Advertisement

ಟಿಪ್ಪು ಜಯಂತಿ ಆಚರಣೆ ಕೈಬಿಡಲು ಆಗ್ರಹ

04:47 PM Oct 25, 2017 | |

ಬೆಳ್ತಂಗಡಿ: ರಾಜ್ಯ ಸರಕಾರವು ಟಿಪ್ಪು ಜಯಂತಿ ಆಚರಿಸಲು ನಿರ್ಧರಿಸಿರುವುದು ಅತ್ಯಂತ ದುರದೃಷ್ಟಕರ. ಈತ  ಓರ್ವ 
ಕೋಮುವಾದಿ, ಧರ್ಮಾಂಧ, ಹಿಂದೂ-ಕ್ರೈಸ್ತರನ್ನು ಹತ್ಯೆ ಮಾಡುತ್ತಿದ್ದ ಮತ್ತು ಬಲಾತ್ಕಾರವಾಗಿ ಮತಾಂತರಗೊಳಿಸುತ್ತಿದ್ದ ವ್ಯಕ್ತಿ. ಜಾತ್ಯತೀತ ಎಂದರೆ ಎಲ್ಲ ಜಾತಿ-ಧರ್ಮದವರನ್ನು ಸಮಾನವಾಗಿ ರಕ್ಷಿಸುವುದು , ಉತ್ತೇಜಿಸುವುದು, ಆದರೆ ಟಿಪ್ಪು ಹಿಂದೂ-ಕ್ರೈಸ್ತ ವಿರೋಧಿ ಯಾಗಿದ್ದ ಟಿಪ್ಪು ಜಯಂತಿ ಆಚರಣೆಯೇ ಕೋಮುವಾದ. ರಾಜಕೀಯ ಹಿತಾಸಕ್ತಿಯಿಂದ ಟಿಪ್ಪುವನ್ನು ವೈಭವೀಕರಿಸುವ ಟಿಪ್ಪು ಜಯಂತಿ ಆಚರಣೆ ಕೈಬಿಡುವಂತೆ ಬೆಳ್ತಂಗಡಿ ಬಿಜೆಪಿ ಆಗ್ರಹಿಸಿದೆ.

Advertisement

ಈ ಬಗ್ಗೆ ಬೆಳ್ತಂಗಡಿ ತಾ| ಕಚೇರಿ ಮೂಲಕ ರಾಜ್ಯಪಾಲರಿಗೆ ಮನವಿ ನೀಡಲಾಯಿತು. ಬಿಜೆಪಿ ಅಧ್ಯಕ್ಷ ರಂಜನ್‌ ಜಿ.ಗೌಡ, ಯುವ ಮೋರ್ಚಾ ಅಧ್ಯಕ್ಷ ಸಂಪತ್‌ ಬಿ. ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next