Advertisement

Daily Horoscope: ಈ ರಾಶಿಯವರಿಗಿಂದು ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ವೃದ್ಧಿ ಆಗಲಿದೆ

07:39 AM Jan 04, 2024 | Team Udayavani |

ಮೇಷ: ದಿನವಿಡೀ  ಮಾಡಿದರೂ ಮುಗಿಯದಷ್ಟು ಕೆಲಸಗಳು.ಉದ್ಯೋಗಸ್ಥರ ಪಾಲಿಗೆ ಒದಗುವ ಹೆಚ್ಚುವರಿ ಜವಾಬ್ದಾರಿಗಳು. ಸ್ವಂತ ವ್ಯವಹಾರಸ್ಥರಿಗೆ ಪ್ರಾರಂಭದ ಹಂತದಲ್ಲಿ ಯಶಸ್ಸು. ವೃತ್ತಿಪರರಿಗೆ ನಿರಂತರ ಒತ್ತಡ. ಸಂಸಾರದಲ್ಲಿ ಸಾಮರಸ್ಯ ವೃದ್ಧಿ.

Advertisement

ವೃಷಭ: ಹೆಜ್ಜೆಹೆಜ್ಜೆಗೂ  ಪರೀಕ್ಷೆಯಿರುವುದರಿಂದ ಸಾವಧಾನದ ನಡೆಯೇ ಲೇಸು.ಉದ್ಯೋಗಪತಿಗಳು ಮತ್ತು ಸ್ವಂತ ವ್ಯವಹಾರಸ್ಥರು  ಹಿತಶತ್ರು ಗಳ ಕುರಿತು ಎಚ್ಚರವಾಗಿರಲಿ. ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ.

ಮಿಥುನ: ವಂಚಕರೇ ತುಂಬಿರುವ ವಾತಾವರಣದಲ್ಲಿ  ಸಜ್ಜನರ  ಸೋಗಿನ  ಗೋಮುಖ ವ್ಯಾಘ್ರರ ಬಗ್ಗೆ ಎಚ್ಚರ. ಪಶುಸಂಗೋಪನೆ, ಹೈನುಗಾರಿಕೆಯವರಿಗೆ ಆದಾಯಮಧ್ಯಮ. ತರಕಾರಿ, ಹಣ್ಣಿನ ವ್ಯಾಪಾರಿಗಳಿಗೆ ಉತ್ತಮ ಆದಾಯ. ಮನೆಯವರ ಸಹಕಾರ .

 ಕರ್ಕಾಟಕ: ಸಂಸಾರದಲ್ಲಿ ಎಲ್ಲರಿಗೂ ಆರೋಗ್ಯ ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ಯಥಾ ರೀತಿಯ  ವಾತಾವರಣ.ಉದ್ಯಮಕ್ಕೆ ಹೊಸ ಪಾಲುದಾರರ ಸೇರ್ಪಡೆ ಬೇಡ. ಉತ್ಪಾದನೆಗಳಿಗೆ ಒಳ್ಳೆಯ ಬೇಡಿಕೆಯಿಂದ  ಆದಾಯ ವೃದ್ಧಿ.  ಮಕ್ಕಳಿಂದ ಶುಭ ಸುದ್ದಿ.

ಸಿಂಹ: ಎಲ್ಲ   ಕ್ಷೇತ್ರಗಳಲ್ಲೂ ಕ್ಷಿಪ್ರಗತಿಯ ಕ್ರಮಗಳು. ಉದ್ಯೋಗ ಕ್ಷೇತ್ರದಲ್ಲಿ ಮೇಲಿನವರಿಂದ ಶ್ಲಾಘನೆ. ವಸ್ತ್ರ , ಆಭರಣ ವ್ಯಾಪಾರಿಗಳಿಗೆ ಆದಾಯ ಹಾಗೂ ಲಾಭ ವೃದ್ಧಿ. ಉತ್ಪಾದನಾ ರಂಗದವರಿಗ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡುವ ಸವಾಲು.

Advertisement

ಕನ್ಯಾ: ಎಲ್ಲರಿಗೂ  ಉತ್ತಮ ಆರೋಗ್ಯ ಮತ್ತು ಆನಂದದ ಅನುಭವ. ಕುಟುಂಬದ ಹಿತ ಚಿಂತಕರ ಭೇಟಿ.    ಹಿರಿಯರಿಂದ ವ್ಯವಹಾರಕ್ಕೆ ಅನುಕೂಲವಾದ ಸೂಕ್ತ ಸಲಹೆ. ಪಾಲುದಾರಿಕೆ ವ್ಯವಹಾರದಲ್ಲಿ  ಲಾಭ ವೃದ್ಧಿ. ದೇವತಾ ಸಾನ್ನಿಧ್ಯಕ್ಕೆ ಭೇಟಿ.

ತುಲಾ: ಕಾಗದದ ಹುಲಿ ಯಂತಹ ಸಮಸ್ಯೆಗಳಿಗೆ ಹೆದರಬೇಕಿಲ್ಲ. ನ್ಯಾಯಾಲಯ ವ್ಯವಹಾರ ತೀರ್ಮಾನದಲ್ಲಿ  ವಿಳಂಬ. ಪರಿಸರ ರಕ್ಷಣೆಯ ಕಾರ್ಯ ಗಳಲ್ಲಿ ಆಸಕ್ತಿ. ಹಿರಿಯರ ಆರೋಗ್ಯದ ಕಡೆಗೆ  ಲಕ್ಷ್ಯವಿರಲಿ.

ವೃಶ್ಚಿಕ: ಗತಕಾಲದ ಸ್ಮರಣೆಯಲ್ಲಿ ಕೊರಗದೆ ವರ್ತಮಾನದಲ್ಲಿ ಬದುಕುವುದೊಂದೇ ಕಣ್ಣೆ ದುರಿನ ದಾರಿ. ಅಪೇಕ್ಷಿತ  ಧನಸಹಾಯ ಸಕಾಲದಲ್ಲಿ ಲಭ್ಯ. ಬಂಧುವರ್ಗದಿಂದ ಶುಭವಾರ್ತೆ. ಗೃಹೋದ್ಯಮದ  ಉತ್ಪಾದನೆ ಗಳಿಗೆ ಒಳ್ಳೆಯ ಬೇಡಿಕೆ.

ಧನು: ಎಲ್ಲ ರಂಗಗಳಲ್ಲೂ ತೃಪ್ತಿಕರ ಮುನ್ನಡೆ ಉದ್ಯೋಗ ಕ್ಷೇತ್ರದಲ್ಲಿ ವಿವಿಧ ಅವಕಾಶ ಗಳು ಲಭ್ಯ. ಮೇಲಧಿಕಾರಿಗಳ  ಮತ್ತು ಸಹಕಾರಿಗಳ ಮೆಚ್ಚುಗೆ. ಹಿರಿಯರ ಆರೋಗ್ಯದಲ್ಲಿ  ಸುಧಾರಣೆ. ಮನೆಗೆ  ಅತಿಥಿಗಳ ಆಗಮನ.

ಮಕರ: ಉದ್ಯೋಗ ಕ್ಷೇತ್ರವನ್ನು ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ. ಎಲ್ಲ ಸಮಸ್ಯೆಗಳಿಗೆ ಅಪೇಕ್ಷಿತ ರೀತಿಯಲ್ಲಿ  ಸಮಾಧಾನ. ವೃತ್ತಿ ಪರರಿಗೆ ನಿಗದಿತ ಸಮಯದಲ್ಲಿ ಕೆಲಸ ಮುಗಿಸುವ ಒತ್ತಡದಿಂದ ಬಿಡುಗಡೆ. ದೇವರ ಪೂರ್ಣಾನುಗ್ರಹ ಪ್ರಾಪ್ತಿ.

ಕುಂಭ: ತಪ್ಪಿಸಿಕೊಳ್ಳ ಲಾರದ   ಸಮಾಜ  ಸೇವೆಯ  ಸೆಳೆತ. ನಾಮಸಂಕೀರ್ತನೆ, ಸತ್ಸಂಗ, ಧ್ಯಾನಗಳಲ್ಲಿ ಆಸಕ್ತಿ. ರಕ್ಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸು ತ್ತಿರುವವರಿಗೆ ಇನ್ನಷ್ಟು ಹುರುಪು. ಸ್ವಂತ ಉದ್ಯಮ ಉತ್ಪನ್ನಗಳ ಜನಪ್ರಿಯತೆ ವೃದ್ಧಿ.

ಮೀನ: ಅನೇಕ ತಪಸ್ಸುಗಳ ಹಾಗೂ ಶುಭಫ‌ಲಗಳ ದಿನ. ಸರಕಾರಿ ಕಾರ್ಯಾಲಯಗಳಲ್ಲಿ   ಕಾರ್ಯ  ಸುಗಮ. ಅಧಿಕಾರಿ ಗಳಿಂದ ಸಕಾರಾತ್ಮಕ ಸ್ಪಂದನ. ಸಮಾಜದಲ್ಲಿ ಗೌರವ ವೃದ್ಧಿ. ನಿರ್ಮಾಣ ಕಾರ್ಯಗಳಿಗೆ ಒದಗಿದ್ದ ವಿಘ್ನಗಳಿಂದ ಬಿಡುಗಡೆ.

Advertisement

Udayavani is now on Telegram. Click here to join our channel and stay updated with the latest news.

Next