Advertisement

TMC ಸಂಸದರಾದ ಅರ್ಜುನ್ ಸಿಂಗ್, ದಿಬ್ಯೇಂದು ಅಧಿಕಾರಿ ಬಿಜೆಪಿ ಸೇರ್ಪಡೆ

05:26 PM Mar 15, 2024 | Team Udayavani |

ಹೊಸದಿಲ್ಲಿ:  ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಶಾಕ್ ಎನ್ನುವಂತೆ ಟಿಎಂಸಿ ಸಂಸದರಾದ ಅರ್ಜುನ್ ಸಿಂಗ್, ದಿಬ್ಯೆಂದು ಅಧಿಕಾರಿ ಶುಕ್ರವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.

Advertisement

ಪಕ್ಷ ಸೇರ್ಪಡೆಯಾದ ದಿಬ್ಯೇಂದು ಅಧಿಕಾರಿ ಮಾತನಾಡಿ “ಇಂದು ನನಗೆ ವಿಶೇಷ ದಿನ ಏಕೆಂದರೆ ನಾನು ಬಿಜೆಪಿಯ ಕುಟುಂಬಕ್ಕೆ ಸೇರುತ್ತಿದ್ದೇನೆ. ಪ್ರಧಾನಿ ಮೋದಿಯವರ ನಾಯಕತ್ವದಿಂದ ನಾನು ಸ್ಫೂರ್ತಿ ಪಡೆದಿದ್ದೇನೆ. ನಡ್ಡಾ ಮತ್ತು ಅಮಿತ್ ಶಾ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದರು.ದಿಬ್ಯೇಂದು ಅಧಿಕಾರಿ ಪಶ್ಚಿಮ ಬಂಗಾಳದ ವಿಪಕ್ಷ ನಾಯಕ ಸುವೆಂದು ಅಧಿಕಾರಿಯ ಸಹೋದರ.ದಿಬ್ಯೇಂದು ಅಧಿಕಾರಿ ತಮ್ಲುಕ್ ಕ್ಷೇತ್ರವನ್ನು, ಅರ್ಜುನ್ ಸಿಂಗ್ ಬರಾಕ್‌ಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.

ಚುನಾವಣ ಆಯೋಗ (ಇಸಿಐ) ನಾಳೆ (ಮಾರ್ಚ್ 16) ಲೋಕಸಭಾ ಚುನಾವಣೆಯ ಮತದಾನ ಮತ್ತು ಫಲಿತಾಂಶದ ದಿನಾಂಕಗಳನ್ನು ಪ್ರಕಟಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next