Advertisement

ಹೈಕಮಾಂಡ್‌ನಿಂದ ಬಿಎಸ್‌ವೈಗೆ ಟೈಟ್‌

11:38 PM Oct 01, 2019 | Team Udayavani |

ತುಮಕೂರು: ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಟಾಗಿಲು ಕರ್ನಾಟಕ. ಇಲ್ಲಿ ಉತ್ತಮ ಆಡಳಿತವನ್ನು ನೀಡಬೇಕು ಎನ್ನುವ ಕಾರಣದಿಂದ ಹೈಕಮಾಂಡ್‌, ಯಡಿಯೂರಪ್ಪ ಅವರ ಅಧಿಕಾರದ ಮೇಲೆ ಟೈಟ್‌ ಮಾಡುತ್ತಿದೆ ಎಂದು ಬಿಎಸ್‌ವೈ ಪುತ್ರ, ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ತಿಳಿಸಿದರು.

Advertisement

ಸಿದ್ಧಗಂಗಾ ಮಠಕ್ಕೆ ಮಂಗಳವಾರ ಭೇಟಿ ನೀಡಿ, ಲಿಂ.ಡಾ.ಶಿವಕುಮಾರ ಸ್ವಾಮಿಗಳ ಗದ್ದುಗೆ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಹೈಕಮಾಂಡ್‌ ಬಿಎಸ್‌ವೈಗೆ ಈ ರೀತಿ ಟೈಟ್‌ ಮಾಡಲು ಕಾರಣ, ಮುಂದಿನ ಮೂರೂವರೆ ವರ್ಷ ಅವರೇ ಮುಖ್ಯಮಂತ್ರಿ ಆಗಿರಬೇಕು. ಒಳ್ಳೆಯ ಸರ್ಕಾರ ನೀಡಬೇಕು ಎಂಬುದು. ಯಡಿಯೂರಪ್ಪ ಅವರು ಬೇರೆಯವರ ತರಹ ಪುಕ್ಕಟ್ಟೆಯಾಗಿ ಮುಖ್ಯಮಂತ್ರಿ ಆಗಿಲ್ಲ. ರಾಜ್ಯದಲ್ಲಿ 30-40 ವರ್ಷಗಳ ಕಾಲ ನಡೆಸಿದ ಹೋರಾಟದ ಫ‌ಲವಾಗಿ ಮುಖ್ಯಮಂತ್ರಿಯಾಗಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next