Advertisement
ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ, ಮಾತನಾಡಿ, ಜಿಲ್ಲೆಗೆ ಬೆಂಕಿ ಹಚ್ಚುವ ಹೇಳಿಕೆ ನೀಡುವ ಸಂಸದರಿಂದ ಯಾವ ಸಂಸ್ಕಾರ ನಿರೀಕ್ಷಿಸಬಹುದು? ದ.ಕ. ಜಿಲ್ಲೆಯಲ್ಲಿ ಹಿಂದುಳಿದ ವರ್ಗದ ಹಿಂದೂ ಸಮಾಜಕ್ಕೆ ಕಾಂಗ್ರೆಸ್ ಸರಕಾರದ ಹಲವು ಯೋಜನೆಗಳಿಂದ ಪ್ರಯೋಜನಗಳಾಗಿವೆ. ಬಿಜೆಪಿಯಿಂದ ಜೈಲು ಭಾಗ್ಯ ಮಾತ್ರ. ಜಿಲ್ಲೆಯಲ್ಲಿ ಜನ ಭಯಭೀತರಾಗಿ ಬಾಳುವಂತೆ ಹತ್ಯೆಗಳನ್ನು ನಡೆಸಿದರು. ಆದ್ದರಿಂದ ಜಾತ್ಯತೀತ ಮನೋಭಾವದ ಸಮಾನ ಮನಸ್ಕ ಸಂಘಟನೆಗಳ ಜತೆಗೂಡಿ ಡಿ.12ರಂದು ಫರಂಗಿಪೇಟೆಯಿಂದ ಮಾಣಿವರೆಗೆ ಸಾಮರಸ್ಯದ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದರು. ಇಂತಹ ನಡಿಗೆಯನ್ನು ಮುಂದಿನ ದಿನಗಳಲ್ಲಿ ಇತರ ವಿಧಾನಸಭಾ ಕ್ಷೇತ್ರದಲ್ಲೂ ಹಮ್ಮಿಕೊಳ್ಳಲಾಗುವುದು. ಇದರಲ್ಲಿ ಯಾವುದೇ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರವಿಲ್ಲ. ಹತ್ಯೆಗಳಲ್ಲಿ ಭಾಗಿಯಾದ ಸಂಘಟನೆಗಳನ್ನು ಹೊರತುಪಡಿಸಿ, ಇತರೆಲ್ಲ ಸಂಘಟನೆಗಳು, ಪಕ್ಷಗಳು ನಡಿಗೆಯಲ್ಲಿ ಭಾಗಿಯಾಗಲಿವೆ ಎಂದರು.
Advertisement
ಬಿಜೆಪಿಯಿಂದ ಹುಲಿ ಸವಾರಿ : ರೈ ವ್ಯಂಗ್ಯ
12:40 PM Dec 09, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.