾನ ಘೋಷಿಸಿದ್ದಾರೆ.

Advertisement

ವಿಪಿಎಸ್‌ ಹೆಲ್ತ್‌ಕೇರ್‌ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ| ಸಂಶೀರ್‌ ವಯಲಿಲ್‌ ಅವರು ಶ್ರೀಜೇಶ್‌ಗೆ ಈ ನಗದು ಬಹುಮಾನ ನೀಡಲಿದ್ದಾರೆ.”ಒಲಿಂಪಿಕ್ಸ್‌ ನಲ್ಲಿ ಭಾರತ ಕಂಚಿನ ಪದಕ ಗೆಲ್ಲುವಲ್ಲಿ ಶ್ರೀಜೇಶ್‌ ಮಹತ್ತರ ಪಾತ್ರ ವಹಿಸಿದ್ದಾರೆ. ಭಾರತೀಯ ಹಾಕಿ ಕ್ರೀಡೆಗೆ ಅವರ ಕೊಡುಗೆಯನ್ನು ಗುರುತಿಸಿ ನಗದು ಬಹುಮಾನ ನೀಡಲು ಖುಷಿಪಡುತ್ತಿದ್ದೇನೆ’ ಎಂದು ವಯಲಿಲ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next