Advertisement

Horoscope: ಸೊಸೆಯ ಆಗಮನದಿಂದ ಸೌಭಾಗ್ಯ ಪ್ರಾಪ್ತಿ

07:32 AM Dec 27, 2023 | Team Udayavani |

ಮೇಷ: ಚುರುಕು ಬುದ್ಧಿಶಕ್ತಿಯನ್ನು ಇನ್ನಷ್ಟು ಹರಿತಗೊಳಿಸುವ ಪ್ರಸಂಗಗಳು.ಉದ್ಯೋಗ ಸ್ಥಾದಲ್ಲಿ ಹೆಚ್ಚು ವ್ಯತ್ಯಾಸ ಇರದು. ಹೊಟೇಲ್‌ ಉದ್ಯಮಿಗಳಿಗೆ ಹೊಸ ಸಮಸ್ಯೆಗಳು. ಪಶ್ಚಿಮ ದೇಶದಲ್ಲಿರುವ ಬಂಧುಗಳೊಡನೆ ದೂರವಾಣಿಯಲ್ಲಿ ಸಂಭಾಷಣೆ.

Advertisement

ವೃಷಭ: ರೂಪಿಸಲಾಗಿರುವ ಯೋಜನೆಗಳನ್ನು ಒಂದೊಂದಾಗಿ ಕಾರ್ಯಗತಗೊಳಿಸುವ ಪ್ರಯತ್ನ. ಉದ್ಯೋಗಸ್ಥರಿಗೆ ಹೊಸ ಅವಕಾಶಗಳು ತೆರೆದುಕೊಳ್ಳುವ ದಿನ. ಖಾದಿಯ ಸಿದ್ಧ ಉಡುಪುಗಳು ಹಾಗೂ ವಸ್ತ್ರ ವ್ಯಾಪಾರಿಗಳಿಗೆ ಹೇರಳ ಲಾಭ.

ಮಿಥುನ: ದೀರ್ಘ‌ ಕಾಲದಿಂದ ಮಂದಗತಿಯಲ್ಲಿ ಸಾಗುತ್ತಿರುವ ಯೋಜನೆಗಳನ್ನು ತ್ವರಿತಗೊಳಿಸುವ ಪ್ರಕ್ರಿಯೆ ಆರಂಭ. ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ. ತಪ್ಪು ತಿಳಿವಳಿಕೆಯಿಂದ ಅನವಶ್ಯ ಕಲಹ. ಅಪಾತ್ರರಿಗೆ ಸಲಹೆ ನೀಡುವುದರಿಂದ ಅವಮಾನ.

ಕರ್ಕಾಟಕ: ಸರಳ ವಿಧಾನವನ್ನು ಅನುಸರಿಸುವುದರಿಂದ ಕಾರ್ಯ ಸುಲಭ.ಉದ್ಯೋಗಸ್ಥರಿಗೆ ತಡವಾಗಿ ವೇತನ ಏರಿಕೆ. ಉದ್ಯಮಗಳಿಗೆ ಸರಕಾರಿ ಸಬ್ಸಿಡಿ ಕೈಸೇರಲು ವಿಳಂಬ. ಸರಕಾರಿ ಆಸ್ಪತ್ರೆಗಳ ಸುಧಾರಣೆಗೆ ರಾಜಕಾರಣಿಗಳ ನಿರಾಸಕ್ತಿ.

ಸಿಂಹ: ಕಾರ್ಯರಂಗದಲ್ಲಿ ಶೀಘ್ರಗತಿಯಲ್ಲಿ ಸಾಗುವ ಪ್ರಯತ್ನ. ಒಂದಕ್ಕಿಂತ ಹೆಚ್ಚು ವ್ಯವಹಾರಗಳಲ್ಲಿ ಗಮನವನ್ನು ಕೇಂದ್ರೀಕರಿಸುವ ಆವಶ್ಯಕತೆ. ಉದ್ಯೋಗಸ್ಥರಿಗೆ ಘಟಕದ ನೇತೃತ್ವ ಲಭ್ಯ. ಉದ್ಯಮಕ್ಕೆ ಹೊಸ ರೂಪ ನೀಡುವ ಪ್ರಕ್ರಿಯೆ ಆರಂಭ.

Advertisement

ಕನ್ಯಾ: ವೃತ್ತಿಯಲ್ಲಿ ಪರಿಣತಿ ಸಾಧಿಸುವ ಪ್ರಯತ್ನ ಸಾರ್ಥಕ. ಹೊಸ ಕಾರ್ಯಕ್ಷೇತ್ರದಲ್ಲಿ ಅನುಕೂಲದ ವಾತಾವರಣ. ಕಾರ್ಯನಿಷ್ಠೆಗೆ ಮಾಲಕರಿಂದ ಶ್ಲಾಘನೆ. ಹಿರಿಯರ ಆಸ್ತಿಯಲ್ಲಿ ಹೊಸ ಬಗೆಯ ಕೃಷಿ ಆರಂಭ.ಶಾಶ್ವತ ನೀರಾವರಿ ಒದಗಿಸುವ ಪ್ರಯತ್ನದಲ್ಲಿ ಮುನ್ನಡೆ.

ತುಲಾ: ಸಾಲುಸಾಲಾಗಿ ಬರುವ ಸವಾಲುಗಳೆಲ್ಲವನ್ನೂ ಮೆಟ್ಟಿ ನಿಂತು ಮುಂದೆ ಸಾಗಬೇಕಾದ ಸಂದರ್ಭ. ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ. ಉದ್ಯಮಿಗಳಿಗೆ ಎದುರಾಳಿಗಳಿಂದ ಮಾಮೂಲು ಪೈಪೋಟಿ.ಲೇವಾದೇವಿ ವ್ಯವಹಾರದಿಂದ ದೂರವಿರಿ.

ವೃಶ್ಚಿಕ: ಸದ್ಯದ ಪರಿಸ್ಥಿತಿ ಎಲ್ಲ ರೀತಿಯಲ್ಲೂ ಉತ್ತಮ. ಉದ್ಯೋಗಸ್ಥರ ಸ್ಥಾನ ಗೌರವಕ್ಕೆ ಚ್ಯುತಿಯಾಗದು. ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆಯ ಆತಂಕ. ರಾಜಕಾರಣಿಗಳಿಗೆ ಕೊಂಚ ಇಕ್ಕಟ್ಟಿನ ಪರಿಸ್ಥಿತಿ. ಸೊಸೆಯ ಆಗಮನದಿಂದ ಸೌಭಾಗ್ಯ ಪ್ರಾಪ್ತಿ.

ಧನು: ನಿಮ್ಮಂತಹ ಜನ್ಮಜಾತ ಉದ್ಯಮಶೀಲರಾದವರಿಗೆ ಆಲಸ್ಯದ ಬಾಧೆ ಇರುವುದಿಲ್ಲ. ಉದ್ಯೋಗಸ್ಥರಿಗೆ ಘಟಕದ ಕಾರ್ಯ ನಿರ್ವಹಣೆಯನ್ನು ಸುಧಾರಿಸುವ ಜವಾಬ್ದಾರಿ.ಉದ್ಯಮದ ವೈವಿಧಿಕರಣ ಯೋಜನೆ ಕಾರ್ಯಾರಂಭ.

ಮಕರ: ಏಳೂವರೆ ಶನಿಯ ಕೊನೆಯ ಹಂತದಲ್ಲಿ ಆಗಾಗ ಉದ್ಭವಿಸುವ ಸಂದಿಗ್ಧ ಪರಿಸ್ಥಿತಿಗಳು. ಉದ್ಯೋಗಸ್ಥರ ಕಾರ್ಯಸಾಮರ್ಥ್ಯ ಪರೀಕ್ಷೆಗಳಲ್ಲಿ ವಿಜಯ. ಕೆಲವರ ಸಂಶಯಾಸ್ಪದ ನಡವಳಿಕೆಯಿಂದ ಬಂಧುವರ್ಗದಲ್ಲಿ ವೈಷಮ್ಯ.

ಕುಂಭ: ಸಪ್ತಾಹದ ಮಧ್ಯಭಾಗದಲ್ಲಿ ನಿಲ್ಲದೆ ಸಾಗುವ ಹಲವು ಬಗೆಯ ಕೆಲಸ, ಕಾರ್ಯಗಳು. ಉದ್ಯೋಗಸ್ಥರಿಗೆ ಯಥಾರೀತಿಯ ಅನುಭವ. ಸರಕಾರಿ ನೌಕರರಿಗೆ ನಿಶ್ಚಿಂತೆಯ ಅನುಭವ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆಯಲ್ಲಿ ಲಾಭ.

ಮೀನ: ಸಪ್ತಾಹ ಪ್ರಾರಂಭದ ದಿನದ ಅನುಭವಗಳ ಮುಂದುವರಿಕೆ. ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಸೇವಾ ರೂಪದ ಕಾರ್ಯಗಳು ಇಲಾಖೆಯವರ ಸಹಕಾರದಿಂದ ಯಶಸ್ವಿ. ಕೊಂಚ ಕಾಲದಿಂದ ನಿಲ್ಲಿಸಿದ್ದ ಉದ್ಯಮ ಮತ್ತೆ ಪ್ರಾರಂಭ. ದೇವತಾ ಸನ್ನಿಧಾನಕ್ಕೆ ಭೇಟಿ. ಪರಿಸರ ಸುಧಾರಣೆಗೆ ಸಂಂಬಂಧಪಟ್ಟ ಸಾಮೂಹಿಕ ಕಾರ್ಯಗಳಲ್ಲಿ ಆಸಕ್ತಿ. ಕುಟುಂಬದ ಹಿರಿಯ ವ್ಯಕ್ತಿಯ ಆಗಮನ.

Advertisement

Udayavani is now on Telegram. Click here to join our channel and stay updated with the latest news.

Next