Advertisement

ಇಂದು, ನಾಳೆ ಬಂದ್‌ ಬಿಸಿ

12:30 AM Jan 08, 2019 | Team Udayavani |

ಹೊಸದಿಲ್ಲಿ/ಬೆಂಗಳೂರು: ಹತ್ತು ಕಾರ್ಮಿಕ ಒಕ್ಕೂಟಗಳು ಕೇಂದ್ರ ಸರಕಾರದ ಹಲವು ನೀತಿ ಖಂಡಿಸಿ  ಜ.8, 9ರಂದು ಭಾರತ ಬಂದ್‌ಗೆ ಕರೆ ನೀಡಿವೆ. ಅದರಿಂದಾಗಿ ಕರ್ನಾಟಕ ಸಹಿತ ದೇಶಾದ್ಯಂತ ಜನಜೀವನಕ್ಕೆ ತೊಂದರೆಯಾಗಲಿದೆ. ಹೀಗಾಗಿ ರಾಜ್ಯದಲ್ಲಿ ಯಾವ ಸೇವೆ ಸಿಗಲಿದೆ ಎಂಬ ಪಕ್ಷಿನೋಟ ಇಲ್ಲಿದೆ

Advertisement

ದ.ಕ., ಉಡುಪಿ ಶಾಲೆ-ಕಾಲೇಜಿಗೆ ರಜೆ
ಬಂದ್‌ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಾರದೆಂಬ ನಿಟ್ಟಿನಲ್ಲಿ ಜ. 8ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎಲ್ಲ ಶಾಲಾ ಮತ್ತು  ಕಾಲೇಜುಗಳಿಗೆ ದ.ಕ. ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಮತ್ತು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ರಜೆ ಘೋಷಿಸಿದ್ದಾರೆ.

ಮಂವಿವಿ ಪರೀಕ್ಷೆ ಮುಂದೂಡಿಕೆ 
ಮಂಗಳೂರು ವಿ.ವಿ.ಯ ಪದವಿ ಪ್ರಾಕ್ಟಿಕಲ್‌ ಪರೀಕ್ಷೆಗಳು ಸೋಮವಾರದಿಂದ ಆರಂಭವಾಗಿವೆ. ಆದರೆ ಮಂಗಳವಾರ ಮತ್ತು ಬುಧವಾರದ ಬಂದ್‌ ಹಿನ್ನೆಲೆಯಲ್ಲಿ ಪ್ರಾಕ್ಟಿಕಲ್‌ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಪೆಟ್ರೋಲ್‌ ಬಂಕ್‌ಗಳು ಎಂದಿನಂತೆ ತೆರೆಯಲಿವೆ. ತರಕಾರಿ, ಹಾಲು ಸಹ ಲಭ್ಯ.
ಕೆಎಸ್ಸಾರ್ಟಿಸಿ, ಖಾಸಗಿ ಬಸ್‌ಗಳ ಸಂಚಾರ ನಿಲುಗಡೆ ಸಾಧ್ಯತೆ ಇದೆ.
ಖಾಸಗಿ ಶಾಲೆಗಳು ಎರಡು ದಿನ, ಸರಕಾರಿ ಶಾಲೆಗಳು ಒಂದು ದಿನ ರಜೆ ಘೋಷಿಸಿದೆ.
ಪಿಯು ಪ್ರಿಪರೇಟರಿ ಪರೀಕ್ಷೆ ಸಹಿತ ಹಲವು ಪರೀಕ್ಷೆಗಳು ಮುಂದಕ್ಕೆ
ವೈದ್ಯಕೀಯ ಸೇವೆಗಳಿಗೆ ಅಡ್ಡಿ ಇಲ್ಲ. ಮೆಡಿಕಲ್‌ ಶಾಪ್‌, ಆಸ್ಪತ್ರೆ ತೆರೆದಿರುತ್ತವೆ.
ರೈಲುಗಳ ಮತ್ತು ಮೆಟ್ರೊ ಸಂಚಾರಕ್ಕೆ ಯಾವುದೇ ಅಡ್ಡಿ  ಇಲ್ಲ.
ಆಟೋ ರಿಕ್ಷಾ ಓಡಾಟ ಸಂಶಯ; ಓಲಾ, ಉಬರ್‌ ಟ್ಯಾಕ್ಸಿ ಸೇವೆಗೆ ಸಮಸ್ಯೆ ಇಲ್ಲ.
ಬ್ಯಾಂಕ್‌ಗಳ ಕಾರ್ಯನಿರ್ವಹಣೆ ಎರಡು ದಿನ ಸ್ಥಗಿತ

Advertisement

Udayavani is now on Telegram. Click here to join our channel and stay updated with the latest news.

Next