Advertisement

ಇಂದಿನ ಗ್ರಹಬಲ: ಈ ವಾರದಲ್ಲಿ ಈ ರಾಶಿಯವರಿಗೆ ಉತ್ತಮ ಫ‌ಲಗಳು ಗೋಚರಕ್ಕೆ ಬರುವುದು

07:37 AM Apr 15, 2021 | Team Udayavani |

15-04-2021

Advertisement

ಮೇಷ: ಆಗಾಗ ಕೆಲವೊಂದು ವಿಚಾರಗಳು ನಿಮ್ಮ ಮಾನಸಿಕ ಸ್ಥಿತಿಯನ್ನು ಕೆಡಿಸಲಿದೆ. ಇದರಿಂದ ನಿಮಗೆ ಉದ್ವೇಗ, ಕೋಪ, ಸಿಟ್ಟುಗಳು ಬರುವುದು ಜಾಸಿಯಾಗದೀತು. ಆದರೆ ಪ್ರಯತ್ನ ಬಲದಿಂದ ಹತ್ತಿಕ್ಕಿರಿ. ಮುಂದೆ ಚೆನ್ನಾಗಿರುತ್ತದೆ.

ವೃಷಭ: ಆರ್ಥಿಕ ಸ್ಥಿತಿಯಲ್ಲಿ ಏರುಪೇರು ಕಂಡು ಬರುವುದು. ಆರೋಗ್ಯದಲ್ಲೂ ದಿನಾ ಒಂದೊಂದು ತರಹ ಪೀಡೆ. ಇದರಿಂದ ನೊಂದು ಹೋಗುವಿರಿ. ಆದರೆ ಮನೆಯಲ್ಲಿ ಪತ್ನಿ, ಪುತ್ರಿಯ ಸಹಕಾರವು ನಿಮಗೆ ದೊರಕುವುದು.

ಮಿಥುನ: ಗೃಹಕೃತ್ಯದಲ್ಲಿ ಕೆಲವು ಸುಧಾರಣೆಗಳು ಕಂಡು ಬಂದು ಸಮಾಧಾನವಾಗಲಿದೆ. ಇಷ್ಟಕಾರ್ಯಗಳು ನೆರವೇರಿ ನೆಮ್ಮದಿ ಎನಿಸಲಿವೆ. ಕುಟುಂಬದ ಜನರ ಸಹಕಾರ ನಿಮಗೆ ದೊರಕುವುದು. ಪ್ರೀತಿ, ವಿಶ್ವಾಸ ಮುಖ್ಯ.

ಕರ್ಕ: ದೂರ ಸಂಚಾರದಿಂದ ಕಾರ್ಯಸಿದ್ಧಿಯಾಗಿ ಸಂತಸವಾಗಲಿದೆ. ಅವಿವಾಹಿತರಿಗೆ ಯೋಗ್ಯ ಪ್ರಸ್ತಾಪಗಳು ಕಂಡು ಬರಲಿವೆ. ಪ್ರಯೋಜನ ಪಡೆದುಕೊಳ್ಳಿರಿ. ಈ ವಾರವು ನಿಮಗೆ ಉತ್ತಮ ಫ‌ಲಗಳು ಗೋಚರಕ್ಕೆ ಬರುವುದು. ಶುಭವಿದೆ.

Advertisement

ಸಿಂಹ: ಇಡೀ ದಿನ ಕೆಲಸ ಕಾರ್ಯಗಳೆಂದು ದುಡಿ ಯುವ ನಿಮ್ಮ ಜೀವವು ವಿಶ್ರಾಂತಿ ಬಯಸುವುದು. ಮನಸ್ಸು ಸಮಾಧಾನದಿಂದಿರೊಲ್ಲ. ಧ್ಯಾನ ಹಾಗೂ ನಡಿಗೆಯನ್ನು ಮುಂದುವರಿಸಿರಿ. ಆರೋಗ್ಯವು ಉತ್ತಮಗೊಳ್ಳುವುದು.

ಕನ್ಯಾ: ಉದ್ಯೋಗದಲ್ಲಿ ಪದೇ ಪದೇ ಅನೇಕ ವಿಧದ ಎಡರುತೊಡರುಗಳು ಕಂಡು ಬರುವುದು. ಅದನ್ನು ದಾಟಿ ಮುನ್ನಡೆದರೆ ಫ‌ಲ ಸಿಗಲಿದೆ. ಪತ್ನಿಯಿಂದ ಒಳ್ಳೆಯ ಸಲಹೆಗಳು, ಸಹಕಾರವೂ ದೊರೆತು ನಿಮ್ಮಷ್ಟು ಸುಖೀ ಯಾರಿಲ್ಲ.

ತುಲಾ: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಅವಕಾಶಗಳು ದೊರತು ಮುನ್ನಡೆವಿರಿ. ಆಗಾಗ ಅಡೆತಡೆಗಳು ಕಂಡು ಬಂದರೂ ಬೇಸರ ಮಾಡದೆ ಛಲ ಹಿಡಿದು ಮುನ್ನಡೆಯಿರಿ. ಮುಂದೆ ಸಫ‌ಲತೆ ಕಾಣುವಿರಿ. ಸನಿ¾ತ್ರರು ಸಹಕಾರ ಕೊಡಲಿದ್ದಾರೆ.

ವೃಶ್ಚಿಕ: ಸಾಂಸಾರಿಕವಾಗಿ ಆಂತರಿಕ ಸ್ಥಿತಿಗತಿಗಳು ನಿರೀಕ್ಷಿತ ರೀತಿಯಲ್ಲಿ ನಡೆದು ಸಮಾಧಾನ ಸಿಗಲಿದೆ. ಆಗಾಗ ಆರ್ಥಿಕ ಹಿನ್ನಡೆಯನ್ನು ಅನುಭವಿಸಬೇಕಾದೀತು. ವಾಯು ಪ್ರಕೋಪ ಕಂಡು ಬರುವುದು. ಸಹನೆಯಿಂದ ಸಂಸಾರದಲ್ಲಿ ಸುಖವಿದೆ.

ಧನು: ವೃತ್ತಿರಂಗದಲ್ಲಿ ಏಳಿಗೆಯನ್ನು ಕಾಣುವಿರಿ. ನೀವು ಆಸೆಪಟ್ಟ ವಿಷಯದಲ್ಲಿ ನಿಖರತೆ ಕಂಡು ಬರುವುದು. ಧನಾಗಮ ಅಷ್ಟಕಷ್ಟೆ ಆದರೂ ಕೊರತೆ ಆಗದು. ಆತ್ಮವಿಶ್ವಾಸ ಕೂಡಾ ನಿಮ್ಮನ್ನು ರಕ್ಷಿಸಲಿದೆ. ಧೈರ್ಯ ಅಗತ್ಯವಿದೆ.

ಮಕರ: ಶತ್ರುಗಳ ಸಮಯಸಾಧಕತನ ನಿಮ್ಮನ್ನು ಘಾಸಿಗೊಳಿಸಲಿದೆ. ಮಾತಿಗಿಂತ ಮೌನಲೇಸು. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಯೋಗದಿಂದ ಮುಂದುವರಿಯಿರಿ. ವಿದ್ಯಾರ್ಥಿಗಳಿಗೆ ಉತ್ತಮ ಫ‌ಲಿತಾಂಶ ಸಿಗಲಿರುವುದು.

ಕುಂಭ: ನೂತನ ಕಾರ್ಯಾರಂಭ, ವ್ಯಾಪಾರ, ವ್ಯವಹಾರಗಳಿಗಿದು ಸಕಾಲವಲ್ಲ. ಉದ್ವೇಗದಿಂದ ಕ್ಷುಲ್ಲಕ ವಿಚಾರಗಳು ತೋರಿ ಬಂದು ಅಸಾಮಾಧಾನವು ಕಾಡಲಿದೆ. ಸಾಂಸಾರಿಕವಾಗಿ ಮಕ್ಕಳು, ಮೊಮ್ಮಕ್ಕಳ ಆಗಮನದಿಂದ ಹಬ್ಬದ ವಾತಾವರಣ.

ಮೀನ: ದೈಹಿಕವಾಗಿ ಹಾಗೂ ಮಾನಸಿಕವಾಗಿ ವ್ಯಾಕುಲತೆ ತೋರಿ ಬರುವುದು. ಶೈಕ್ಷಣಿಕ ವೃತ್ತಿಯವರಿಗೆ ನಿರೀಕ್ಷೆಗಿಂತ ಕಡಿಮೆ ಅಂಕಗಳು ದೊರೆತು ಬೇಸರವಾದೀತು. ನಿಮ್ಮ ಕರ್ತವ್ಯವನ್ನು ನಿರ್ಲಕ್ಷಿಸದಿರಿ. ಚ್ಯುತಿ ಬಾರದಂತೆ ವರ್ತಿಸಿರಿ

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next