Advertisement

ಶನಿವಾರದ ರಾಶಿ ಫಲ: ಈ ರಾಶಿಯವರಿಗೆ ಇಂದು ಅಭಿವೃದ್ಧಿದಾಯಕ ಧನಾರ್ಜನೆ

07:20 AM Jan 07, 2023 | Team Udayavani |

ಮೇಷ: ದೈರ್ಯ ಉತ್ಸಾಹದಿಂದ ಕೂಡಿದ ದಿನ. ಭೂಮಿ ವಾಹನಾದಿಗಳಿಂದ ನಿರೀಕ್ಷಿತ ಧನಲಾಭ. ಗುರುಹಿರಿಯರ ಉತ್ತಮ ಮಾರ್ಗದರ್ಶನ ವ್ಯವಹಾರಗಳಲ್ಲಿ ಅಧಿಕ ಶ್ರಮ. ನೂತನ ಮಿತ್ರರ ಸಮಾಗಮ. ದಾಂಪತ್ಯ ತೃಪ್ತಿದಾಯಕ.

Advertisement

ವೃಷಭ: ಉದ್ಯೋಗ ವ್ಯವಹಾರದಲ್ಲಿ ಜವಾಬ್ದಾರಿಯುತ ನಡೆಯಿಂದ ಉತ್ತಮ ಪ್ರಗತಿ. ಆರೋಗ್ಯ ವೃದ್ಧಿ. ಪಾಲುದಾರಿಕಾ ಚಟುವಟಿಕೆಗಳಲ್ಲಿ ಗೌರವ ಆದರಾದಿ ಪ್ರಾಪ್ತಿ. ಅಭಿವೃದ್ಧಿದಾಯಕ ಧನಾರ್ಜನೆ. ಸಾಂಸಾರಿಕ ಸುಖ ಉತ್ತಮ. ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ.

ಮಿಥುನ:  ಜಲೋತ್ಪನ್ನ  ವಸ್ತುಗಳಿಂದಲೂ, ಆಹಾರ ಉದ್ಯಮಗಳಿಂದಲೂ ಪಾಲುದಾರಿಕಾ ವ್ಯವಹಾರಗಳಿಂದ ಅನುಕೂಲಕರ ಪರಿಸ್ಥಿತಿ. ನಿರೀಕ್ಷಿತ ಧನಾರ್ಜನೆ. ಉತ್ತಮ ವಾಕ್‌ಚತುರತೆ. ಸಹೋದ್ಯೋಗಿ ಗಳಿಂದ ಸಹಕಾರ. ಸಾಂಸಾರಿಕ ಸುಖ ಮಧ್ಯಮ.

ಕರ್ಕ:  ಅನಿರೀಕ್ಷಿತ ಗೌರವ ಪ್ರಾಪ್ತಿ. ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಅಧಿಕ ಧನಾಗಮ. ಮಕ್ಕಳು, ಸಂಸಾರದಿಂದ, ವ್ಯವಹಾರದಿಂದ ತೃಪ್ತಿ ಸಮಾಧಾನ. ಧಾರ್ಮಿಕ ಕೆಲಸಗಳಲ್ಲಿ ಭಾಗಿ. ಸಾರ್ವಜನಿಕ ಸಂಪರ್ಕ ಕಾರ್ಯದಲ್ಲಿ  ಶ್ರೇಯಸ್ಸು. ಇತ್ಯಾದಿ ಶುಭ ಫ‌ಲ.

ಸಿಂಹ: ದೀರ್ಘ‌ ಪ್ರಯಾಣ. ವಿದೇಶ ಮೂಲ ವ್ಯವಹಾರದಲ್ಲಿ ಪ್ರಗತಿ. ಗೃಹೋಪಕರಣ ವಸ್ತುಗಳ ಸಂಗ್ರಹ. ನೂತನ ಉದ್ಯೋಗ ವ್ಯವಹಾರಕ್ಕೆ ಅವಕಾಶ. ಆರೋಗ್ಯ ಮಧ್ಯಮ. ಆಹಾರಾದಿ ಸೇವನೆಯಲ್ಲಿ ಎಚ್ಚರಿಕೆ ವಹಿಸಿ. ಸಾಂಸಾರಿಕ ಸುಖ ತೃಪ್ತಿದಾಯಕ.

Advertisement

 ಕನ್ಯಾ: ಆತ್ಮೀಯರಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಜ್ಞಾನಾರ್ಜನೆಗೆ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಧನಾರ್ಜನೆಗೆ ಸರಿಸಮನಾದ ಖರ್ಚು. ಸಾಂಸಾರಿಕ ವಿಚಾರದಲ್ಲಿ ತಾಳ್ಮೆ ಅಗತ್ಯ. ಹಿರಿಯರ ಆರೋಗ್ಯ ಬಗ್ಗೆ ಗಮನವಿರಲಿ.

ತುಲಾ: ಉತ್ತಮ ಆರೋಗ್ಯ. ಅಧಿಕ ಧನಾರ್ಜನೆ. ಗೃಹ ವಾಹನ ಭೂಮಿ ವಿಚಾರಗಳಲ್ಲಿ ಒಳ್ಳೆ ಬದಲಾವಣೆ. ಅವಿವಾಹಿತರಿಗೆ ವಿವಾಹ ಭಾಗ್ಯ. ಉದ್ಯೋಗದಲ್ಲಿ ಹೆಚ್ಚಿನ ಶ್ರಮ. ನಿರೀಕ್ಷಿತ ಸ್ಥಾನ ಲಾಭ. ಗುರುಹಿರಿಯರಿಂದ ಸಂತೋಷದ ವಾರ್ತೆ.

ವೃಶ್ಚಿಕ: ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿನ ಗಮನದಿಂದ ಯಶಸ್ಸು. ಅಧಿಕ ಧನಾರ್ಜನೆ ಅವಕಾಶ. ಗುರುಹಿರಿಯ ಸಹಕಾರ ಮಾರ್ಗದರ್ಶನ. ದಾಂಪತ್ಯದಲ್ಲಿ ಹೆಚ್ಚಿದ ಪ್ರೀತಿ ವಾತ್ಸಲ್ಯ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಇತ್ಯಾದಿ ಶುಭಫ‌ಲ.

 ಧನು:  ಸಣ್ಣ ಪ್ರಯಾಣದಿಂದ ನಿರೀಕ್ಷಿತ ಸ್ಥಾನ ಸುಖ. ಉತ್ತಮ ಧನಸಂಪಾದನೆ. ಕುಟುಂಬ ಸುಖ ವೃದ್ಧಿ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ. ಆರೋಗ್ಯದಲ್ಲಿ ಸುಧಾರಣೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮದಿಂದ ಕಾರ್ಯ ಸಪಲತೆ.

ಮಕರ: ಉತ್ತಮ ಧನಾಗಮವಿದ್ದರೂ ಖರ್ಚಿಗೆ ಹಲವುದಾರಿ. ಆರೋಗ್ಯದಲ್ಲಿ ಉತ್ತಮ ಸುಧಾರಣೆ. ಮಾತಿನಲ್ಲಿ ತಾಳ್ಮೆ ಹಿಡಿತದಿಂದ ಸಫ‌ಲತೆ. ದಾಂಪತ್ಯ ಸುಖ ವೃದ್ಧಿ. ಹಿರಿಯರ ಆರೋಗ್ಯ ಗಮನಿಸಿ. ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿ.

ಕುಂಭ: ದೀರ್ಘ‌ ಪ್ರಯಾಣದಿಂದ ನಿರೀಕ್ಷಿತ ಸುಖ. ಆಸ್ತಿ ವಿಚಾರಗಳಲ್ಲಿ ಎಚ್ಚರಿಕೆ ನಡೆಯಿಂದ ಪ್ರಗತಿ. ಸಾಂಸಾರಿಕ ವಿಚಾರದಲ್ಲಿ ತಾಳ್ಮೆ ಇರಲಿ. ಗುರು ಹಿರಿಯರ ಆರೋಗ್ಯ ವೃದ್ಧಿ. ಹಣಕಾಸಿನ ವಿಚಾರದಲ್ಲಿ ಅತ್ಯುತ್ತಮ ಪ್ರಗತಿ.

ಮೀನ: ಆರೋಗ್ಯ ಗಮನಿಸಿ. ದಾಂಪತ್ಯ ತೃಪ್ತಿದಾಯಕ. ಮಕ್ಕಳಿಂದ ಸಂತೋಷ ವೃದ್ಧಿ. ವಿದ್ಯಾರ್ಥಿಗಳಿಗೆ ವಿಫ‌ುಲ ಅವಕಾಶ. ಪಾಲುಗಾರಿಕಾ ವ್ಯವಹಾರಸ್ಥರು ಸಹನೆಯಿಂದ ಕಾರ್ಯಸಾಧಿಸಿಕೊಳ್ಳಿ. ಉದ್ಯೋಗಸ್ಥರಿಗೆ ಅಧಿಕ ಶ್ರಮದಿಂದ ಧನಾರ್ಜನೆ. ನೂತನ ಅವಕಾಶಗಳು ಒದಗಿ ಬರುವವು.

Advertisement

Udayavani is now on Telegram. Click here to join our channel and stay updated with the latest news.

Next