Advertisement
ಹಳದಿ ಶಾಲು-ಗುರುತು ಚೀಟಿ30 ಸಾವಿರ ಮಂದಿಗೆ ಉಪಾಹಾರ ವ್ಯವಸ್ಥೆಗೊಳಿಸಲಾಗಿದ್ದು, ಸುಮಾರು 200ಕ್ಕೂ ಮಿಕ್ಕಿ ಯುವಕರನ್ನು ಉಪಾಹಾರ ವ್ಯವಸ್ಥೆ ನಿರ್ವಹಣೆಗೆ ನಿಯೋಜಿಸಲಾಗಿದೆ. ಸಮಾವೇಶಕ್ಕೆ ಬರುವ ಸಮಾಜದವರಿಗೆ ನೀರು ಮತ್ತು ಮಜ್ಜಿಗೆ ವ್ಯವಸ್ಥೆ ಮಾಡಲಾಗಿದ್ದು, ಇದರ ನಿರ್ವಹಣೆಗೆ 200 ಮಂದಿ ಮಹಿಳೆಯರನ್ನು ನೇಮಿಸಲಾಗಿದೆ. ಪಾರ್ಕಿಂಗ್ ವ್ಯವಸ್ಥೆಗೆ ಆರಕ್ಷಕರೊಂದಿಗೆ 140 ಯುವಕರನ್ನು ನೇಮಿಸಲಾಗಿದೆ. ಸಭಾಂಗಣದಲ್ಲಿ ಸಭಿಕರಿಗೆ 25 ಸಾವಿರ ಆಸನ ವ್ಯವಸ್ಥೆಗೊಳಿಸಲಾಗಿದೆ. 1,500 ಸ್ವಯಂಸೇವಕರಿಗೆ ಹಳದಿ ಶಾಲು, ಗುರುತು ಚೀಟಿ ನೀಡಲಾಗಿದೆ. 500 ಸಂಘಟಕರಿಗೆ, 50 ಮಂದಿ ವಿಶೇಷ ಆಹ್ವಾನಿತರಿಗೆ ಗುರುತಿಗಾಗಿ ಶಾಲು ನೀಡಲಾಗುವುದು ಎಂದು ಪ್ರಚಾರ ಸಮಿತಿಯ ಅಧ್ಯಕ್ಷ ಅಶೋಕ್ ಪೂಜಾರಿ ಹಾರಾಡಿ ತಿಳಿಸಿದ್ದಾರೆ.
ಹಿಂದುಳಿದ ವರ್ಗದ ಮೀಸಲಾತ್ನಿಯನ್ನು ಪ್ರವರ್ಗ “2ಎ’ಯಿಂದ ಪ್ರವರ್ಗ 1ಕ್ಕೆ ಬದಲಾಯಿಸಬೇಕು, ಬ್ರಹ್ಮಶ್ರೀ ನಾರಾಯಣಗುರು ಯೋಜನೆ ನಿಗಮ ಸ್ಥಾಪಿಸಬೇಕು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ, ಬಿಲ್ಲವ ಜನಾಂಗದ ಕಸುಬಾದ ಕೃಷಿ ಹಾಗೂ ಇತರ ಸೊÌàದ್ಯೋಗ ಚಟುವಟಿಕೆಗಳಿಗೆ ಬಡ್ಡಿರಹಿತ ಸಾಲ ಸೌಲಭ್ಯ ನೀಡಬೇಕು, ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಅರ್ಚಕರಿಗೆ ಮಾಸಾಶನ ಸೌಲಭ್ಯ ಹಾಗೂ ಗರೋಡಿಗಳ ಪಹಣಿ
ಪತ್ರವನ್ನು ಗರೋಡಿಗಳ ಹೆಸರಿಗೆ ಮಾರ್ಪಾಡು ಮಾಡಬೇಕು, ದೇಶದಲ್ಲಿ ಕೇವಲ ಜಾತಿ, ಸಮುದಾಯ ಹಾಗೂ ಪಂಗಡ ಆಧಾರಿತ ಮೀಸಲಾತಿ ಇದೆ, ಆದರೆ ಬಿಲ್ಲವ ಸಮುದಾಯ ಈ ಮೀಸಲಾತಿ ಪಡೆದುಕೊಂಡಿಲ್ಲ.
Related Articles
Advertisement