Advertisement

ಜ.7ರಿಂದ ಟೈಗರ್‌ ಸಫಾರಿ ನಿರ್ಬಂಧ

06:25 AM Jan 04, 2018 | Team Udayavani |

ಮೈಸೂರು: ಹುಲಿ ಗಣತಿ ಹಿನ್ನೆಲೆಯಲ್ಲಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ವನ್ಯಜೀವಿ ವಿಭಾಗಗಳಲ್ಲಿ ಜ. 7ರಿಂದ 13ರವರೆಗೆ ವನ್ಯಜೀವಿ ಸಫಾರಿಯನ್ನು ನಿರ್ಬಂಧಿಸಲಾಗಿದೆ.

Advertisement

ಜ.1ರಿಂದ ಆರಂಭವಾಗಿರುವ ರಾಷ್ಟ್ರವ್ಯಾಪಿ ಹುಲಿ ಗಣತಿ-2018 ಕಾರ್ಯಕ್ರಮ ಜ. 13ರವರೆಗೆ ನಡೆಯಲಿದೆ. ಕರ್ನಾಟಕದಾದ್ಯಂತ ಹುಲಿ ಗಣತಿಯನ್ನು ಏಕಕಾಲಕ್ಕೆ ನಡೆಸಲು ಉದ್ದೇಶಿಸಿದ್ದು, ಈ ಅವಧಿಯಲ್ಲಿ ಹುಲಿ ಗಣತಿ ಕಾರ್ಯಕ್ಕೆ ಅಡಚಣೆ ಉಂಟಾಗಬಾರದೆಂಬ ಕಾರಣಕ್ಕೆ ಹುಲಿ ಸಂರಕ್ಷಿತ ಪ್ರದೇಶ ಹಾಗೂ ವನ್ಯಜೀವಿ ವಿಭಾಗಗಳಲ್ಲಿ ವನ್ಯಜೀವಿ ಸಫಾರಿಯನ್ನು ನಿರ್ಬಂಧಿಸಲಾಗಿದೆ ಎಂದು ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next