Advertisement

Horoscope: ಬಡವರಿಗೆ ವಿದ್ಯಾರ್ಜನೆ, ವಿವಾಹ, ಚಿಕಿತ್ಸೆ ಮೊದಲಾದ ಆವಶ್ಯಕತೆಗಳಿಗೆ ಧನ ಸಹಾಯ

07:35 AM Dec 25, 2023 | Team Udayavani |

ಮೇಷ: ಶುಭ ಸೂಚನೆಯೊಂದಿಗೆ  ಹೊಸ ಸಪ್ತಾಹ ಆರಂಭ. ಉದ್ಯೋಗ ಸ್ಥಾನದಲ್ಲಿ ಕೆಲಸಗಳ ಮರು ಹಂಚಿಕೆ. ಉದ್ಯಮ ನಿರ್ವಹ ಣೆಗೆದುರಾದ ಸಮಸ್ಯೆ ದೂರ. ಲಕ್ಷ್ಮೀ ಕಟಾಕ್ಷಕ್ಕೆ  ಗುರಿಯಾಗುವಿರಿ. ಉತ್ತರದ ಕಡೆಯಿಂದ ಬಂಧುಗಳ ಆಗಮನ.

Advertisement

ವೃಷಭ: ಪೂರ್ವಯೋಜನೆ ಯಂತೆ ಕೈಗೊಂಡ ಕ್ರಮ  ಸಪ್ತಾಹ ಆರಂಭಕ್ಕೆ ಸಂಬಂಧಪಟ್ಟ ವ್ಯವಸ್ಥೆಗಳು ಸುಗಮ. ಸರಕಾರಿ ನೌಕರರಿಗೆ ವರ್ಗಾವಣೆ ಖಚಿತ. ಲೇವಾದೇವಿ ವ್ಯವಹಾರದಲ್ಲಿ  ಅಲ್ಪ ಲಾಭ. ದೀರ್ಘಾವಧಿ ಉಳಿತಾಯ ಯೋಜನೆಯಲ್ಲಿ ಹೂಡಿಕೆ.

ಮಿಥುನ: ಅರ್ಹತೆಗೆ ಸರಿಯಾದ   ಗೌರವದ ಸ್ಥಾನ ಪ್ರಾಪ್ತಿ. ಉದ್ಯಮಿಗಳಿಗೆ ಸಂತೋಷ ತರುವ  ಯೋಜನೆಗಳು. ಸರಕಾರಿ  ನೌಕರರಿಗೆ ಹೆಚ್ಚಿದ ಜವಾಬ್ದಾರಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಮಕ್ಕಳ ವಿದ್ಯಾರ್ಜನೆ ಆಸಕ್ತಿ ಸುಧಾರಣೆಗೆ ಪ್ರಯತ್ನ.

ಕರ್ಕಾಟಕ: ಬಡವರಿಗೆ ವಿದ್ಯಾರ್ಜನೆ, ವಿವಾಹ, ಚಿಕಿತ್ಸೆ ಮೊದಲಾದ  ಆವಶ್ಯಕತೆಗಳಿಗೆ ಧನ ಸಹಾಯ. ಉದ್ಯೋಗದಲ್ಲಿ ವೇತನ ಏರಿಕೆ.ನೌಕರ ವರ್ಗಕ್ಕೆ ಮಾಲಕರ ಔದಾರ್ಯದ ನಡೆಯಿಂದ ಹರ್ಷ. ಹೊಸ ನೌಕರರರಿಗೆ ಮಾರ್ಗದರ್ಶನದ ಜವಾಬ್ದಾರಿ. ಮನೆ ನವೀಕರಣಕ್ಕೆ ಆರಂಭ.

ಸಿಂಹ: ಉದ್ಯೋಗ ಸ್ಥಾನದಲ್ಲಿ  ಪುನರಾರಂಭಗೊಂಡಿದ್ದ ಕಾಮ ಗಾರಿಗಳ  ಮುಕ್ತಾಯ.ಅಧಿಕಾರಿ ವರ್ಗಕ್ಕೆ ತೃಪ್ತಿ. ಉದ್ಯಮದ ಉತ್ಪನ್ನಗಳ  ಗುಣಮಟ್ಟ ಸುಧಾರಣೆ. ಯಂತ್ರೋಪಕರಣ  ಮಾರಾಟಗಾರರಿಗೆ ನಿರೀಕ್ಷೆ ಮೀರಿದ ವ್ಯಾಪಾರ. ಎಲ್ಲರ ಆರೋಗ್ಯ ಉತ್ತಮ.

Advertisement

ಕನ್ಯಾ: ಕ್ರಿಯಾಶೀಲತೆಗೆ ಸರಿಯಾದ ದೈವಾನುಗ್ರಹ ಇರುವುದರಿಂದಾಗಿ ಹಿನ್ನಡೆಯ ಅನುಭವವಾಗದು. ವಿಶಾಲ ಕಾರ್ಯವ್ಯಾಪ್ತಿಯಲ್ಲಿ ಉದ್ಯೋಗ ಮುಂದುವರಿಕೆ. ಸ್ವಂತ ವ್ಯವಹಾರದ ಸಂಬಂಧ ಸಣ್ಣ ಪ್ರವಾಸದ ಸಾಧ್ಯತೆ.

ತುಲಾ: ಮನೋಬಲ ವೃದ್ಧಿ ಯೊಂದಿಗೆ  ಕಾರ್ಯದ ವೇಗ ಹೆಚ್ಚಳ. ಕಾರ್ಯಕ್ಷೇತ್ರದಲ್ಲಿ ಪರಿಸ್ಥಿತಿ ಸುಧಾರಣೆ. ಸಂಗಾತಿಯ ಮನೋ ಧರ್ಮದೊಡನೆ ಉತ್ತಮ ಹೊಂದಾಣಿಕೆ. ಹಿರಿಯರ  ಆರೋಗ್ಯದಲ್ಲಿ ಗಣನೀಯ ಸುಧಾರಣೆ. ಹಿಂದಿನ ಸಹಪಾಠಿಗಳ ಭೇಟಿ.

ವೃಶ್ಚಿಕ: ಸಪ್ತಾಹ ಆರಂಭದಲ್ಲಿ ಸಂತೋಷ ತರುವ  ಬೆಳವ ಣಿಗೆಗಳು. ಸಂಸ್ಥೆಯ ಮುಖ್ಯಸ್ಥರಿಂದ ಯೋಗಕ್ಷೇಮ ವಿಚಾರಣೆ. ಗೃಹೋ ದ್ಯಮದ ಉತ್ಪನ್ನಗಳ ಕಡೆಗೆ ಆಕರ್ಷಿತರಾದ ಗ್ರಾಹಕರು. ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ.

ಧನು: ಕಳೆದ ಸಪ್ತಾಹದಲ್ಲಾದ ಸಣ್ಣಪುಟ್ಟ ಹಿನ್ನಡೆಗಳ ನಿವಾರಣೆ. ಉದ್ಯೋಗ ಸ್ಥಾನದಲ್ಲಿ  ಮುನ್ನಡೆ ನಿರಾತಂಕ. ಸಮಾಜ ಅಭಿವೃದ್ಧಿ ಮತ್ತು ಸುಧಾರಣೆಯ  ಕಾರ್ಯಕ್ರಮಗಳಲ್ಲಿ ಭಾಗಿ.   ಸಂಗಾತಿಯ ಆರೋಗ್ಯ ಸುಧಾರಣೆ.

ಮಕರ: ಸುತ್ತಲಿನ  ಪರಿಸರದಲ್ಲಿ ಗಮನಾರ್ಹ ಪರಿವರ್ತನೆ. ವೃತ್ತಿಸ್ಥಾನದಲ್ಲಿ ಕಡಿಮೆಯಾದ  ಒತ್ತಡಗಳು.  ಹೆಚ್ಚುವರಿ ಆದಾಯ  ಹೊಂದಲು  ಮುಂದುವರಿದ  ಪ್ರಯತ್ನ. ವಸ್ತ್ರ, ಸಿದ್ಧ ಉಡುಪು, ಆಭರಣ. ಕರಕುಶಲ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚಳ.

ಕುಂಭ: ಬಿಡುವಿರದ ಉದ್ಯೋಗ ದಲ್ಲಿ ನಿತ್ಯ ಬಂದೆರಗುವ ಹೊಸ ಹೊಣೆಗಾರಿಕೆಗಳು.ಉದ್ಯಮದ ಉತ್ಪನ್ನಗಳಿಗೆ  ಹೊಸ ಮರಾಟಗಾರರ  ಜಾಲ ಅನ್ವೇಷಣೆ. ಗ್ರಾಹಕರ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸುವ ಪ್ರಯತ್ನ. ಮಕ್ಕಳಿಗೆ ಸಮಾಧಾನದ ವಾತಾವರಣ.

ಮೀನ: ಹೊಸ ಸಪ್ತಾಹ ಆರಂಭದಲ್ಲಿ  ಪ್ರಗತಿಯ ವೇಗ ವರ್ಧನೆ. ವೃತ್ತಿಬಾಂಧವರಿಂದ ಉತ್ಸಾಹಪೂರ್ಣ ಸಹಕಾರ.  ಸರಕಾರಿ ಇಲಾಖೆಗಳಿಂದ ಸಕಾರಾತ್ಮಕ ಸ್ಪಂದನ. ಸರಕಾರಿ ನೌಕರರಿಗೆ ಸಾರ್ವಜನಿಕರಿಂದ ಪ್ರಶಂಸೆ.ಸಾಮಾ ಜಿಕ ಕ್ಷೇತ್ರದಲ್ಲಿ ವಿಶೇಷ ಗೌರವ.

Advertisement

Udayavani is now on Telegram. Click here to join our channel and stay updated with the latest news.

Next