Advertisement

ಇಂದು ಸಂಜೆ ಡ್ರಾಮಾ ಜೂನಿಯರ್ ಫಿನಾಲೆ

09:06 AM Mar 25, 2019 | Lakshmi GovindaRaju |

ಕಿರುತೆರೆ ಪ್ರೇಕ್ಷಕರಿಗೆ ಜೀ ಕನ್ನಡ ವಾಹಿನಿ ಈಗಾಗಲೇ ಹಲವು ಧಾರಾವಾಹಿಗಳು ಸೇರಿದಂತೆ ಸಾಕಷ್ಟು ರಿಯಾಲಿಟಿ ಶೋ ಕಾರ್ಯಕ್ರಮಗಳನ್ನು ಕೊಡುತ್ತ ಬಂದಿದೆ. ಈಗಾಗಲೇ “ಡ್ರಾಮಾ ಜೂನಿಯರ್’ ಸಾಕಷ್ಟು ಗಮನಸೆಳೆದ ರಿಯಾಲಿಟಿ ಶೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Advertisement

ಈ ಬಾರಿ “ಡ್ರಾಮಾ ಜೂನಿಯರ್ ಸೀಸನ್‌ 3 ಗ್ರ್ಯಾಂಡ್‌ ಫಿನಾಲೆ ನಡೆದದ್ದು ತಿಪಟೂರಿನಲ್ಲಿ. ಗ್ರ್ಯಾಂಡ್‌ ಫಿನಾಲೆ ತಿಪಟೂರಿನಲ್ಲಿ ನಡೆಯಲಿದೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಅಲ್ಲಿನ ಜನರು, ಪ್ರೀತಿಯಿಂದಲೇ ಪುಟಾಣಿಗಳನ್ನು ಸ್ವಾಗತಿಸಿದ ಖುಷಿ ಹೇಳತೀರದು.

ತಿಪಟೂರಿನ ಕ್ರೀಡಾಂಗಣದಲ್ಲಿ ಸೇರಿದ್ದ ಸಾವಿರಾರು ಜನರ ನಡುವೆ “ಡ್ರಾಮಾ ಜೂನಿಯರ್ ಸೀಸನ್‌ 3′ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. ಇಷ್ಟು ದಿನಗಳ ಕಾಲ ವಾಹಿನಿ ಆಯೋಜಿಸಿದ್ದ “ಡ್ರಾಮಾ ಜೂನಿಯರ್’ ವೇದಿಕೆಯಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದ ಮಕ್ಕಳು, ಗ್ರ್ಯಾಂಡ್‌ ಫಿನಾಲೆಯಲ್ಲಿ ಮತ್ತಷ್ಟು ಮನರಂಜನೆ ನೀಡಿದ್ದು ವಿಶೇಷ.

ಇನ್ನು, ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಮಹಾದೇವಿ’, “ಕಮಲಿ’, “ಪಾರು’ ಧಾರಾವಾಹಿಗಳ ನಾಯಕ, ನಾಯಕಿಯರಾದ ಕಮಲಿ, ರಿಷಿ, ಪಾರು, ಆದಿತ್ಯ, ಹಿರಣ್ಮಯಿ ಹಾಗೂ ಸೂರ್ಯ ಅವರು ಆ ವೇದಿಕೆಯಲ್ಲಿ ಸ್ಟೆಪ್‌ ಹಾಕುವ ಮೂಲಕ ಮತ್ತಷ್ಟು ಮೆರುಗು ನೀಡಿದರು.

ಇದರೊಂದಿಗೆ “ಸರಿಗಮಪ ಸೀಸನ್‌15ರ ವಿಜೇತರಾದ ಕೀರ್ತನ್‌ ಹೊಳ್ಳ, ಹನುಮಂತ ಅವರು ಡ್ರಾಮಾ ಜೂನಿಯರ್ ಗ್ರ್ಯಾಂಡ್‌ ಫಿನಾಲೆ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದರು. ನಿರೂಪಕ ಮಾಸ್ಟರ್‌ ಆನಂದ್‌ ಮತ್ತು ತೀರ್ಪುಗಾರರಾದ ವಿಜಯ ರಾಘವೇಂದ್ರ, ಜೂಲಿ ಲಕ್ಷ್ಮೀ ಹಾಗು ಮುಖ್ಯಮಂತ್ರಿ ಚಂದ್ರು ಅವರು ವೇದಿಕೆಗೆ ಬಂದು ಮಕ್ಕಳಿಗೆ ಶುಭ ಕೋರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡದರು.

Advertisement

ಗ್ರ್ಯಾಂಡ್‌ ಫಿನಾಲೆಯಲ್ಲಿ ಗ್ರೂಪ್‌ ಆ್ಯಕ್ಟ್, ಜುಗಲ್ ಬಂಧಿ ಹಾಗು ಸೋಲೋ ರೌಂಡ್‌ ಹೀಗೆ 3 ಹಂತದಲ್ಲಿ ಕಾರ್ಯಕ್ರಮ ನಡೆಯಿತು. ಒಬ್ಬೊಬ್ಬರದು ಒಂದೊಂದು ಬಗೆಯ ಅಭಿನಯವಿತ್ತು. ಅದನ್ನು ಕಂಡ ತಿಪಟೂರು ಮಂದಿ ಮೊಗದಲ್ಲಿ ಮತ್ತಷ್ಟು ಖುಷಿ. ಆದರೆ, ಒಬ್ಬರಿಗಿಂತ ಒಬ್ಬರು ಅದ್ಭುತ ಪ್ರದರ್ಶನ ಕೊಟ್ಟರೂ, ಆ ಪೈಕಿ ಯಾರು ವಿಜೇತರು ಎಂಬುದು ಕೆಲ ಕಾಲ ಗೊಂದಲವಿತ್ತು.

ಕೊನೆಗೂ ತೀರ್ಪುಗಾರರು ಮತ್ತು ವಿನ್ನರ್ ಪ್ರಾಯೋಜಕರಾದ ಕಾನ್ಫಿಡೆಂಟ್ ಗ್ರೂಪ್‌ ಸಂಸ್ಥೆಯ ಮುಖ್ಯಸ್ಥ ಡಾ.ಸಿ.ಜೆ ರಾಯ್ ಅವರು “ಡ್ರಾಮಾ ಜೂನಿಯರ್ ಸೀಸನ್‌ 3′ ವಿನ್ನರ್‌ ಯಾರೆಂಬುದನ್ನು ಘೋಷಣೆ ಮಾಡಿದರು. ಆ ವಿಜೇತರು ಯಾರೆಂಬುದನ್ನು ಮಾ.24 ರ ಭಾನುವಾರ (ಇಂದು) ಸಂಜೆ 6 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗುವ ಡ್ರಾಮಾ ಜೂನಿಯರ್ ಸೀಸನ್‌ 3 ಗ್ರ್ಯಾಂಡ್‌ ಫಿನಾಲೆ ಶೋ ವೀಕ್ಷಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next