Advertisement

ಹುಣಸಗಿ: ಎಡದಂಡೆ ಮುಖ್ಯ ಕಾಲುವೆಗೆ ಇಂದು ನೀರು ಬಿಡುಗಡೆ

04:28 PM Nov 18, 2018 | Team Udayavani |

ಹುಣಸಗಿ: ಕಳೆದ ಐದು ದಿನಗಳ ಹಿಂದೆ ಕುಸಿತಗೊಂಡಿದ್ದ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ ತಾತ್ಕಾಲಿಕ ದುರಸ್ತಿ ಕಾರ್ಯ ಮುಕ್ತಾಯದ ಹಂತದಲ್ಲಿದ್ದು, ರವಿವಾರ ಸಂಜೆಯಿಂದಲೇ ಮುಖ್ಯ ಕಾಲುವೆಗೆ ನೀರು ಹರಿಸಲು ಅಧಿಕಾರಿಗಳೊಂದಿಗೆ ಮಾತನಾಡಿರು ವುದಾಗಿ ಶಾಸಕ ರಾಜುಗೌಡ ತಿಳಿಸಿದರು.

Advertisement

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬೆಳೆಗೆ ಇನ್ನೂ ಒಂದು ವಾರ ನೀರಿನ ಅಗತ್ಯವಿದೆ. ಆದರೆ ಎಡದಂಡೆ ಮುಖ್ಯ ಕಾಲುವೆ ಅಗ್ನಿ ಗ್ರಾಮದ ಬಳಿ 62ನೇ ಕಿಮೀಯಲ್ಲಿ ಕುಸಿತವಾ ಗಿದ್ದರಿಂದ ಕಾಲುವೆಗೆ ನೀರುಹರಿಸಲು ತೊಂದರೆಯಾಗಿತ್ತು. ಆದರೆ ಅಧಿಕಾರಿಗಳು ಸಮರೋಪಾದಿಯಲ್ಲಿ ತುರ್ತು ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.

ಆದ್ದರಿಂದ ನಾರಾಯಣಪುರ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ರೈತರಿಗೆ ಹರಿಸಲು ಕ್ರಮ ಕೈಗೊಳ್ಳಲಾಗಿದೆ. ಕೇವಲ ನಾಲ್ಕೈದು ದಿನಗಳವರೆಗೆ ನೀರು ಹರಿಸದರೇ ಮಾತ್ರ ಭತ್ತ ಬೆಳೆ ರೈತರ ಕೈಗೆ ಬರುತ್ತದೆ. ರೈತರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ವಿವರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next