Advertisement

ಈ ರಾಶಿಯವರಿಂದು ಪಾಲುಗಾರಿಕೆಯ ವ್ಯವಹಾರದಲ್ಲಿ ಹೆಚ್ಚಿನ ಬಂಡವಾಳ ಹಾಕುವುದು ಉತ್ತಮವಲ್ಲ

07:47 AM Feb 04, 2021 | Team Udayavani |

04-02-2021

Advertisement

ಮೇಷ: ವಿದ್ಯಾರ್ಥಿಗಳಿಗೆ ಮನಸ್ಸಿನ ಎಣಿಕೆಯಂತೆ ಯಶಸ್ಸಿದೆ. ಗುರುವಿನ ಪ್ರತಿಕೂಲತೆಯಿಂದ ವರ್ಗಾವಣೆಯ ಸಾಧ್ಯತೆ ಇರುತ್ತದೆ. ಸ್ಥಾನಭ್ರಂಶ ಯೋಗವಿದೆ. ಕಫ‌, ವಾತ ದೋಷದಿಂದ ಆರೋಗ್ಯ ಕೆಟ್ಟಿತು.

ವೃಷಭ: ಪಾಲುದಾರಿಕೆಯ ವ್ಯವಹಾರದಲ್ಲಿ ಹೆಚ್ಚಿನ ಜಾಗ್ರತೆ ಅವಶ್ಯಕವಾಗಿರುತ್ತದೆ. ರಾಜಕೀಯದವರಿಗೆ ನಿರೀಕ್ಷಿತ ರೀತಿಯಲ್ಲಿ ಸ್ಥಾನಮಾನದ ಲಾಭ ತಂದುಕೊಡಲಿದೆ. ನೂತನ ದಂಪತಿಗಳಿಗೆ ಶುಭ ಸಮಾಚಾರ ಇರುತ್ತದೆ.

ಮಿಥುನ: ಸಾಮಾಜಿಕವಾಗಿ ಸ್ಥಾನವರ್ಧನೆಗ ಅವಕಾಶವನ್ನು ಬಳಸಿಕೊಂಡಲ್ಲಿ ನಿಮ್ಮ ದುಡಿಮೆಯು ಸಾರ್ಥಕವಾಗಲಿದೆ. ಪುಣ್ಯಕ್ಷೇತ್ರಗಳ ಸಂದರ್ಶನದ ಯೋಗ ಬಂದೀತು. ಆಕಸ್ಮಿಕ ಧನಲಾಭದ ಯೋಗವಿದೆ.

ಕರ್ಕ: ಪಾಲುಗಾರಿಕೆಯ ವ್ಯವಹಾರದಲ್ಲಿ ಹೆಚ್ಚಿನ ಬಂಡವಾಳ ಹಾಕುವುದು ಉತ್ತಮವಲ್ಲ. ಆಗಾಗ ಧನಹಾನಿ ಇದ್ದರೂ ಸುಖಭಾಗ್ಯದ ವರ್ಧನೆಯಿಂದ ಫ‌ಲವೂ, ಹರ್ಷವೂ ಹೆಚ್ಚಾದೀತು. ಸಂಚಾರ ಯೋಗವಿದೆ.

Advertisement

ಸಿಂಹ: ಕಾರ್ಯಕ್ಷೇತ್ರದಲ್ಲಿ ಸ್ಥಾನಮಾನವು, ಗೌರವೂ, ಪುರಸ್ಕಾರವೂ ತೋರಿಬರಲಿದೆ. ಕೆಲಸಕಾರ್ಯಗಳ ಒತ್ತಡದಿಂದ ಮನಸ್ಸಿನ ನೆಮ್ಮದಿ ಕೆಟ್ಟು ಹೋದೀತು. ದೇಹಾಯಾಸವು ತೋರಿಬಂದೀತು. ಧೈರ್ಯದಿಂದಿರಿ.

ಕನ್ಯಾ: ಉಗ್ರ ಕೋಪಿಗಳಾದರೂ ಸಮಾಧಾನಿಗಳಾಗುವರು. ಸಂಕುಚಿತ ಪ್ರವೃತ್ತಿಯವರಾದರೂ ಸಂದರ್ಭ ಬಂದಲ್ಲಿ ಯಾವ ತ್ಯಾಗಕ್ಕೂ ಸಿದ್ಧರು. ನಿಮ್ಮ ಮನಸ್ಸನ್ನು ಸ್ವತ್ಛವಾಗಿಟ್ಟುಕೊಳ್ಳಿರಿ. ಪ್ರಯಾಣ ಕಂಡುಬರಲಿದೆ.

ತುಲಾ: ಬಂದ ಅವಕಾಶವನ್ನು ಸದುಪಯೋಗಿಸಿ ಕೊಂಡಲ್ಲಿ ಹೆಚ್ಚಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳ ಬಹುದು. ಅತಿಯಾದ ಆಸೆಗಳನ್ನು ಇಟ್ಟುಕೊಳ್ಳದಿರಿ. ಅನಾವಶ್ಯಕ ಚಿಂತೆಯಿಂದ ಆರೋಗ್ಯದಲ್ಲಿ ಏರುಪೇರಾದೀತು.

ವೃಶ್ಚಿಕ: ಅಧಿಕಾರಿ ಜನರಿಂದ ಕಷ್ಟನಷ್ಟಗಳು, ಸ್ಥಾನಮಾನಗಳಿಗೆ ಹಾನಿಯಾದೀತು. ಹಿತಶತ್ರುಗಳಿಂದ ಭಾದೆ ತೋರಿಬರಲಿದೆ. ಪ್ರಯತ್ನಬಲದಿಂದಲೇ ಮುಂದುವರಿಯ ಬೇಕಾದೀತು. ಉದ್ಯೋಗ ದಲ್ಲಿ ಭಡ್ತಿ ಕಂಡುಬರಲಿದೆ.

ಧನು: ಸುಖದುಃಖ ಸಮಾನ ರೀತಿಯಲ್ಲಿರುತ್ತದೆ.ಆದರೂ ಪ್ರಯತ್ನಬಲದಿಂದ ಮುಂದುವರಿದು ಬಂದರೆಒಳ್ಳೆಯ ಫ‌ಲ ಪ್ರಾಪ್ತಿಯಾಗಲಿದೆ. ಪತ್ನಿಗೂ ಒಳ್ಳೆಯ ಕೆಲಸವು ಸಿಗಬಹುದು. ದ್ವಂದ್ವ ನೀತಿ ಬೇಡ.

ಮಕರ: ಗೃಹದಲ್ಲಿ ಸಂಭ್ರಮಕ್ಕಾಗಿ ಖರ್ಚುವೆಚ್ಚಗಳು ತೋರಿಬಂದಾವು. ಸಂತಾನಭಾಗ್ಯದ ಕುರುಹು ಕಂಡುಬರಲಿದೆ. ವೃಥಾ ತಿರುಗಾಟ ಬೇಡ. ಅಧಿಕ ಖರ್ಚು, ಆರೋಗ್ಯ ಹಾನಿಯಾದೀತು. ಎಚ್ಚರಿಕೆ ವಹಿಸುವುದು.

ಕುಂಭ: ದಾಕ್ಷಿಣ್ಯ ಪ್ರವೃತ್ತಿ ಇದ್ದರೂ ಕಠಿಣ ನಿರ್ಧಾರ ನಿಮ್ಮನ್ನು ಮುಂದು ಕೊಂಡೊಯ್ಯಲಿದೆ. ಸಾಮಾನ್ಯವಾಗಿ ಕೋಪಗೊಳ್ಳುವ ನೀವು ಅದನ್ನು ಹಿಡಿತದಲ್ಲಿಟ್ಟುಕೊಳ್ಳಿರಿ. ಅತೀ ನಿರೀಕ್ಷೆ ಮಾಡದಿರಿ. ಬೇಸರವಾದೀತು.

ಮೀನ: ಆರ್ಥಿಕವಾಗಿ ಹೆಚ್ಚಿನ ಕೊರತೆ ಇಲ್ಲದಿದ್ದರೂ ಅಧಿಕ ಖರ್ಚು ನಿಮಗೆ ದಿಗ್ಭ್ರಮೆ ಹುಟ್ಟಿಸಲಿದೆ. ಆರೋಗ್ಯ ಸ್ಥಿತಿಯಲ್ಲಿ ಏರುಪೇರುಯಿದೆ. ಮನೆಯ ಕೆಲಸಕಾರ್ಯಗಳಲ್ಲಿ ಅಡಚಣೆ ತೋರಿ ಬರುವುದು.

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next