Advertisement
ಇದು ಮಧ್ಯಂತರ ಬಜೆಟ್ ಆಗಿರುವುದರಿಂದ ರೈತರ ಸಾಲಮನ್ನಾದಂತಹ ಪ್ರಮುಖ ಘೋಷಣೆಗಳನ್ನು ಇಲ್ಲಿ ಕಾಣಲು ಸಾಧ್ಯವಾಗದಿದ್ದರೂ, ಆ ಸಾಲದ ಮೇಲಿನ ಬಡ್ಡಿಯಾದರೂ ಮನ್ನಾ ಮಾಡಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳಬಹುದು. ಸರಕು ಸೇವಾ ತೆರಿಗೆಗೆ ಕೈಹಾಕಲು ಆಗದಿದ್ದರೂ, ಆದಾಯ ತೆರಿಗೆ ಮಿತಿಯನ್ನು ವಿಸ್ತರಿಸುವ ಮೂಲಕ ತೆರಿಗೆದಾರರನ್ನು ಖುಷಿಪಡಿಸಬಹುದು. ಈ ನಿಟ್ಟಿನಲ್ಲಿ ಬಜೆಟ್ ಹೆಚ್ಚು ಮಹತ್ವ ಪಡೆದುಕೊಂಡಿದೆ ಎನ್ನುತ್ತಾರೆ ತಜ್ಞರು.
Related Articles
Advertisement
“ಸ್ಟಾರ್ಟ್ಅಪ್ಗ್ಳಿಗೆ ಒತ್ತು ಕೊಡಲಿ’ದೇಶದ ಆರ್ಥಿಕತೆಯಲ್ಲಿ ಸ್ಟಾರ್ಟ್ಅಪ್ಗ್ಳು ಗಮನಾರ್ಹ ಪಾತ್ರ ನಿರ್ವಹಿಸುತ್ತಿವೆ. ಇವುಗಳನ್ನು ಸೆಳೆಯಲು ಷೇರು ಬಂಡವಾಳ ಹೂಡಿಕೆಗೆ ಪೂರಕ ಯೋಜನೆಗಳನ್ನು ಘೋಷಿಸಬೇಕು. ವೈಯಕ್ತಿಕ ತೆರಿಗೆ ವಿನಾಯ್ತಿ ಎರಡೂವರೆ ಲಕ್ಷ ರೂ. ಇದೆ. ಇದರ ಮಿತಿಯನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದೆ. ಇದರಿಂದ ಹೆಚ್ಚು ಹೂಡಿಕೆ ನಿರೀಕ್ಷಿಸಬಹುದು. ಅಂತಿಮವಾಗಿ ಇದು ಸರ್ಕಾರಕ್ಕೂ ಆದಾಯ ತಂದುಕೊಡಲಿದೆ ಎಂದು ಆರ್ಥಿಕ ತಜ್ಞ ಎನ್. ನಿತ್ಯಾನಂದ ವಿಶ್ಲೇಷಿಸುತ್ತಾರೆ. ಮಧ್ಯಂತರ ಬಜೆಟ್ ಇದಾಗಿರುವುದರಿಂದ ಮುಂದಿನ ಮೂರ್ನಾಲ್ಕು ತಿಂಗಳಿಗೆ ಮಾಡಬಹುದಾದ ಖರ್ಚು-ವೆಚ್ಚಗಳ ಅಂದಾಜು ಇಲ್ಲಿ ಇರುತ್ತದೆ. ಹಾಗಾಗಿ, ಪ್ರಮುಖ ಘೋಷಣೆಗಳನ್ನು ಇಲ್ಲಿ ನಿರೀಕ್ಷಿಸಲಾಗದು. ಆದರೆ, ಜನಸಾಮಾನ್ಯರ ಹಿತದೃಷ್ಟಿಯಿಂದ ಆದಾಯ ತೆರಿಗೆ ವಿನಾಯ್ತಿ ಪ್ರಮಾಣ ವಿಸ್ತರಿಸಬಹುದು. ಹಿರಿಯ ನಾಗರಿಕರಿಗೆ ಇರುವ ತೆರಿಗೆ ವಿನಾಯ್ತಿ ಮಿತಿಯನ್ನೂ ವಿಸ್ತರಿಸಿದರೆ ಉತ್ತಮ. ಇದೆಲ್ಲವೂ ಪಿಂಚಣಿ, ಭವಿಷ್ಯನಿಧಿಯಂತಹ ವಿವಿಧ ರೂಪದಲ್ಲಿ ಪುನಃ ಸರ್ಕಾರದ ಬೊಕ್ಕಸಕ್ಕೆ ಹರಿದುಬರುತ್ತದೆ ಎಂದು ತೆರಿಗೆ ತಜ್ಞ ಬಿ.ಟಿ. ಮನೋಹರ್ ಅಭಿಪ್ರಾಯಪಡುತ್ತಾರೆ. ಆದಾಯ ದುಪ್ಪಟ್ಟಿಗೆ ಬೇಕು ಯೋಜನೆ
ರೈತರ ಆದಾಯ ದುಪ್ಪಟ್ಟುಗೊಳಿಸುವುದಾಗಿ ಈ ಹಿಂದೆಯೇ ಘೋಷಿಸಿದೆ. ಈಗ ಅದಕ್ಕೆ ಪೂರಕವಾದ ಯೋಜನೆಗಳನ್ನು ಸರ್ಕಾರದಿಂದ ನಿರೀಕ್ಷಿಸಲಾಗುತ್ತಿದೆ. ಸಮಗ್ರ ಕೃಷಿ ರೈತನ ಬದುಕಿಗೆ ಆಸರೆ ಆಗಬಲ್ಲದು ಎಂಬುದು ಈಗಾಗಲೇ ಸಾಬೀತಾಗಿದೆ. ಇದನ್ನು ಒಂದು ಮಿಷನ್ ರೀತಿಯಲ್ಲಿ ಕೊಂಡೊಯ್ಯಬೇಕು. ಈ ಮಾದರಿಗೆ ಮುಖ್ಯವಾಗಿ ಬೇಕಾಗಿರುವುದು ನೀರಿನ ಸೌಲಭ್ಯ. ಕೃಷಿ ಹೊಂಡದಂತಹ ಕಾರ್ಯಕ್ರಮಗಳನ್ನು ಘೋಷಿಸುವ ಅವಶ್ಯಕತೆ ಇದೆ. ಅಲ್ಲದೆ, ಈಗಾಗಲೇ ಇರುವ ಗ್ರಾಮ ಸಡಕ್ ಯೋಜನೆ, ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ ಸೇರಿದಂತೆ ಹತ್ತುಹಲವು ಯೋಜನೆಗಳನ್ನು ಫಲಾನುಭವಿಗಳ ಮನೆಬಾಗಿಲಿಗೆ ಕೊಂಡೊಯ್ಯಲು ಸಂಯೋಜಕರನ್ನು ನೇಮಿಸುವ ಅವಶ್ಯಕತೆ ಇದೆ ಎಂದು ಸಾಮಾಜಿಕ-ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ಎಂ.ಜಿ. ಚಂದ್ರಕಾಂತ್ ಹೇಳುತ್ತಾರೆ. – ವಿಜಯಕುಮಾರ ಚಂದರಗಿ