Advertisement

ಕಾರು ಹರಿಸಿ ಕೊಲೆ ಯತ್ನ ಆರೋಪ : ಟಿಎಂಸಿ ಯುವ ನಾಯಕಿ ಸಯೋನಿ ಬಂಧನ

08:20 PM Nov 21, 2021 | Team Udayavani |

ಅಗರ್ತಲಾ : ತೃಣಮೂಲ ಕಾಂಗ್ರೆಸ್‌ನ ಯುವ ಘಟಕದ ಅಧ್ಯಕ್ಷೆಯಾಗಿರುವ ಸಯೋನಿ ಘೋಷ್‌ ಅವರನ್ನು ತ್ರಿಪುರ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

Advertisement

ಬಿಜೆಪಿ ಕಾರ್ಯಕರ್ತರ ಮೇಲೆ ಕಾರು ಹರಿಸಿ ಕೊಲೆ ಮಾಡುವ ಪ್ರಯತ್ನ ಮಾಡಿದ್ದಾರೆ ಎನ್ನುವ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ. ಸಯೋನಿ ಅವರು ಸದ್ಯ ತ್ರಿಪುರದಲ್ಲಿದ್ದು, ಶನಿವಾರ ಸಂಜೆ ಸಿಎಂ ಬಿಪ್ಲಾಬ್‌ ದೇಬ್‌ ಅವರು ಭಾಗವಹಿಸಿದ್ದ ಸಭೆಯ ಮುಖಾಂತರ ಕಾರಿನಲ್ಲಿ ಹಾದು ಹೋಗಿದ್ದಾರೆ.

ಆ ವಿಡಿಯೋವನ್ನು ಅವರೇ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅದೇ ವೇಳೆ ಬಿಜೆಪಿ ಕಾರ್ಯಕರ್ತರ ಮೇಲೆ ಕಾರು ಹರಿಸಲು ಪ್ರಯತ್ನಿಸಿದ್ದರು ಎಂದು ದೂರಲಾಗಿದೆ. ಆ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್‌ 307 ಮತ್ತು 153ರಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಸುಳ್ಳು ಮೊಕದ್ದಮೆ ಹೂಡಿ ಹಂಸಲೇಖರನ್ನು ಅವಮಾನಿಸುತ್ತಿದ್ದಾರೆ:ನಟ ಚೇತನ್ ಕಿಡಿ

Advertisement

Udayavani is now on Telegram. Click here to join our channel and stay updated with the latest news.

Next