Advertisement

ಟಿಪ್ಪರ್‌ –ಸ್ಕೂಟರ್‌ ಢಿಕ್ಕಿ: ಓರ್ವಸಾವು

10:35 AM Apr 26, 2019 | Team Udayavani |

ಉಳ್ಳಾಲ/ಬಂಟ್ವಾಳ: ಇರಾ ಮೂಳೂರು ಬಳಿ ಟಿಪ್ಪರ್‌ – ಸ್ಕೂಟರ್‌ ಅಪಘಾತದಲ್ಲಿ ಸವಾರ ಮಂಚಿ ಕಯ್ಯೂರು ನಿವಾಸಿ ಆದಂ ಅವರ ಪುತ್ರ ಮಹಮ್ಮದ್‌ ಫಿನಾನ್‌(19) ಸ್ಥಳ ದಲ್ಲೇ ಮೃತಪಟ್ಟಿದ್ದು, ಸಹ ಸವಾರ ಕೈಯೂರು ನಿವಾಸಿ ಇಬ್ರಾಹಿಂ ಅವರ ಪುತ್ರ ಜಾಹೀರ್‌ ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಮೂಳೂರು ಕೈಗಾರಿಕ ರಸ್ತೆಯಲ್ಲಿ ಅಪಘಾತ ನಡೆದಿದೆ. ಸ್ಕೂಟರ್‌ ಸವಾರರು ಮೂಳೂರು ಕಡೆ ಬರುತ್ತಿದ್ದಾಗ ಅತಿ ವೇಗದಲ್ಲಿ ಬಂದ ಟಿಪ್ಪರ್‌ ಢಿಕ್ಕಿ ಹೊಡೆದಿದೆ. ಅವರು ಅಡಿಕೆ ಸಿಪ್ಪೆ ಸುಲಿಯುವ ಕೆಲಸ ಮಾಡುತ್ತಿದ್ದರು. ಮೆಲ್ಕಾರ್‌ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next