Advertisement

Horoscope: ಈ ರಾಶಿಯವರಿಗೆ ಉದ್ಯಮದ ಎಲ್ಲ ವಿಭಾಗಗಳಲ್ಲೂ ಲಾಭದಾಯಕ ಪ್ರಗತಿಯಾಗಲಿದೆ

06:49 PM Mar 31, 2024 | Suhan S |

ಮೇಷ: ಹೆಚ್ಚಿನ  ಬಯಕೆಗಳು ಈಡೇರುವ ದಿನ. ಉದ್ಯೋಗ ಕ್ಷೇತ್ರದಲ್ಲಿ  ಹಿತಕರ ವಾತಾವರಣ.  ಹೊಸ ಉದ್ಯಮಗಳಲ್ಲಿ ಹೂಡುವಾಗ  ಎಚ್ಚರ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ.  ಎಲ್ಲರ ಆರೋಗ್ಯ ಉತ್ತಮ.

Advertisement

ವೃಷಭ: ಉದ್ಯೋಗಸ್ಥರಿಗೆ ಶುಭವಾರ್ತೆ. ಹೊಸ ವ್ಯವಹಾರದಲ್ಲಿ ತೃಪ್ತಿಕರ ಲಾಭ. ಕೃಷ್ಯುತ್ಪಾದನೆ ಮಾರಾಟದಿಂದ ಮಧ್ಯಮ ಲಾಭ. ಸರಕಾರಿ ಅಧಿಕಾರಿಗಳಿಗೆ  ಹೆಚ್ಚುವರಿ ಜವಾಬ್ದಾರಿಗಳು. ಹತ್ತಿರದ ದೇವತಾ ಕ್ಷೇತ್ರಕ್ಕೆ ಭೇಟಿ‌.

ಮಿಥುನ:  ಧೈರ್ಯದ ಉಪಕ್ರಮದಿಂದ ಪರಿಸ್ಥಿತಿ ಬದಲಾವಣೆ. ಉದ್ಯೋಗ ಸ್ಥಾನದಲ್ಲಿ   ಹಿತಶತ್ರುಗಳ  ಕಾಟ. ಧ್ಯಾನ, ಸ್ವಾಧ್ಯಾಯ ಗಳಲ್ಲಿ ಮನಸ್ಸು. ಆರ್ಥಿಕ ಅಭಿವೃದ್ಧಿಯ ಹೊಸ ಪರ್ವ ಆರಂಭ. ಸಂಗಾತಿಯಿಂದ ಉತ್ತಮ ಸಹಕಾರ.

ಕರ್ಕಾಟಕ: ದೇವತಾರ್ಚನೆಯಿಂದ  ಆನಂದಾನುಭೂತಿ.  ಉದ್ಯೋಗ ಸ್ಥಾನದಲ್ಲಿ ಸಹಕಾರ.  ಉದ್ಯಮ ವಿಸ್ತರಣೆ ಪ್ರಕ್ರಿಯೆ ಆರಂಭ. ಅವಿವಾಹಿತರಿಗೆ ಯೋಗ್ಯ ನೆಂಟಸ್ತಿಕೆ ಕೂಡಿ ಬರುವ ಸೂಚನೆ.   ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ.

ಸಿಂಹ: ಹಿತಶತ್ರುಗಳ ಪಿತೂರಿಗೆ ಸೋಲು. ಉದ್ಯಮದ ಎಲ್ಲ ವಿಭಾಗಗಳಲ್ಲೂ ಲಾಭದಾಯಕ ಪ್ರಗತಿ. ಉತ್ಪನ್ನಗಳ  ಗುಣಮಟ್ಟ ಹಾಗೂ  ಜನಪ್ರಿಯತೆ ವೃದ್ಧಿ. ಕೃಷ್ಯುತ್ಪನ್ನಗಳ ಮಾರಾಟದಿಂದ ಉತ್ತಮ ಲಾಭ.

Advertisement

ಕನ್ಯಾ: ಕಾರ್ಯದಕ್ಷತೆಗೆ ಮೇಲಿನವರಿಂದ ಮೆಚ್ಚುಗೆಯ ಮಾತುಗಳು. ಕ್ಷುದ್ರ  ಆಮಿಷಗಳಿಗೆ ಬಲಿಯಾಗದಿರಿ ಸಣ್ಣ ಉದ್ಯಮಗಳಿಗೆ ಒಳ್ಳೆಯ ದಿನ. ಕೃಷಿಭೂಮಿ ಅಭಿವೃದ್ಧಿಗೆ ಕಾಲಮಿತಿಯ ಯೋಜನೆ.ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ.

ತುಲಾ:  ಭವಿಷ್ಯದ ಕುರಿತು ಸಕಾರಾತ್ಮಕ ಚಿಂತನೆ ಇರಲಿ. ದೈವಾನುಗ್ರಹ ಉತ್ತಮ. ಉದ್ಯೋಗದಲ್ಲಿ ಸ್ವಲ್ಪ ಸುಧಾರಣೆ. ಉದ್ಯಮಿಗಳಿಗೆ  ನ್ಯಾಯಾಲಯದಲ್ಲಿ ಜಯ. ಮಹಿಳೆಯರ ಸ್ವಾವಲಂ ಬನೆ ಯೋಜನೆಗಳಿಗೆ ಲಾಭದಾಯಕ  ಪ್ರಗತಿ.

ವೃಶ್ಚಿಕ: ಉದ್ಯೋಗದಲ್ಲಿ ಹೇಳುವಂತಹ  ಉನ್ನತಿಯಾಗದಿದ್ದರೂ  ಪ್ರಗತಿಗೆ ಕೊರತೆ ಇರಲಾರದು. ಮಕ್ಕಳ ಉದ್ಯಮದ   ಕೀರ್ತಿ ವರ್ಧನೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ದೂರದಲ್ಲಿರುವ ಬಂಧುಗಳ ಆಗಮನ.

ಧನು: ಉದ್ಯೋಗ ಸ್ಥಾನದಲ್ಲಿ  ಅನುಕೂಲ ವಾತಾವರಣ. ಸ್ವಂತ ಉದ್ಯಮ ಸ್ಥಿರವಾದ  ಪ್ರಗತಿ. ದೀರ್ಘಾವಧಿ ಯೋಜನೆಗಳಲ್ಲಿ  ಹೂಡಿಕೆಯಿಂದ ಲಾಭ. ಲೇವಾದೇವಿ ವ್ಯವಹಾರದಲ್ಲಿ ನಷ್ಟ ಸಂಭವ. ಗೃಹೋದ್ಯಮಗಳಿಂದ ತೃಪ್ತಿಕರ ಲಾಭ.

ಮಕರ: ದಾಖಲೆಯ ಸಮಯದಲ್ಲಿ ಕಾರ್ಯ ಮುಗಿಸಿದ ತೃಪ್ತಿ. ವಸ್ತ್ರ, ಉಡುಪು, ಅಲಂಕಾರ ಸಾಮಗ್ರಿ ವ್ಯಾಪಾರಿಗಳಿಗೆ ಅಧಿಕ  ಲಾಭ.  ತೋಟಗಾರಿಕೆಯಲ್ಲಿ ಆಸಕ್ತಿ. ಹತ್ತಿರದ  ದೇವಾಲಯಕ್ಕೆ ಸಂದರ್ಶನ. ಹಿರಿಯರು, ಮಹಿಳೆಯರು, ಮಕ್ಕಳಿಗೆ ನೆಮ್ಮದಿಯ ದಿನ .

ಕುಂಭ: ಮುಂದಿನ ಕಾರ್ಯಗಳಿಗೆ ಸಜ್ಜು.  ಉದ್ಯೋಗ, ವ್ಯವಹಾರಗಳ  ಆತಂಕ ದೂರ.  ಸಹೋದ್ಯೋಗಿಗಳಿಗೆ ಮಾರ್ಗ ದರ್ಶನ. ಸೇವಾ ಚಟುವಟಿಕೆಗಳಲ್ಲಿ ಪಾಲು ಗೊಳ್ಳುವಿರಿ. ಹತ್ತಿರದ ದೇವತಾ ಕ್ಷೇತ್ರಕ್ಕೆ ಭೇಟಿ.

ಮೀನ:  ಉದ್ಯೋಗದಲ್ಲಿ ಯಶಸ್ಸು. ಸರಕಾರಿ ನೌಕರರ ಪೂರ್ಣ ಸಹಕಾರ. ದಾಯಾದಿಗಳ ಮನೆಯಲ್ಲಿ ಶುಭಕಾರ್ಯ. ಸಾಮಾಜಿಕ ಕಾರ್ಯಕ್ಕೆ ಮನೆಮಂದಿಯ ಉತ್ತೇಜನ.ಕೃಷಿಕ್ಷೇತ್ರಕ್ಕೆ ಕಾಲಿಡಲು ಮಾನಸಿಕ ಸಿದ್ಧತೆ. ಎಲ್ಲರ ಆರೋಗ್ಯ ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next