Advertisement

Karnataka: ಹುಲಿ ಉಗುರಿನ ಲಾಕೆಟ್‌- ಹೈಕೋರ್ಟ್‌ ಮೆಟ್ಟಿಲೇರಿದ ಜಗ್ಗೇಶ್‌

10:05 PM Oct 26, 2023 | Team Udayavani |

ಬೆಂಗಳೂರು: ಹುಲಿ ಉಗುರಿನ ಲಾಕೆಟ್‌ ಧರಿಸಿದ ಆರೋಪ ಪ್ರಕರಣದಲ್ಲಿ ಅರಣ್ಯ ಇಲಾಖೆ ನೀಡಿರುವ ನೋಟಿಸ್‌ ವಿರುದ್ಧ ರಾಜ್ಯಸಭಾ ಸದಸ್ಯರೂ ಆಗಿರುವ ನಟ ಜಗ್ಗೇಶ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Advertisement

ಅರಣ್ಯ ಇಲಾಖೆ ನೀಡಿರುವ ನೋಟಿಸ್‌ ರದ್ದುಪಡಿಸಬೇಕು ಹಾಗೂ ಅರಣ್ಯ ಇಲಾಖೆಯವರು ಕೈಗೊಂಡ ತಪಾಸಣೆ, ಜಪ್ತಿ ಕಾನೂನು ಬಾಹಿರ ಮತ್ತು ಸಂವಿಧಾನದ ಕಲಂ 21ರ ಉಲ್ಲಂಘನೆ ಎಂದು ಘೋಷಿಸಬೇಕು. ಅರ್ಜಿಯ ವಿಚಾರಣೆ ಮುಗಿಯುವ ತನಕ ಅರಣ್ಯ ಇಲಾಖೆ ಅ.25ರಂದು ನೀಡಿರುವ ನೋಟಿಸ್‌ಗೆ ತಡೆ ನೀಡಬೇಕೆಂದು ಮನವಿ ಮಾಡಿ ಜಗ್ಗೇಶ್‌ ಅರ್ಜಿ ಸಲ್ಲಿಸಿದ್ದು, ಅರ್ಜಿಯು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಅರಣ್ಯ ಇಲಾಖೆಗೆ ನೀಡಿರುವ ನೋಟಿಸ್‌ಗೆ ಉತ್ತರಿಸುವ ಮೊದಲೇ 14 ಮಂದಿ ಅಧಿಕಾರಿಗಳು ಮನೆಯಲ್ಲಿ ತಪಾಸಣೆ ನಡೆಸಿದ್ದಾರೆ. ತಪಾಸಣೆ ಹೆಸರಲ್ಲಿ ರಾಜ್ಯಸಭಾ ಸದಸ್ಯನಾಗಿ ನಾನು ನಿರ್ವಹಿಸಿದ್ದ ಕೆಲ ದಾಖಲೆಗಳನ್ನು ಸೇರಿ ಇಡೀ ಮನೆಯನ್ನು ದರೋಡೆ ಮಾಡಿದ್ದಾರೆ. ಹೇಳಿಕೆ ನೀಡುವಂತೆ, ಸಹಿ ಮಾಡುವಂತೆ ಅಧಿಕಾರಿಗಳು ಬಲವಂತಪಡಿಸಿದ್ದಾರೆ. ಅಧಿಕಾರಿಗಳು ನಡೆದುಕೊಂಡ ರೀತಿ ದುರುದ್ದೇಶಪೂರಿತವಾಗಿದ್ದು, ಸಂವಿಧಾನದ ಕಲಂ 21ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಜಗ್ಗೇಶ್‌ ಅರ್ಜಿಯಲ್ಲಿ ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next