Advertisement

Horoscope Today: ಎಂತಹ ಆಪತ್ತನ್ನೂ ಎದುರಿಸುವ ಧೈರ್ಯವೇ ನಿಮಗೆ ರಕ್ಷೆ

07:21 AM Nov 08, 2023 | Team Udayavani |

ಮೇಷ: ಅನೇಕ ವಿಷಯಗಳಲ್ಲಿ ಆಸಕ್ತಿ. ಉದ್ಯೋಗದಲ್ಲಿನ ಸ್ಥಾನ ಅಚಲ. ಕಿರಿಯ ಸಹೋದ್ಯೋಗಿಗಳಿಗೆ ಮಾರ್ಗರ್ಶನ ಮಾಡುವ ಜವಾಬ್ದಾರಿ. ಸ್ವಂತ ಉದ್ಯಮದಲ್ಲಿ ಹೊಸಬರಿಗೆ ತರಬೇತಿ ನೀಡುವವರಿಗಾಗಿ ಹುಡುಕಾಟ. ಉತ್ಪನ್ನಗಳ ಜನಪ್ರಿಯತೆ ಹೆಚ್ಚಳ.

Advertisement

ವೃಷಭ: ಭಗವಂತನ ಮೇಲೆ ಪೂರ್ಣ ವಿಶ್ವಾಸವಿರಲಿ. ಉದ್ಯೋಗದಲ್ಲಿ ಪ್ರತಿಭೆಗೆ ಮನ್ನಣೆ. ಸ್ವಂತ ಉದ್ಯಮದ ಉತ್ಪನ್ನಗಳಿಗೆ ಜನಾಕರ್ಷಣೆ. ಉದ್ಯಮಶೀಲತೆಯಿಂದ ಸಮಾಜದಲ್ಲಿ ಗೌರವ ವೃದ್ಧಿ. ಮನೆ ನಿವೇಶನ ಖರೀದಿ.ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಕಾಲಿಡಲು ಚಿಂತನೆ.

ಮಿಥುನ: ಮನಸ್ಸಿಗೆ ಧೈರ್ಯವನ್ನು ತುಂಬಿಸಿ ಕೊಂಡು ಮುಂದುವರಿದರೆ ಜಯ ಖಚಿತ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಪ್ರತಿಭೆಗೆ ಯೋಗ್ಯ ಸ್ಥಾನ. ಸ್ವಂತ ಉದ್ಯಮ ಉತ್ಕರ್ಷದ ದಾರಿಯಲ್ಲಿ. ಉತ್ಪನ್ನಗಳಿಗೆ ಬೇಡಿಕೆ ವೃದ್ಧಿ.

ಕರ್ಕಾಟಕ: ಸಂತೋಷದ ದಿನ. ಉದ್ಯೋಗ ಸ್ಥಾನದಲ್ಲಿ ಪ್ರತಿಭೆಗೆ ಪುರಸ್ಕಾರ. ಹೊಸ ಉದ್ಯೋಗಿಗಳಿಗೆ ಮಾರ್ಗದರ್ಶನ ಮಾಡುವ ಜವಾಬ್ದಾರಿ. ಸ್ವಂತ ಉದ್ಯಮ ಉತ್ಕರ್ಷದಲ್ಲಿ. ನೂತನ ವಾಹನ ಖರೀದಿ.ಗೃಹಿಣಿಯರ ಉದ್ಯಮ ಅಭೂತಪೂರ್ವ ಯಶಸ್ಸಿನ ಹಂತದಲ್ಲಿ.

ಸಿಂಹ: ಎಂತಹ ಆಪತ್ತನ್ನೂ ಎದುರಿಸುವ ಧೈರ್ಯವೇ ನಿಮಗೆ ರಕ್ಷೆ.  ಉದ್ಯೋಗ ಸ್ಥಾನದಲ್ಲಿ ಅಯಾಚಿತ ಗೌರವ ಪ್ರಾಪ್ತಿ. ಸ್ವಂತ ಉದ್ಯಮದ  ಬೆಳವಣಿಗೆಗೆ ಹಿರಿಯ ನೌಕರರ ಜತೆಯಲ್ಲಿ ಸಮಾಲೋಚನೆ.  ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಕುರಿತು ಚಿಂತನೆ.

Advertisement

ಕನ್ಯಾ: ನಿಮ್ಮಲ್ಲಿರುವ ಸುಪ್ತ ಪ್ರತಿಭೆಗಳು ಬೆಳಕಿಗೆ ಬರುವ ಸಮಯ. ಉದ್ಯೋಗದಲ್ಲಿ ಯಶಸ್ಸು. ಸಹೋದ್ಯೋಗಿಗಳಿಗೆ ಮಾರ್ಗದರ್ಶನ. ಸ್ವಂತ ಉದ್ಯಮ ಹೊಂದಿದವರಿಗೆ  ನಿಧಾನವಾಗಿ ಅಭಿವೃದ್ಧಿ. ಹಳೆಯ ಒಡನಾಡಿಗಳ ಅಕಸ್ಮಾತ್‌ ಭೇಟಿ. ಪ್ರಾಕೃತಿಕ ತಾಣದ ಸಂದರ್ಶನದಿಂದ  ಮನಶಾಂತಿ.

ತುಲಾ: ಚಂಚಲ ಮನಸ್ಸನ್ನು  ಸ್ಥಿರಗೊಳಿಸುವ ಪ್ರಯತ್ನ. ಆಯ್ಕೆಗಳ ವಿಷಯದಲ್ಲಿ ಗೊಂದಲ ನಿವಾರಣೆ. ಉದ್ಯೋಗದಲ್ಲಿ ಸ್ಥಿರ ಪರಿಸ್ಥಿತಿ. ಉದ್ಯಮಿಗಳಿಗೆ ಅನುಕೂಲಕರ ಪರಿಸ್ಥಿತಿ. ಕುಟುಂಬ ಕಲಹ ನಿವಾರಣೆ. ಸಾಮರಸ್ಯ ವೃದ್ಧಿಗೆ ದೇವತಾ ಕಾರ್ಯ.

ವೃಶ್ಚಿಕ: ಸಂತೃಪ್ತಿ, ಸಮಾಧಾನದ ದಿನ. ಉದ್ಯೋಗ ಸ್ಥಾನದಲ್ಲಿ ಪ್ರಶಂಸೆ. ಪ್ರತಿಭೆಗೆ ಗೌರವ ಸಲ್ಲಿಕೆ. ಮಕ್ಕಳ ಉದ್ಯಮ ಪ್ರಗತಿಯಲ್ಲಿ. ಆಪ್ತರಿಂದ ಪ್ರಶಂಸೆಯ ಮಾತುಗಳು.  ಬಹುಕಾಲದಿಂದ ತೀರ್ಮಾನವಾಗದೆ ಉಳಿದಿದ್ದ ಆಸ್ತಿ ವಿವಾದ ಪರಿಹಾರ.

ಧನು: ಸಮಾಧಾನದ ಮನಸ್ಥಿತಿ. ಸಂಕಟಗಳನ್ನು ಗಟ್ಟಿಯಾದ ಮನಸ್ಸಿನಿಂದ ಎದುರಿಸಿ. ಉದ್ಯೋಗದ ಜವಾಬ್ದಾರಿಗಳ ನಿರ್ವಹಣೆಯಲ್ಲಿ ಯಶಸ್ವಿ. ಕಾರ್ಯಸಾಮರ್ಥ್ಯಕ್ಕೆ ಮೇಲಧಿಕಾರಿಗಳ ಮತ್ತು ಸಹೋದ್ಯೋಗಿಗಳ ಪ್ರಶಂಸೆ.

ಮಕರ: ತೀವ್ರವಾದ ಆತ್ಮವಿಮರ್ಶೆ ಮಾಡಿ ಕೊಳ್ಳಬೇಕಾದ ಸಂದರ್ಭ. ನಿಮ್ಮ ಸಣ್ಣ ಪ್ರತಿಕ್ರಿಯೆಯಿಂದಲೂ ಬೇರೆಯವರಿಗೆ ನೋವಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಿಮ್ಮದು. ಉದ್ಯೋಗ ನಿರಾತಂಕ. ಕಾರ್ಯಸಾಮರ್ಥ್ಯಕ್ಕೆ ಮೆಚ್ಚುಗೆ.

ಕುಂಭ: ಸಮಾಧಾನದಿಂದ ಯೋಚಿಸಿ ಕಾರ್ಯ ಕೈಗೊಳ್ಳಿ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ ಪಾಲನೆ. ಸಹೋದ್ಯೋಗಿಗಳಿಗೆ ಸೂಕ್ತ ಮಾರ್ಗದರ್ಶನ. ಕಾರ್ಯಸಾಧನೆಯಿಂದ ವೃತ್ತಿರಂಗದಲ್ಲಿ ಗುರುಸ್ಥಾನ ಪ್ರಾಪ್ತಿ. ಬಂಧುವರ್ಗದವರಿಂದ ಪ್ರೀತಿ ಪ್ರಕಟನೆ.

ಮೀನ: ಸ್ಥಿಮಿತವುಳ್ಳ ಮನಸ್ಸೇ ನಿಮ್ಮ ಶಕ್ತಿ. ಉದ್ಯೋಗದಲ್ಲಿ ಅನುಕೂಲದ ವಾತಾವರಣ. ನಿರೀಕ್ಷಿತ ವ್ಯಕ್ತಿಗಳಿಂದ ಸಕಾರಾತ್ಮಕ ಸ್ಪಂದನದಿಂದಾಗಿ ಅಪೇಕ್ಷಿತ ಕಾರ್ಯ ಸುಲಭವಾಗಿ ಈಡೇರಿಕೆ. ಆಪ್ತರಿಂದ ಸಕಾಲಿಕ ಮಾರ್ಗದರ್ಶನ. ಪರಂಪರಾಗತ ವೃತ್ತಿಯನ್ನು ಪುನರುಜ್ಜೀವನಗೊಳಿಸುವ ಹಂಬಲ. ಕುಟುಂಬದ ಆರಾಧನಾ ಕ್ಷೇತ್ರಕ್ಕೆ ಭೇಟಿ ಸಂಭವ.

Advertisement

Udayavani is now on Telegram. Click here to join our channel and stay updated with the latest news.

Next