Advertisement

ಇಂದಿನ ಗ್ರಹಬಲ: ಹೇಗಿದೆ ಇಂದಿನ ರಾಶಿ ಭವಿಷ್ಯ

07:33 AM Dec 24, 2020 | keerthan |

24-12-2020

Advertisement

ಮೇಷ: ಸಾಂಸಾರಿಕವಾಗಿ ಕೆಲವೊಂದು ವಿಚಾರಗಳನ್ನು ಅನಾವಶ್ಯಕವಾಗಿ ಯೋಚಿಸುವಂತಾಗಲಿದೆ. ಹಿರಿಯರ ಜಂಜಾಟದಿಂದ ಆಗಾಗ ಮಾನಸಿಕವಾಗಿ ಕಿರಿಕಿರಿಯನ್ನು ಅನುಭವಿಸುವ ಪರಿಸ್ಥಿತಿಯ ಎದುರಾದೀತು. ಶುಭವಿದೆ.

ವೃಷಭ: ನಿಮ್ಮ ಕ್ರಿಯಾಶೀಲತೆ, ಪ್ರೌಢಿಮೆ, ಪರಿಶ್ರಮಗಳನ್ನು ಹಾಕಿರಿ. ಅದರ ಫ‌ಲವು ನಿಮಗೆ ದೊರಕಲಿದೆ. ಬದುಕಿನ ಕಷ್ಟನಷ್ಟಗಳ ಅನುಭವವು ನಿಮಗೆ ಪಾಠವಾದೀತು. ಆರ್ಥಿಕ ಸ್ಥಿತಿಯು ಅಭಿವೃದ್ಧಿಯಾಗುತ್ತಲೇ ಹೋಗಲಿದೆ.

ಮಿಥುನ: ಕಾರ್ಯರಂಗದಲ್ಲಿ ಪರಿಚಯಸ್ಥರಿಂದಲೇ ಕಾರ್ಯಸಾಧನೆಯಾಗಲಿದೆ. ನಿಮ್ಮ ಪ್ರಯತ್ನ ಬಲ, ಆತ್ಮವಿಶ್ವಾಸ ಸದ್ಯದಲ್ಲೇ ಫ‌ಲ ನೀಡಲಿದೆ. ಮಾನಸಿಕವಾಗಿ ಧೈರ್ಯವನ್ನು ಕಳೆದುಕೊಳ್ಳದಿರಿ. ಸಹನೆ ಇರಲಿ.

ಕರ್ಕ: ಯೋಗ್ಯ ವಯಸ್ಕರಿಗೆ ಒಂಟಿತನದ ಕಷ್ಟ ಸದ್ಯದಲ್ಲೇ ನಿವಾರಣೆಯಾಗಲಿದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ವೃತ್ತಿ ಭವಿಷ್ಯವನ್ನು ನೀವೇ ನಿರ್ಧರಿಸುವ ಸಂದರ್ಭಗಳು ಒದಗಿ ಬರುತ್ತವೆ. ಸದ್ಯದ ಪರಿಸ್ಥಿತಿಯಲ್ಲಿ ಸುಮ್ಮನಿರಿ.

Advertisement

ಸಿಂಹ: ಜೀವನದಲ್ಲಿ ಎದುರಾಗುವ ಸೋಲು, ನಿರಾಶೆಗಳಿಗೆ ಮನಸ್ಸು ಘಾಸಿಗೊಳ್ಳದಂತೆ ಹೃದಯವನ್ನು ಗಟ್ಟಿಗೊಳಿಸ ಬೇಕಾಗುತ್ತದೆ. ಆರ್ಥಿಕವಾಗಿ ಹಣಕಾಸಿನ ಲೆಕ್ಕಾಚಾರದಲ್ಲಿ ಹೆಚ್ಚಿನ ಗಮನಹರಿಸಿರಿ. ಅನಿರೀಕ್ಷಿತ ಶುಭವಾರ್ತಾ ಶ್ರವಣ.

ಕನ್ಯಾ: ಅವಿಭಕ್ತ ಕುಟುಂಬದವರಿಗೆ ಹೊಂದಾಣಿಕೆಯ ಅಗತ್ಯವಿದೆ. ನಿರುದ್ಯೋಗಿಗಳಿಗೆ ಅನಿಶ್ಚಿತತೆ ದೂರವಾಗಲಿದೆ. ಅವಿವಾಹಿತರಿಗೆ ತಪ್ಪಿ ಹೋದ ಅವಕಾಶಗಳು ಪುನಃಹ ಲಭ್ಯವಾಗಲಿದೆ. ಚಾಲನೆ ಹಾಗೂ ಆರೋಗ್ಯ ಜಾಗ್ರತೆ ಮಾಡಿರಿ.

ತುಲಾ: ವಿಚಾರ ವಿನಿಮಯದಿಂದ ಕಾರ್ಯಾನುಕೂಲಕ್ಕೆ ಸುಲಭವಾಗುತ್ತದೆ. ಶುಭಮಂಗಲ ಕಾರ್ಯಕ್ಕಾಗಿ ಓಡಾಟ ತಂದೀತು. ವಿದ್ಯಾರ್ಥಿಗಳಿಗೆ ಉತ್ಸಾಹದ ವಾತಾವರಣ ವಿರುತ್ತದೆ. ಖರ್ಚಿನ ಬಗ್ಗೆ ಜಾಗ್ರತೆ.

ವೃಶ್ಚಿಕ: ಜಾಗ ಖರೀದಿ ಮಾಡುವ ಯೋಚನೆ ತೋರಿ ಬಂದು ಅನುಕೂಲವಾಗಲಿದೆ. ದಂಪತಿಗಳ ಮಧ್ಯೆ ಭಿನ್ನಾಭಿಪ್ರಾಯ ತಿಕ್ಕಾಟಕ್ಕೆ ಕಾರಣವಾಗದಂತೆ ಜಾಗ್ರತೆ ವಹಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ಮಾಡುವುದು ಅಗತ್ಯ.

ಧನು: ನಿರೀಕ್ಷಿತ ಕಾರ್ಯಸಾಧನೆ ಮನಸ್ಸಿಗೆ ನೆಮ್ಮದಿ ತಂದೀತು. ಕಾರ್ಯರಂಗದಲ್ಲಿ ಹೆಚ್ಚಿನ ಗಮನಹರಿಸ ಬೇಕಾದೀತು. ಹಿರಿಯರ ಸೂಕ್ತ ಸಲಹೆಗಳಿಗೆ ಸ್ಪಂದಿಸಿರಿ. ಕಾರ್ಯರಂಗದಲ್ಲಿ ತುಂಬಾ ಸಮಾಧಾನದ ವಾತಾವರಣ.

ಮಕರ: ಆರ್ಥಿಕವಾಗಿ ಆದಾಯದಷ್ಟೇ ಖರ್ಚು-ವೆಚ್ಚಗಳಿರುತ್ತವೆ. ವೃತ್ತಿರಂಗದಲ್ಲಿ ನಿರೀಕ್ಷಿತ ಪ್ರಮೋಶನ್‌ ಸದ್ಯದಲ್ಲೇ ಒದಗಿ ಬಂದೀತು. ವಿದ್ಯಾರ್ಥಿಗಳ ಅಭ್ಯಾಸಬಲವು ಮುಂದೆ ಒಳ್ಳೆಯ ಭವಿಷ್ಯವು ದೊರಕೀತು.

ಕುಂಭ: ಅನಾವಶ್ಯಕ ಚಿಂತೆಗಳಿಂದ ತಲೆನೋವು ಬರಿಸಿಕೊಳ್ಳುವಂತಾದೀತು. ಅಧಿಕ ರಕ್ತದೊತ್ತಡ, ಮಧುಮೇಹಗಳಿಂದ ಬಳಲುವವರು ಹೆಚ್ಚಿನ ಜಾಗ್ರತೆ ವಹಿಸ ಬೇಕಾಗುತ್ತದೆ. ಸ್ವಾಭಿಮಾನಕ್ಕೆ ಭಂಗ ತಂದೀತು. ಶುಭವಿದೆ.

ಮೀನ: ಚಿಂತಿತ ಕೆಲಸ ಕಾರ್ಯಗಳು ಅಡೆತಡೆ ಗಳಿಂದಲೇ ಪೂರ್ಣವಾಗುತ್ತದೆ. ಸಾಂಸಾರಿಕವಾಗಿ ಮಹಿಳೆಯರು ಅನಾವಶ್ಯಕವಾಗಿ ಮನೋವ್ಯಾಕುಲತೆಗೆ ಗುರಿಯಾಗಲಿದ್ದಾರೆ. ಉದ್ಯೋಗಿಗಳಿಗೆ ಪ್ರಮೋಶನ್‌ ಒದಗಿ ಬರಬಹುದು.

ಎನ್.ಎಸ್.ಭಟ್

Advertisement

Udayavani is now on Telegram. Click here to join our channel and stay updated with the latest news.

Next