Advertisement

Horoscope: ಈ ರಾಶಿಯವರ ಕುಟುಂಬದ ವಲಯದಲ್ಲಿ ಸ್ವಲ್ಪ ಏರುಪೇರಾದ ವಾತಾವರಣ ಇರಲಿದೆ

06:31 PM May 17, 2024 | Suhan S |

ಮೇಷ: ಉದ್ಯೋಗ ಸ್ಥಾನದಲ್ಲಿ  ಚುರುಕಿನ  ವಾತಾವರಣ. ಕೆಲವು ಬಗೆಯ  ಉದ್ಯಮ ಗಳಲ್ಲಿ ಸ್ವಲ್ಪ ಕಡಿಮೆಯಾದ  ಪೈಪೋಟಿ.. ಹಿತೈಷಿಗಳಿಂದ ಸಕಾಲಿಕ ನೆರವು ಲಭ್ಯ.ಮಹಿಳೆಯರ ಆರೋಗ್ಯದ ಕಡೆಗೆ ಗಮನ ಇರಲಿ.ಮನೆಗೆ ದೂರದ ಅತಿಥಿಗಳ ಆಗಮನ.

Advertisement

ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಗೌರವದ ಸ್ಥಾನ. ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಸ್ಥಾನ ಬದಲಾವಣೆ. ಖಾಸಗಿ ಉದ್ಯಮಗಳಲ್ಲಿ ಉತ್ಪಾದನೆ ಹೆಚ್ಚಳ. ಧಾರ್ಮಿಕ ಸಾಹಿತ್ಯ ಅಧ್ಯಯನದಲ್ಲಿ ಆಸಕ್ತಿ.

ಮಿಥುನ: ಅಕಾರಣವಾಗಿ ಹಗೆ ಸಾಧಿಸುವ ವಿಕೃತ ಮನಸ್ಕರಿಂದ ಪೀಡನೆ. ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ. ಸ್ವಂತ ಉದ್ಯಮದಲ್ಲಿ ಪ್ರಗತಿ ತೃಪ್ತಿಕರ. ಆಪ್ತರ ಹುರಿದುಂಬಿಸುವ ಮಾತುಗಳಿಂದ ಧೈರ್ಯ ವರ್ಧನೆ.

ಕರ್ಕಾಟಕ: ಉದ್ಯೋಗ ಸ್ಥಾನದಲ್ಲಿ ಪ್ರತಿಭೆ,  ಕಾರ್ಯಕ್ಷಮತೆಗೆ ಪ್ರಾಶಸ್ತ್ಯ  ಉದ್ಯಮದ ಉತ್ಪಾದನೆಗಳಲ್ಲಿ   ವೈವಿಧ್ಯ ಪಾಲನೆಯಿಂದ ಹೆಚ್ಚಿದ ಆಕರ್ಷಣೆ. ದೀರ್ಘಾವಧಿ ಹೂಡಿಕೆಯಲ್ಲಿ ಲಾಭ. ಎಲ್ಲ ಮನೆಮಂದಿಗೂ ಉಲ್ಲಾಸದ ವಾತಾವರಣ.

ಸಿಂಹ: ಪ್ರಗತಿ ನಿಧಾನವಾದಂತೆ ಕಂಡರೂ ಮುನ್ನಡೆಗೆ ಅಡ್ಡಿಯಿಲ್ಲ. ಉದ್ಯೋಗಸ್ಥರಿಗೆ ವೇತನ ಏರಿಕೆ. ಬಾಯ್ದೆರೆ ಪ್ರಚಾರದಿಂದ  ವ್ಯಾಪಾರ ವೃದ್ಧಿ. ಕಟ್ಟಡ ನಿರ್ಮಾಣ ಕಾಮಗಾರಿಗಳು ತ್ವರಿತ ಗತಿಯಲ್ಲಿ. ಮನೆಯಲ್ಲಿ ಮಂಗಲ ಕಾರ್ಯದ ಪ್ರಸ್ತಾವ.

Advertisement

ಕನ್ಯಾ: ಬಹುಪಾಲು  ನೆಮ್ಮದಿಯ ದಿನ. ಉದ್ಯೋಗ ಸ್ಥಾನದಲ್ಲಿ ಹಿತಕರ ವಾತಾವರಣ. ಸ್ವಂತ ಉದ್ಯಮದಲ್ಲಿ ಗಮನಾರ್ಹ ಪ್ರಗತಿ. ಉದ್ಯೋಗಾಸಕ್ತರನ್ನು ಅರಸಿ ಬರುವ  ಅವಕಾಶಗಳು.ಕೃಷಿ ಭೂಮಿಯಲ್ಲಿ ಉತ್ತಮ ಬೆಳೆ.

ತುಲಾ:  ಎಲ್ಲ ಸಮಸ್ಯೆಗಳಿಗೂ ಸರಿಯಾದ ಸರಿಯಾದ ಸಮಯದಲ್ಲಿ   ಪರಿಹಾರ.ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್‌ ಧನಪ್ರಾಪ್ತಿ.  ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಕೀರ್ತನೆ, ಭಜನೆ, ಸತ್ಸಂಗಗಳಲ್ಲಿ  ಆಸಕ್ತಿ.

ವೃಶ್ಚಿಕ: ಸಕಲ ಬಗೆಯ ವಿಘ್ನ ವಿಡೂxರಗಳಿಂದ ಬಿಡುಗಡೆ. ಉದ್ಯೋಗ ಸ್ಥಾನದಲ್ಲಿ  ಸ್ವಯಂ ಯೋಗ್ಯತೆಯಿಂದ  ಗೌರವ. ಉದ್ಯಮ  ಭರದಲ್ಲಿ ಮುನ್ನಡೆ. ಉತ್ಪನ್ನಗಳ ಗುಣಮಟ್ಟಕ್ಕೆ ಸಾಮಾಜಿಕರ ಶ್ಲಾಘನೆ. ಗೃಹೋದ್ಯಮ ಉತ್ಪನ್ನಗಳ ಜನಪ್ರಿಯತೆ ವೃದ್ಧಿ.

ಧನು: ಕುಟುಂಬದ ವಲಯದಲ್ಲಿ ಸ್ವಲ್ಪ ಏರುಪೇರಾದ ವಾತಾವರಣ. ಆತ್ಮೀಯರಿಂದ  ಸಕಾಲಿಕ ಸ್ಪಂದನ.  ಉದ್ಯೋಗ ಸ್ಥಾನದಲ್ಲಿ ಸದ್ಭಾವನೆಗೆ ಪಾತ್ರರಾಗುವಿರಿ. ಸಣ್ಣ ಪ್ರಮಾಣದ  ಉದ್ಯಮ ಅಭಿವೃದ್ಧಿ. ಹೈನುಗಾರಿಕೆ, ಜೇನು ವ್ಯವಸಾಯದಲ್ಲಿ ಆಸಕ್ತಿ.

ಮಕರ: ಉದ್ಯೋಗ ಸ್ಥಾನದಲ್ಲಿ ನೆಮ್ಮದಿ.ಉದ್ಯಮಿಗಳಿಗೆ ಶುಭದಿನ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಕೃಷ್ಯುತ್ಪನ್ನಗಳ ಮಾರಾಟದಿಂದ ಸಾಮಾನ್ಯಲಾಭ. ಹಣ್ಣು , ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ.

ಕುಂಭ:  ಹಲವು ಮೂಲಗಳಿಂದ ಆದಾಯ ವೃದ್ಧಿ.  ಸರಕಾರಿ ನೌಕರರಿಗೆ ವರ್ಗಾವಣೆಯಿಂದ ಅನುಕೂಲ. ಉದ್ಯಮಗಳಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ಧಾರ್ಮಿಕ ಕ್ಷೇತ್ರದ ಸೇವಾಕಾರ್ಯಗಳಲ್ಲಿ ಕೈಜೋಡಿಸಲು ಮನೆಮಂದಿಯ  ಸಹಕಾರ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ.

ಮೀನ:  ಗುರುಕೃಪೆಯಿಂದ ಶನಿಮಹಾತ್ಮನ ಪೀಡೆ ಶಮನ. ಉದ್ಯೋಗ ಸ್ಥಾನದ ಆತಂಕ ದೂರ. ಸರಕಾರಿ ಕಚೇರಿಗಳಲ್ಲಿ ಅನುಕೂಲಕರ ಸ್ಪಂದನ. ದೇವಾಲಯದ ಅಭಿವೃದ್ಧಿ ಕಾರ್ಯ ಮುಂದುವರಿಕೆ. ಹಿರಿಯರ, ಗೃಹಿಣಿಯರ ಆರೋಗ್ಯ ಉತ್ತಮ. ಸಣ್ಣ ಪ್ರಯಾಣ ಸಂಭವ.

Advertisement

Udayavani is now on Telegram. Click here to join our channel and stay updated with the latest news.

Next