Advertisement
ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆದ ಸಂಘ-ಸಂಸ್ಥೆ ಮುಖ್ಯಸ್ಥರ, ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಅನೇಕ ಕಾರಣಗಳಿಂದಾಗಿ ಕನ್ನಡ ರಾಜ್ಯೋತ್ಸವ, ಗ್ರಾಮೀಣ ದಸರಾ ಮುಂದೂಡಲಾಗಿತ್ತು.
Related Articles
Advertisement
ತಾಪಂ ಇಒ ಕೃಷ್ಣಕುಮಾರ್ ಮಾತನಾಡಿ, ಮೆರವಣಿಗೆಯಲ್ಲಿ ವಿವಿಧ ಇಲಾಖೆಗಳ 13 ಸ್ತಬ್ಧಚಿತ್ರಗಳು, ಪೊಲೀಸ್ ಬ್ಯಾಂಡ್ ವಾದನ, ಶಾಲಾ ವಿದ್ಯಾರ್ಥಿಗಳ ಬ್ಯಾಂಡ್ಸೆಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸ್ಥಳೀಯ 20 ಕ್ಕೂ ಹೆಚ್ಚು ಕಲಾತಂಡಗಳು ಹಾಗೂ ವಿವಿಧ ದೇಶಗಳ ಯುವ ಸಮೂಹ ಸಹ ಭಾಗವಹಿಸಲಿವೆ. ಭುವನೇಶ್ವರಿ ದೇವಿಯ ಭವ್ಯ ಮಂಟಪದಲ್ಲಿರಿಸಿ ಮೆರವಣಿಗೆ ಸಾಗಲಿದೆ.
ನಂತರ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಸ್ಥಳೀಯ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಟಿಬೇಟಿಯನ್ನರು ಹಾಗೂ ಗಾವಡಗೆರೆ ಕಾಲೇಜಿನ ತಂಡದಿಂದ ನಾಟಕ, ಮತ್ತು ಸುಗಮ ಸಂಗೀತ ಆಯೋಜಿಸಲಾಗಿದೆ ಎಂದರು. ಸಭೆಯಲ್ಲಿ ನಗರಸಭೆ ಅಧ್ಯಕ್ಷ ಎಚ್.ವೈ.ಮಹದೇವ್, ತಹಶೀಲ್ದಾರ್ ಮೋಹನ್, ಪೌರಾಯುಕ್ತ ಶಿವಪ್ಪನಾಯಕ, ಬಿಇಒ ನಾಗರಾಜ್ ಇತರರಿದ್ದರು.