Advertisement

Revange: ತಂದೆ ಹಂತಕನನ್ನು 22 ವರ್ಷ ಕಾದು ಕೊಂದು ಸೇಡು ತೀರಿಸಿಕೊಂಡ!

08:47 AM Oct 05, 2024 | Team Udayavani |

ಅಹ್ಮದಾಬಾದ್‌: ತನ್ನ ತಂದೆಯನ್ನು ಕೊಲೆಗೈದವ ರನ್ನು 22 ವರ್ಷ ಕಾದು ಅದೇ ರೀತಿ ಮಗ ಕೊಲೆ ಗೈದಿರುವ ಘಟನೆ ಅಹ್ಮದಾಬಾದ್‌ನಲ್ಲಿ ನಡೆದಿದೆ.

Advertisement

22 ವರ್ಷದ ಹಿಂದೆ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಟ್ರಕ್‌ ಹರಿಸಿ ಹರಿಸಿಂಗ್‌ ಭಾಟಿ ಎಂಬಾತನನ್ನು ಕೊಲೆಗೈಯಲಾಗಿತ್ತು. ಇದಕ್ಕಾಗಿ ನಖತ್‌ ಸಿಂಗ್‌ ಹಾಗೂ ಆತನ ನಾಲ್ವರು ಸಹೋದರಿಗೆ 7 ವರ್ಷ ಜೈಲು ಶಿಕ್ಷೆಯಾಗಿತ್ತು. ಈ ಘಟನೆ ನಡೆದಾಗ ಹರಿಸಿಂಗ್‌ ಪುತ್ರ ಗೋಪಾಲ್‌ ಸಿಂಗ್‌ ಕೇವಲ 8 ವರ್ಷದವನಾಗಿದ್ದು ತಂದೆಯ ಹತ್ಯೆಗೆ ಪ್ರತೀಕಾರಕ್ಕಾಗಿ ಕಾಯುತ್ತಿದ್ದ.

50 ವರ್ಷದ ನಖತ್‌ ಸಿಂಗ್‌ ಭಾಟಿ ಇತ್ತೀಚೆಗೆ ಸೈಕಲ್‌ನಲ್ಲಿ ಹೋಗುವಾಗ ಪಿಕ್‌ಅಪ್‌ ವಾಹನ ಹರಿಸಿ ಗೋಪಾಲ್‌ ಸಿಂಗ್‌ ಕೊಲೆಗೈದು ಪ್ರತೀಕಾರ ತೀರಿಸಿಕೊಂಡಿದ್ದಾನೆ.

 

Advertisement

Udayavani is now on Telegram. Click here to join our channel and stay updated with the latest news.

Next