Advertisement

ಟಿಎಂಸಿ ನಾಯಕನ ತಲೆಗೆ ಗುಂಡಿಕ್ಕಿ ಹತ್ಯೆ

12:15 AM Jun 30, 2019 | Sriram |

ಕೋಲ್ಕತಾ: ಲೋಕಸಭೆ ಚುನಾವಣೆ ಫ‌ಲಿತಾಂಶ ಪ್ರಕಟವಾದಾಗಿನಿಂದಲೂ ಪಶ್ಚಿಮ ಬಂಗಾಲದಲ್ಲಿ ಮುಂದುವರಿದಿರುವ ಬಿಜೆಪಿ-ತೃಣಮೂಲ ಕಾಂಗ್ರೆಸ್‌ ಘರ್ಷಣೆ ಇನ್ನೂ ನಿಂತಿಲ್ಲ. ಶನಿವಾರ ಹೂಗ್ಲಿ ಜಿಲ್ಲೆಯ ಬಂದೇಲ್‌ ರೈಲು ನಿಲ್ದಾಣದ ಬಳಿಕ ಟಿಎಂಸಿ ನಾಯಕರೊಬ್ಬರ ತಲೆಗೆ ಗುಂಡು ಹಾರಿಸಿ ಹತ್ಯೆಗೈಯ್ಯಲಾಗಿದೆ.

Advertisement

ಟಿಎಂಸಿ ಗ್ರಾ.ಪಂ. ಪ್ರಧಾನ್‌ ರಿತು ಸಿಂಗ್‌ ಅವರ ಪತಿ, ಟಿಎಂಸಿ ನಾಯಕ ದಿಲೀಪ್‌ ರಾಮ್‌ (40) ಎಂಬವರು ರೈಲ್ವೆ ಹಳಿ ದಾಟುತ್ತಿದ್ದ ವೇಳೆ, ಅಲ್ಲಿಗೆ ಬಂದ ದುಷ್ಕರ್ಮಿಗಳು ತಲೆಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ದಿಲೀಪ್‌ರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಿ ಅವರು ಅಸುನೀಗಿದರು ಎಂದು ಸ್ಥಳೀಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next