Advertisement

Horoscope: ಉದ್ಯೋಗ ಸ್ಥಾನದಲ್ಲಿ ಹೊಸ ಸವಾಲುಗಳು ಇರಲಿದೆ

07:52 AM Sep 30, 2024 | Team Udayavani |

ಮೇಷ: ಕುಗ್ಗದ ಉತ್ಸಾಹದಲ್ಲಿ ಹೊಸ ಸಪ್ತಾಹ ಆರಂಭ. ಉದ್ಯೋಗ ಸ್ಥಾನದಲ್ಲಿ  ಸಮಾಧಾನ.  ಉದ್ಯಮಗಳ ನಡುವೆ  ಪ್ರಚಾರ ಸಮರ. ಹಿರಿಯರ  ಆರೋಗ್ಯದ ಕಡೆಗೆ ಗಮನ ಇರಲಿ. ವ್ಯವಹಾರದ ನಿಮಿತ್ತ ಅನಿವಾರ್ಯವಾದ ಪ್ರಯಾಣ.

Advertisement

ವೃಷಭ: ಹಿರಿಯ ಸರಕಾರಿ ಅಧಿಕಾರಿಗಳಿಗೆ ನಿರುತ್ಸಾಹ. ಖಾಸಗಿ ರಂಗದ ಉತ್ಪಾದನೆ ಹೆಚ್ಚಳ. ದೇವತಾ ಸಾನ್ನಿಧ್ಯಕ್ಕೆ  ಭೇಟಿ. ಹಿರಿಯರು, ಗೃಹಿಣಿಯರು ಮತ್ತು ಮಕ್ಕಳಿಗೆ  ಉಲ್ಲಾಸದ ವಾತಾವರಣ. ಲೇವಾದೇವಿ ವ್ಯವಹಾರಕ್ಕೆ ವಿರಾಮ.

ಮಿಥುನ: ವ್ಯವಹಾರದಲ್ಲಿ ಅಪಾರ ಜಾಗರೂಕತೆ ಇರಲಿ.  ಉದ್ಯೋಗ ಸ್ಥಾನದಲ್ಲಿ ಹೊಸ ಸವಾಲುಗಳು.  ಸ್ವಂತ ಉದ್ಯಮದ ಪ್ರಗತಿ ತೃಪ್ತಿಕರ. ಕೃಷ್ಯುತ್ಪನ್ನಗಳ ಮಾರಾಟದಿಂದ ಲಾಭ. ಮಕ್ಕಳ  ಅಧ್ಯಯನಾಸಕ್ತಿ ವೃದ್ಧಿಗೆ ನಿಲ್ಲದ ಪ್ರಯತ್ನ.

ಕರ್ಕಾಟಕ: ಪ್ರತಿಭೆ,  ಹಿರಿತನ ಉಳ್ಳವರಿಂದ ಹುದ್ದೆಗೆ ಶೋಭೆ.  ಉದ್ಯಮದ ಉತ್ಪಾದನೆಗಳ ಆಕರ್ಷಣೆ ವೃದ್ಧಿ.  ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ಹೆಚ್ಚಳ. ಹಳೆಯ ಸಾಲ ವಸೂಲಿಯಾಗಿ ನೆಮ್ಮದಿ.

ಸಿಂಹ: ಕ್ರಿಯಾಶೀಲ  ವ್ಯಕ್ತಿಗಳಿಗೆ  ಸಂತೃಪ್ತಿಯ ಭಾವನೆ. ಗ್ರಾಹಕರ ಪ್ರಚಾರದಿಂದ  ವ್ಯಾಪಾರಕ್ಕೆ ಪೋಷಣೆ. ಕಟ್ಟಡ ನಿರ್ಮಾಣ ಕಂಟ್ರಾಕ್ಟರರಿಗೆ ಕಾರ್ಮಿಕರ ಸಮಸ್ಯೆ.  ಲೇವಾದೇವಿ ವ್ಯವಹಾರದಲ್ಲಿ ನಷ್ಟ.ಬಂಧುಗಳ ಕುಟುಂಬದಲ್ಲಿ ಪಿತೃಕಾರ್ಯ.

Advertisement

ಕನ್ಯಾ: ಉದ್ಯೋಗ ಸ್ಥಾನದಲ್ಲಿ ಆಹ್ಲಾದದ ವಾತಾವರಣ. ಸ್ವಂತ ಉದ್ಯಮದಲ್ಲಿ ಗಣನಾರ್ಹ ಪ್ರಗತಿ. ಉದ್ಯೋಗಾಸಕ್ತರಿಗೆ  ಅಯಾಚಿತ  ಅವಕಾಶಗಳು ಲಭ್ಯ. ಕೃಷಿ ಭೂಮಿಯಲ್ಲಿ ಉತ್ತಮ ಬೆಳೆ. ಪತ್ನಿಯ ಕಡೆಯ ಬಂಧುಗಳ ಆಗಮನ..

ತುಲಾ: ಹೆಚ್ಚಿನ  ಸಮಸ್ಯೆಗಳಿಗೆ ಪರಿಹಾರ. ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ.  ಗೃಹೋಪಯೋಗಿ   ಸಾಮಗ್ರಿಗಳ ವ್ಯಾಪಾರಿಗಳಿಗೆ ಲಾಭ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ. ಕೀರ್ತನೆ, ಭಜನೆ, ಸತ್ಸಂಗಗಳಲ್ಲಿ  ಆಸಕ್ತಿ.

ವೃಶ್ಚಿಕ: ಎಲ್ಲ ವಿಧದ  ಬಾಧೆಗಳಿಂದ  ಬಿಡುಗಡೆ. ಉದ್ಯೋಗ ಸ್ಥಾನದಲ್ಲಿ  ವರಿಷ್ಠರಿಗೆ ಹರ್ಷ.  ಉದ್ಯಮ  ಭರದಲ್ಲಿ ಮುನ್ನಡೆ.   ಉತ್ಪನ್ನಗಳ ಗುಣಮಟ್ಟಕ್ಕೆ ಸಾಮಾಜಿಕರ ಶ್ಲಾಘನೆ. ಗೃಹೋದ್ಯಮ ಉತ್ಪನ್ನಗಳಿಗೆ ಅಧಿಕ ಬೇಡಿಕೆ.

ಧನು: ದಾಯಾದಿ ಕಲಹ ನಿವಾರಣೆ.  ಉದ್ಯೋಗ ಸ್ಥಾನದಲ್ಲಿ ಸಜ್ಜನರ ಸದ್ಭಾವನೆಗೆ ಪಾತ್ರರಾಗುವಿರಿ.  ಸಣ್ಣ ಪ್ರಮಾಣದ  ಉದ್ಯಮಗಳ ಅಭಿವೃದ್ಧಿ. ಹೈನುಗಾರಿಕೆ, ಜೇನು ವ್ಯವಸಾಯದಲ್ಲಿ ಪ್ರಗತಿ.ದಂಪತಿಗಳ ನಡುವೆ ಅನುರಾಗ ವೃದ್ಧಿ.

ಮಕರ: ಪ್ರಮುಖರ ಹೆಸರು ಕೆಡಿಸುವ ಹುನ್ನಾರ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಕೃಷ್ಯುತ್ಪನ್ನಗಳ ಮಾರಾಟದಿಂದ ಸಾಮಾನ್ಯಲಾಭ.ಹಣ್ಣು, ತರಕಾರಿ ವ್ಯಾಪಾರಿಗಳಿಗೆ ಆದಾಯ ವೃದ್ಧಿ.

ಕುಂಭ: ಹೊಸ ಆದಾಯ ಮೂಲಗಳ ಅನ್ವೇಷಣೆ.ಅಧಿಕಾರಿಗಳಿಗೆ ಅಪವಾದದ ಭೀತಿ. ಕೆಲವು ಉದ್ಯಮಗಳಲ್ಲಿ ನಿರೀಕ್ಷೆ ಮೀರಿದ ಪ್ರಗತಿ.  ಸೇವಾಕಾರ್ಯಗಳಲ್ಲಿ ಕೈಜೋಡಿಸಲು ಮನೆಮಂದಿಯ  ಸಹಕಾರ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ.

ಮೀನ: ಧರ್ಮ ಮಾರ್ಗದಲ್ಲಿ ಸಾಗಿ ಕಾರ್ಯಜಯ. ಉದ್ಯೋಗ ಸ್ಥಾನದಲ್ಲಿ ಅಜಾತಶತ್ರುತ್ವ. ಸರಕಾರಿ ಇಲಾಖೆ ನೌಕರರಿಂದ ಸಹಕಾರ. ಪಾಲುದಾರಿಕೆಯಲ್ಲಿ ಹೊಸ ವ್ಯವಹಾರ ಆರಂಭ. ಬಂಧುಗಳಿಗೆ ಆಪತ್ಕಾಲದಲ್ಲಿ ಸಹಾಯ.

Advertisement

Udayavani is now on Telegram. Click here to join our channel and stay updated with the latest news.

Next