Advertisement

Daily Horoscope: ಈ ರಾಶಿಯವರಿಗಿಂದು ಅಕಸ್ಮಾತ್‌ ಧನಾಗಮದ ಯೋಗ ಇರಲಿದೆ

07:32 AM Oct 14, 2023 | Suhan S |

ಮೇಷ: ಏಕಲಕ್ಷ್ಯವನ್ನು ಇಟ್ಟುಕೊಂಡು ಮುಂದುವರಿದರೆ ಜಯ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಪ್ರತಿಭೆ ವಿಕಸನಕ್ಕೆ ಅವಕಾಶ. ಸ್ವಂತ ಉದ್ಯಮದ ನೌಕರರ ಸಮಸ್ಯೆ ನಿವಾರಣೆ. ಕಾನೂನಿನ ತೊಡಕು ಗಳಿಂದ ಮುಕ್ತಿ. ಪಿತೃಕಾರ್ಯದಲ್ಲಿ ಭಾಗಿಯಾಗುವ ಅವಕಾಶ.

Advertisement

ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಎಸಗಿದ ಸಾಧನೆಗೆ ಪುರಸ್ಕಾರ. ಸಮಾಜದಲ್ಲಿ ಗೌರವ ಪ್ರಾಪ್ತಿ ಸ್ವಂತ ಉದ್ಯಮದ ಉತ್ಪನ್ನಗಳಿಗೆ ಗ್ರಾಹಕವರ್ಗ ವಿಸ್ತರಣೆ. ಹಿರಿಯರ ಆರೋಗ್ಯ ಮತ್ತು ಆವಶ್ಯಕತೆಗಳ ಕಡೆಗೆ ಗಮನ ಹರಿಸುವುದು ಅಗತ್ಯ. ವ್ಯವಹಾರ ಕ್ಷೇತ್ರ ವಿಸ್ತರಣೆ ಬಗ್ಗೆ ಚಿಂತನೆ.

ಮಿಥುನ: ಗಣೇಶನ ಉಪಾಸನೆಯಿಂದ ಕಿರಿಕಿರಿ ದೂರ. ಉದ್ಯೋಗದಲ್ಲಿ ಏಕಾಗ್ರತೆಯ ದುಡಿಮೆ. ಪಿತೃಕಾರ್ಯದಲ್ಲಿ ಭಾಗಿಯಾದ ಸಮಾಧಾನ. ಸ್ವಂತ ಉದ್ಯಮದ ಏಳಿಗೆಯ ಬಗ್ಗೆ ಚಿಂತನೆ.ಆಪ್ತವರ್ಗದಿಂದ ಸಕಾಲದಲ್ಲಿ ಸಹಾಯವೊದಗಿ ಕಾರ್ಯ ಸುಗಮ.

ಕರ್ಕಾಟಕ: ಉದ್ಯೋಗ ಸ್ಥಾನದಲ್ಲಿ ಹೆಚ್ಚು ಜವಾಬ್ದಾರಿ ಹೇರಿಕೆ. ಸಹೋದ್ಯೋಗಿಗಳಿಂದ ಸಹಕಾರ. ಅಕಸ್ಮಾತ್‌ ಧನಾಗಮ ಯೋಗ. ವಾಸಸ್ಥಾನ ಬದಲಾವಣೆಗೆ ಚಿಂತನೆ. ಗೃಹಾಲಂಕಾರ ಸಾಮಗ್ರಿ ವಿತರಕರಿಗೆ ಲಾಭ. ಕಟ್ಟಡ ನಿರ್ಮಾಣ ಕಾರ್ಯಕ್ಕೆ ವಿಘ್ನ.

ಸಿಂಹ: ಶಾಂತಚಿತ್ತರಾಗಿ ಯೋಚಿಸಿ ಮುಂದಡಿಯಿಡುವುದರಿಂದ ದೀರ್ಘಾವಧಿ ಲಾಭ. ಉದ್ಯೋಗ ಸ್ಥಾನದಲ್ಲಿ ಪ್ರಾಮಾಣಿಕತೆಗೆ ಗೌರವ. ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ ಲಾಭ ಪ್ರಾಪ್ತಿ. ಲೋಹ ಸಂಬಂಧಿ ವ್ಯವಹಾರದಲ್ಲಿ ಲಾಭ.

Advertisement

ಕನ್ಯಾ: ಆರೋಗ್ಯ ಸುಧಾರಣೆ. ಶಾಂತವಾಗಿ ಕಾರ್ಯಪ್ರವೃತ್ತರಾಗಿರಿ. ಉದ್ಯೋಗ ಕ್ಷೇತ್ರದಲ್ಲಿ ಸಹಕಾರದ ವಾತಾವರಣ. ಗಣ್ಯರಿಂದ ಕಾರ್ಯ ವೀಕ್ಷಣೆ. ಹೊಸ ವ್ಯಕ್ತಿಗಳ ಪರಿಚಯದಿಂದ ಲಾಭ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಗೋಚರ.

ತುಲಾ: ಆಗಬಾರದ್ದು ಆದೀತೆಂಬ ಚಿಂತೆ ಬೇಡ. ಗುರು ದೇವತಾನುಗ್ರಹದಿಂದ ಆಪತ್ತು ದೂರ. ಉದ್ಯೋಗ ಸ್ಥಾನದಲ್ಲಿ ಶಾಂತ ವಾತಾವರಣ. ಸಹೋದ್ಯೋಗಿಗಳಿಂದ ಸಹಕಾರ. ಹಳೆಯ ಸ್ನೇಹ ನವೀಕರಣದಿಂದ ಸ್ವಂತದ ಸ್ಥಿತಿ ಸುಧಾರಣೆಗೆ ಸಹಾಯ.

ವೃಶ್ಚಿಕ: ಅದೃಷ್ಟದ ಆಟಕ್ಕೆ ತಲೆಬಾಗಲೇ ಬೇಕು. ಸುಖ ಜೀವನ ನಿರ್ವಹಣೆಗೆ ಏನೂ ಕೊರತೆಯಾಗದು. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಸ್ವಂತ ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಉತ್ತರ ದಿಕ್ಕಿನಿಂದ ವಿಶೇಷ ವಾರ್ತೆ. ಅಧ್ಯಾತ್ಮ ಚಿಂತನೆ, ಸತ್ಸಂಗ, ಸಂಗೀತ ಶ್ರವಣದಲ್ಲಿ ಆಸಕ್ತಿ.

ಧನು: ಮನೆಯಲ್ಲಿ ಎಲ್ಲರ ಆರೋಗ್ಯ ಸ್ಥಿತಿ ಉತ್ತಮ. ಹಳೆಯ ಒಡನಾಡಿಯ ಭೇಟಿಯಿಂದ ಕಾರ್ಯಯೋಗ್ಯ ಮಾಹಿತಿ ಲಭ್ಯ. ಉದ್ಯೋಗ ಸ್ಥಾನದಲ್ಲಿ ಕೆಲಸಕ್ಕೆ ಉತ್ತೇಜಕವಾದ ವಾತಾವರಣ. ಸರಕಾರಿ ಅಧಿಕಾರಿ ಗಳಿಗೆ ಆಯಕಟ್ಟಿನ ಸ್ಥಾನದಿಂದ ವರ್ಗಾವಣೆ ಸಂಭವ.

ಮಕರ: ಸಹನೆ, ಸಂಯಮಗಳೇ ನಿಮ್ಮ ಮುಖ್ಯ ಕಾರ್ಯಸಾಧನಗಳು. ಉದ್ಯೋಗ ಸ್ಥಾನದಲ್ಲಿ ಮಾಮೂಲಿನಂತೆ ಕೆಲಸದ ಒತ್ತಡ. ಕುಟುಂಬದ ಹಿರಿಯರಿಂದ ಬೆಂಬಲ. ಸ್ವಂತ ವ್ಯವಹಾರ, ಉದ್ಯಮ ನಡೆಸುವವರಿಗೆ ಸಮಯದೊಂದಿಗೆ ಸೆಣಸಾಟ.

ಕುಂಭ: ದೊಡ್ಡ ಕಾರ್ಯವೊಂದು ಮುಗಿಯು ತ್ತಿದ್ದಂತೆ ಮತ್ತೂಂದು ಜವಾಬ್ದಾರಿ. ಉದ್ಯೋಗ ಸ್ಥಾನದಲ್ಲಿ ಆಯಕಟ್ಟಿನ ಸ್ಥಾನವೊಂದರ ಹೊಣೆಗಾರಿಕೆ. ಧಾರ್ಮಿಕ ಸಂಸ್ಥೆಯೊಂದರ ಮೂಲಕ ಸಮಾಜ ಸೇವೆಯಲ್ಲಿ ಹೆಚ್ಚಿನ ಪಾತ್ರ ನಿರ್ವಹಣೆಗೆ ಅವಕಾಶ.

ಮೀನ: ಸಮರ್ಪಣಾ ಭಾವದಿಂದ ಕೈಗೊಂಡ ಕಾರ್ಯಕ್ಕೆ ಯಶಸ್ಸು. ಸರಕಾರಿ ಕಾರ್ಯಾಲಯಗಳಲ್ಲಿ ಆಗಬೇಕಾದ ಕಾರ್ಯಗಳು ನಿರಾತಂಕ. ಸಾಮಾಜಿಕ ಕಾರ್ಯಗಳಿಗೆ ಉತ್ತಮ ಸ್ಪಂದನೆ. ಅಭಿವೃದ್ಧಿ ಕಾರ್ಯಗಳ ನೀಲನಕ್ಷೆ ತಯಾರಿ. ಗೃಹೋದ್ಯಮ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ. ಕೃಷಿಯಲ್ಲಿ ಆಸಕ್ತರಿಗೆ ಅವಕಾಶಗಳು ಗೋಚರ. ಸೇವಾರೂಪದ ವೃತ್ತಿಗಳನ್ನು ನಿರ್ವಹಿಸುವವರಿಗೆ ಉತ್ತಮ ಸ್ಪಂದನೆ.

Advertisement

Udayavani is now on Telegram. Click here to join our channel and stay updated with the latest news.

Next