Advertisement

ಹುಟ್ಟು ಹಬ್ಬಕ್ಕೆ ಕೂಡಿಟ್ಟ ಹಣ ವಿಪತ್ತು ನಿವಾರಣೆ ನಿಧಿಗೆ

11:58 PM Apr 22, 2020 | Sriram |

ಕಾಸರಗೋಡು: ತನ್ನ ಹುಟ್ಟುಹಬ್ಬವನ್ನು ಸಂಭ್ರಮ ದಿಂದ ಆಚರಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಸಂಗ್ರಹಿಸಿಟ್ಟು ಕೊಂಡು ಬಂದಿದ್ದ ಮೊಬಲಗನ್ನು ಮುಖ್ಯ ಮಂತ್ರಿ ಅವರ ವಿಪತ್ತು ನಿವಾರಣೆ ನಿಧಿಗೆ ಹಸ್ತಾಂತರಿಸುವ ಮೂಲಕ ಬಾಲಕನೊಬ್ಬ ಮಾದರಿಯಾಗಿದ್ದಾನೆ.

Advertisement

ವಿದ್ಯಾನಗರದ ಚಿನ್ಮಯಾ ವಿದ್ಯಾಲಯದ 5ನೇ ತರಗತಿ ವಿದ್ಯಾರ್ಥಿ ಶ್ರಾವಣ್‌ ಎ. ಸುಮೇಶ್‌ ತನ್ನ ಹತ್ತನೇ ವರ್ಷದ ಹುಟ್ಟುಹಬ್ಬ ಆಚರಣೆಗಾಗಿ ಸಂಗ್ರಹಿಸಿದ್ದ 2,201 ರೂ.ಗಳ‌ನ್ನು ಈ ರೀತಿ ದೇಣಿಗೆ ಯಾಗಿ ನೀಡಿದ್ದಾನೆ. ವಿದ್ಯಾನಗರದ ಜಿಲ್ಲಾಧಿಕಾರಿ ಅವರ ಕ್ಯಾಂಪ್‌ ಹೌಸ್‌ ಬಳಿಯ ನಿವಾಸಿ ಡಿ. ಸುಮೇಶ್‌-ಎಂ.ಕೆ. ಅಂಬಿಳಿ ದಂಪತಿಯ ಏಕೈಕ ಪುತ್ರ ಶ್ರಾವಣ್‌. ಕ್ಯಾಂಪ್‌ ಹೌಸ್‌ಗೆ ತೆರಳಿದ ಬಾಲಕ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಅವರಿಗೆ ಮೊಬಲಗನ್ನು ಹಸ್ತಾಂತರಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next