Advertisement

ಮಡಿಕೇರಿ : ಆತಂಕ ಮೂಡಿಸಿದ ಹುಲಿ ಸಂಚಾರ, ಚುಚ್ಚುಮದ್ದು ನೀಡಿದರೂ ತಪ್ಪಿಸಿಕೊಂಡ ಹುಲಿ

09:35 AM Sep 18, 2022 | Team Udayavani |

ಮಡಿಕೇರಿ : ಚೆನ್ನಯ್ಯನ ಕೋಟೆ ಗ್ರಾ.ಪಂ. ವ್ಯಾಪ್ತಿಯ ಚೆನ್ನಂಗಿ ಬಸವನಹಳ್ಳಿಯಲ್ಲಿ ಹುಲಿ ಸಂಚಾರ ಆತಂಕವನ್ನು ಮೂಡಿಸಿದೆ.

Advertisement

ದೇವಜನ ಪೂಣಚ್ಚ ಅವರ ಕಾಫಿ ತೋಟದ ಮೂಲಕ ಬಂದ ಹುಲಿ ಅಪ್ಪಯ್ಯ ಅವರ ಮನೆಯ ಮುಂಭಾಗದಿಂದ ಹಾದು ಹೋಗಿದೆ. ಬಾಡಗ, ಬಾಣಂಗಾಲ, ಘಟ್ಟದಳ್ಳ ಭಾಗದಲ್ಲೂ ಹುಲಿ ಸಂಚಾರವಿದ್ದು, ಗ್ರಾಮಸ್ಥರು ಹಾಗೂ ಕಾರ್ಮಿಕರಲ್ಲಿ ಆತಂಕ ಮೂಡಿದೆ.

ತಪ್ಪಿಸಿಕೊಂಡ ಹುಲಿ
ಬಾಡಗ ಬಾಣಂಗಾಲ ಗ್ರಾಮ ಘಟ್ಟದಳ್ಳ ಸಮೀಪ 5 ದಿನಗಳಿಂದ ಅರಣ್ಯ ಇಲಾಖೆ ಹುಲಿ ಕಾರ್ಯಾ ಚರಣೆ ನಡೆಸುತ್ತಿದೆ. ಅರಿವಳಿಕೆ ಚುಚ್ಚು ಮದ್ದನ್ನು ಪ್ರಯೋಗಿಸಿದ ಸಂದರ್ಭ ಹುಲಿ ತಪ್ಪಿಸಿಕೊಂಡು ಕಣ್ಮರೆಯಾಗಿದೆ.

ಇದನ್ನೂ ಓದಿ : ರಾಣಿ ಎಲಿಜಬೆತ್ ಅಂತ್ಯಕ್ರಿಯೆ : ಬ್ರಿಟನ್‍ಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

Advertisement

Udayavani is now on Telegram. Click here to join our channel and stay updated with the latest news.

Next