Advertisement

ಮಂಗಳವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ

07:38 AM Feb 22, 2022 | Team Udayavani |

ಮೇಷ:

Advertisement

ಅತಿಯಾದ ಧಾರಾಳಿತನ ದಾನ ಧರ್ಮದಿಂದ ಆರ್ಥಿಕ ತೊಂದರೆ ಸಂಭವ. ಮಕ್ಕಳ ವಿಚಾರದಲ್ಲಿ ವಿಶೇಷ ಕಾಳಜಿ. ನೂತನ ಮಿತ್ರರ ಸಮಾಗಮ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಸ್ಥಾನ ಸುಖ. ಅರಣ್ಯ ಪ್ರದೇಶ ಮಾರ್ಗ ಪ್ರಯಾಣ.

ವೃಷಭ:

ಸ್ತ್ರೀಯರ ಸಹಾಯದಿಂದ ಉತ್ತಮ ಸಂಪತ್ತು ಪ್ರಾಪ್ತಿ. ಮಕ್ಕಳ ವಿಚಾರದಲ್ಲಿ ಚರ್ಚೆ ಗೊಂದಲಕ್ಕೆ ಅವಕಾಶ ನೀಡದಿರಿ. ರಾಜಕೀಯ ಕಾರ್ಯಗಳಲ್ಲಿ ಪ್ರಗತಿ. ಗೃಹೋಪ ವಸ್ತುಗಳ ಖರೀದಿಗೆ ಧನವ್ಯಯ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಮಿಥುನ:

Advertisement

ಜಲೋತ್ಪನ್ನ ವಸ್ತುಗಳ ವ್ಯವಹಾರ ದಿಂದ ಲಾಭ. ಮಿತ್ರರಲ್ಲಿ ಗುರುಹಿರಿಯರಲ್ಲಿ ಸಹೋದ್ಯೋಗಿಗಳಲ್ಲಿ ತಾಳ್ಮೆಯಿಂದ ವ್ಯವಹರಿಸಿ ಗುರಿ ತಲುಪಿ. ನಾನಾ ರೀತಿಯ ಸನ್ನಿವೇಶಗಳು ಎದುರಾಗುವ ಸಮಯ. ನಿರೀಕ್ಷಿತ ಧನ ಲಾಭ.

ಕಟಕ:

ಆರೋಗ್ಯದ ಬಗ್ಗೆ ಗಮನವಿರಲಿ. ನಿಮ್ಮಿಂದ ಸಹಾಯ ಪಡೆದುಕೊಳ್ಳುವವರಿಂದ ಮೋಸ ಹೋಗದಿರಿ. ಉದ್ಯೋಗ ಕ್ಷೇತ್ರದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫ‌ಲ. ನಿರೀಕ್ಷಿತ ಧನಾಗಮ. ಗೃಹೋಪಯೋಗಿ ವಸ್ತುಗಳು, ವಾಹನಾದಿ ವಿಚಾರದಲ್ಲಿ ದುಡಕದಿರಿ.

ಸಿಂಹ:

ಜನಮನ್ನಣೆ. ನಿರೀಕ್ಷಿತ ಸ್ಥಾನ ಗೌರವಾದಿ ಲಭ್ಯ. ಪರಿಶ್ರಮಕ್ಕೆ ಸರಿಯಾದ ನ್ಯಾಯಸಮ್ಮತವಾದ ಧನಾರ್ಜನೆ. ಆಸ್ತಿ ವಿಚಾರಗಳಲ್ಲಿ ಎಚ್ಚರಿಕೆಯ ನಡೆ ಅಗತ್ಯ. ಬಂಧುಮಿತ್ರರೊಂದಿಗೆ ಸಹನೆ ತಾಳ್ಮೆಯಿಂದ ವ್ಯವಹರಿಸಿ.

ಕನ್ಯಾ:

ಉತ್ತಮ ಆರೋಗ್ಯ ಧನಾರ್ಜನೆಗೆ ನ್ಯಾಯಯುತ ಮಾರ್ಗ ಅನುಸರಿಸಿ. ಮಕ್ಕಳು ಮತ್ತು ಹಿರಿಯರ ಆರೋಗ್ಯದ ಬಗ್ಗೆ ನಿಗಾ ಇಡಿ. ದೇವತಾ ಕಾರ್ಯದಲ್ಲಿ ಭಾಗಿಯಾದ ಸಂತಸ. ಆಸ್ತಿ ಖರೀದಿಗೆ ಯೋಗ್ಯವಾದ ಸಮಯವಲ್ಲ.

ತುಲಾ:

ಬಂಧುಮಿತ್ರರ ಮಾಋ ಸಮಾನ ರಿಂದ ಸಹಕಾರ ಪ್ರೋತ್ಸಾಹ ಲಭ್ಯ. ಉದ್ಯೋಗ ವ್ಯವಹಾರದಲ್ಲಿ ಪ್ರಗತಿದಾಯಕ ಬದಲಾವಣೆ. ಸರಕಾರಿ ಕಾರ್ಯಗಳಲ್ಲಿ ಮುನ್ನಡೆ. ಆಸ್ತಿ ವಿಚಾರದಲ್ಲಿ ತಲ್ಲೀನತೆ. ನಿರೀಕ್ಷಿತ ಅಭಿವೃದ್ಧಿಯಿಂದ ಹೆಚ್ಚಿದ ಸಂತೋಷ.

ವೃಶ್ಚಿಕ:

ಆರೋಗ್ಯ ಗಮನಿಸಿ. ಹೆಚ್ಚಿದ ದೇಹಾಯಾಸ. ಗುರು ಹಿರಿಯರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಹಣಕಾಸಿನ ವಿಚಾರದಲ್ಲಿ ಗೊಂದಲವಾಗದಂತೆ ಗಮನಿಸಿ. ಅತಿ ಉದಾರತನದಿಂದ ಕಿರಿಕಿರಿ ಆದೀತು. ಸಾಂಸಾರಿಕ ಸುಖ ಮಧ್ಯಮ.

ಧನು:

ಅತಿಯಾದ ಆತ್ಮವಿಶ್ವಾಸದಿಂದ ಆರೋಗ್ಯದ್ಲಿ ಗಮನಹರಿಸದಿರುವುದರಿಂದ ಏರುಪೇರು ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಸ್ವಜನರೊಂದಿಗೆ ಪಾರದರ್ಶಕತೆಯಿಂದ ಕಾರ್ಯೋ ನ್ಮುಖರಾಗಿ. ನಿಷ್ಠುರ ಆಗದಂತೆ ಎಚ್ಚರ ವಹಿಸಿ.

ಮಕರ:

ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ ಸಂತೋಷ. ಭೂಮ್ಯಾದಿ ವಿಚಾರಗಳಲ್ಲಿ ಹೆಚ್ಚಿದ ಪರಿಶ್ರಮ. ಮಕ್ಕಳ ಅಭಿವೃದ್ಧಿಗಾಗಿ ಅಧಿಕ ಧನವ್ಯಯ. ಆರೋಗ್ಯ ವಿಚಾರದಲ್ಲಿ ನಿಗಾವಹಿಸಿ. ಉತ್ತಮ ವಾಕ್‌ ಚಾತುರ್ಯದಿಂದ ಕಾರ್ಯ ಸಿದ್ಧಿ.

ಕುಂಭ:

ನಾಯಕತ್ವ ಗುಣ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಚರ್ಚೆಯಾದರೂ ಯಶಸ್ಸು ನಿಮ್ಮದಾಗುವ ಸಂಭವ. ಉತ್ತಮ ವರಮಾನ. ವಾಕ್‌ ಚತುರತೆ ಪ್ರದರ್ಶನ. ಗುರುಹಿರಿಯರ ಆರೋಗ್ಯ ಮಧ್ಯಮ.

ಮೀನ:

ಆರೋಗ್ಯ ವೃದ್ಧಿ. ಸಣ್ಣ ಪ್ರಯಾಣದಿಂದ ಲಾಭ. ಉದ್ಯೋಗ ಪರಿಶ್ರಮಕ್ಕೆ ಸರಿಯಾಗಿ ಅಭಿವೃದ್ಧಿ. ಧನಾರ್ಜನೆ ತೃಪ್ತಿಕರ. ಅತಿಯಾದ ಉದಾರತೆ ಸಮಸ್ಯೆ ತಂದೀತು. ವಸ್ತುನಿಷ್ಠೆಗೆ ಆದ್ಯತೆ ನೀಡಿ ವ್ಯವಹರಿಸುವುದರಿಂದ ಸಫ‌ಲತೆ. ಸಾಂಸಾರಿಕ ಸುಖ ಮಧ್ಯಮ. ಪರರ ಬಗ್ಗೆ ಅತಿಯಾದ ನಂಬಿಕೆ ಬೇಡ.

Advertisement

Udayavani is now on Telegram. Click here to join our channel and stay updated with the latest news.

Next