Advertisement

Daily Horoscope: ಉದ್ಯೋಗಸ್ಥರಿಗೆ ಪದೋನ್ನತಿ ಅಥವಾ ವೇತನ ಏರಿಕೆ ಸಂಭವ

07:34 AM Sep 27, 2023 | Team Udayavani |

ಮೇಷ: ಆರೋಗ್ಯ ಉತ್ತಮ. ಹಲವು ಬಗೆಯ ಕಾರ್ಯದ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳುವ ಚಿಂತೆ. ಉದ್ಯೋಗ  ಕ್ಷೇತ್ರದಲ್ಲಿ  ಸ್ಥಿರ ವಾತಾವರಣ. ಹೊಣೆಗಾರಿಕೆಗಳು ಕಡಿಮೆಯಾಗುವ ಲಕ್ಷಣ ಇಲ್ಲ. ದೇವತಾರ್ಚನೆಯಲ್ಲಿ ಆಸಕ್ತಿ.

Advertisement

ವೃಷಭ: ಮಧ್ಯವಯಸ್ಕರಿಗೆ  ಅನವಶ್ಯ ಚಿಂತೆಯಿಂದ ತೊಂದರೆ.  ಮನೆಯಲ್ಲಿ ಎಲ್ಲರ ದೇಹಾರೋಗ್ಯ ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ಸೌಹಾರ್ದ ವಾತಾವರಣ. ಸ್ವಂತ ವ್ಯವಹಾರಸ್ಥರಿಗೆ ಪೈಪೋಟಿ ಎದುರಿಸುವ ಸಾಮರ್ಥ್ಯ. ವಿವಾಹ ಮಾತುಕತೆ ಸುಗಮ.

ಮಿಥುನ: ಬಂಧುವರ್ಗದಲ್ಲಿ ಶುಭ ಸಮಾರಂಭದ ವಾರ್ತೆ. ದೇವತಾರ್ಚನೆಯಲ್ಲಿ ಮನಸ್ಸು ಲೀನ. ಗುರು ದರ್ಶನ ಸಂಭವ. ಲೇಖನ ವೃತ್ತಿಯವರಿಗೆ ಕೈತುಂಬಾ ಕೆಲಸ. ಹಿರಿಯರ ಉದ್ಯೋಗ ಕ್ಷೇತ್ರದಲ್ಲಿ ಹಳೆಯ ಸಮಸ್ಯೆಯೊಂದಕ್ಕೆ ಸುಲಭ ಪರಿಹಾರ.

ಕರ್ಕಾಟಕ: ಸಂಸಾರದಲ್ಲಿ ಎಲ್ಲರ ದೈಹಿಕ ಆರೋಗ್ಯ ಉತ್ತಮ. ಉದ್ಯೋಗ  ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಜವಾಬ್ದಾರಿಗಳ ಸಮರ್ಪಕ ನಿರ್ವಹಣೆ ಯಿಂದ ಮೇಲಿನವರಿಗೆ ಸಮಾಧಾನ.  ಗೃಹಿಣಿಯರ ಸ್ವಯಂ ಆದಾಯ ಯೋಜನೆಯಲ್ಲಿ ಮುನ್ನಡೆ.

ಸಿಂಹ: ನಿಮ್ಮ ಸಾಹಸ ಪ್ರವೃತ್ತಿಗೆ ಸವಾಲು ಹಾಕುವ ಬೆಳವಣಿಗೆ ಕಾಣಿಸಲಿದೆ. ಉದ್ಯೋಗ ಕ್ಷೇತ್ರದಲ್ಲಿ ಆಹ್ಲಾದದ ವಾತಾವರಣ. ಸ್ವಂತ ವ್ಯವಹಾರ ವಿಸ್ತರಣೆ ಹಾಗೂ ಹೊಸ ಕ್ಷೇತ್ರಕ್ಕೆ ಕಾಲಿಡುವ ಲಕ್ಷಣಗೋಚರ. ವ್ಯವಹಾರ ಸಂಬಂಧ ಸಣ್ಣ ಪ್ರವಾಸದ ಸಾಧ್ಯತೆಯಿದೆ.

Advertisement

ಕನ್ಯಾ: ಎಲೆಕ್ಟ್ರಾನಿಕ್‌ ಸಾಮಗ್ರಿಗಳ ವ್ಯಾಪಾರಿಗಳಿಗೆ ಹಾಗೂ ದುರಸ್ತಿ ಪ್ರವೀಣರಿಗೆ ಕಾರ್ಯದ ಒತ್ತಡ, ಲಾಭ ವೃದ್ಧಿ. ಇತರ ಉದ್ಯೋಗಸ್ಥರಿಗೆ ಸ್ಥಿರ ವಾತಾವರಣದ ಅನುಭವ.  ವಾಹನ, ಆಭರಣ,  ಕೋಳಿ ಸಾಕಣೆ ಮೊದಲಾದ ವ್ಯವಹಾರದವರಿಗೆ ನಿರೀಕ್ಷೆಗೆ ಮೀರಿದ ಲಾಭ.

ತುಲಾ: ಧೈರ್ಯ, ಸ್ಥೈರ್ಯದೊಂದಿಗೆ  ಹೆಜ್ಜೆಯಿಡುವುದೊಂದೇ ಉಳಿದಿರುವ ಮಾರ್ಗ. ಕಾಗದದ ಹುಲಿಗಳಿಗೆ ಅಂಜದಿರಿ. ಉದ್ಯೋಗ ಕ್ಷೇತ್ರದಲ್ಲಿ  ಮಾಮೂಲು ಪರಿಸ್ಥಿತಿ. ಶಕ್ತಿ ಮೀರಿದ ಶ್ರಮಕ್ಕೆ ಯೋಗ್ಯ ಮನ್ನಣೆ ಲಭ್ಯ.ಸಮಾಜದಲ್ಲಿ ಗೌರವ ವೃದ್ಧಿ.

ವೃಶ್ಚಿಕ: ನಿತ್ಯದ ವ್ಯವಹಾರಗಳು ನಿರಾತಂಕವಾಗಿ ಸಾಗುವ ದಿನ. ಬಂಧುವರ್ಗದಿಂದ ಶುಭ ಸಮಾಚಾರ. ಉದ್ಯೋಗ ಕ್ಷೇತ್ರದಲ್ಲಿ ಮಾಮೂಲು ಪರಿಸ್ಥಿತಿ. ಮನೆಯಲ್ಲಿ ದೇವತಾ ಕಾರ್ಯದ ಸಿದ್ಧತೆ. ಹಿರಿಯರ ಆರೋಗ್ಯ ಸ್ಥಿರ.ಉಳಿದ ಎಲ್ಲರೂ ಕ್ಷೇಮ.

ಧನು: ದೇಹಾರೋಗ್ಯದ ಚಿಂತೆ. ಸರಕಾರಿ ಕಚೇರಿಗಳಲ್ಲಿ ಕಾರ್ಯ ವಿಳಂಬ.ಮನೆಯಲ್ಲಿ ಹಿರಿಯರ ಸಹಕಾರ.ಉದ್ಯೋಗಸ್ಥರಿಗೆ ಪದೋನ್ನತಿಯ ಸೂಚನೆ. ಕೃಷಿಕರಿಗೆ, ಕೃಷ್ಯುತ್ಪನ್ನ ಮಾರಾಟಗಾರ ರಿಗೆ, ಸರಕಾರಿ ಅಧಿಕಾರಿಗಳಿಗೆ ಅನುಕೂಲಕರ ಪರಿಸ್ಥಿತಿ.

ಮಕರ: ದೇಹಾರೋಗ್ಯದ ಕಡೆಗೆ ಗಮನ ಕೊಡಿ. ಉದ್ಯೋಗ ಸ್ಥಾನ ದಲ್ಲಿ ಕೆಲಸದ ಒತ್ತಡ. ಉತ್ತರದ  ಕಡೆಯಿಂದ ಶುಭ ಸಮಾಚಾರ. ಸ್ವಯಂ ವ್ಯವಹಾರ ನಡೆಸುವ ವೃತ್ತಿಪರರಿಗೆ  ಸಮಯ ಮಿತಿಯೊಳಗೆ ಕೆಲಸ ಮುಗಿಸುವ ಆತಂಕದ ಪರಿಸ್ಥಿತಿ. ಗೃಹಿಣಿಯರಿಗೆ ಕ್ಷೇಮ.

ಕುಂಭ: ಸಂಚಿತ ಸತ್ಕರ್ಮಗಳು ನೀಡುವ ಶುಭ ಫ‌ಲಗಳನ್ನು ಹಂಚುವ ಮನಸ್ಥಿತಿ. ಧಾರ್ಮಿಕ ಮನೋವೃತ್ತಿಯೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ   ಪಾಲುಗೊಳ್ಳುವಿರಿ. ಉದ್ಯೋಗಸ್ಥರಿಗೆ ಪದೋನ್ನತಿ ಅಥವಾ ವೇತನ ಏರಿಕೆ.

ಮೀನ: ದೈವಚಿಂತನೆ, ದೇವತಾ ರ್ಚನೆ, ದಾನಧರ್ಮದ‌ಲ್ಲಿ ಪಾಲ್ಕೊಳ್ಳು ವಿರಿ. ಉದ್ಯೋಗ ಕ್ಷೇತ್ರ ದಲ್ಲಿ ಉತ್ತಮ ಸಾಧನೆಯಿಂದ ಮೇಲಿನವರ ಮೆಚ್ಚುಗೆ ಪಡೆಯುವಿರಿ. ಆಸ್ತಿ ಕ್ರಯ, ವಿಕ್ರಯ ವ್ಯವಹಾರ ಸಂಬಂಧ  ಮಾತುಕತೆ  ನಿರ್ಣಾಯಕ ಹಂತಕ್ಕೆ. ಸರಕಾರಿ ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನೆ.

Advertisement

Udayavani is now on Telegram. Click here to join our channel and stay updated with the latest news.

Next