Advertisement

ಧರ್ಮಸ್ಥಳ: ರಂಜಿಸಿದ ಹುಲಿವೇಷ ಕುಣಿತ

09:39 AM Oct 02, 2019 | sudhir |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ, ಡಿ.ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ನಂದಗೋಕುಲ ಪ್ರೆಂಡ್ಸ್ ಜೋಡುಸ್ಥಾನ ಧರ್ಮಸ್ಥಳ ವತಿಯಿಂದ ಧರ್ಮಸ್ಥಳದಲ್ಲಿ ದಸರಾ ಹಬ್ಬದ ಪ್ರಯುಕ್ತ ಮಂಗಳವಾರ 5ನೇ ವರ್ಷದ ಹುಲಿವೇಷ ಕುಣಿತ ಧರ್ಮಸ್ಥಳ ಅಮೃತವರ್ಷಿಣಿ ಮೈದಾನದಲ್ಲಿಜರಗಿತು.

Advertisement

ನೂರಕ್ಕೂ ಹೆಚ್ಚು ಹುಲಿವೇಷಧಾರಿಗಳು ದೇಗುಲದ ಧ್ವಾರದಿಂದ ಮೆರವಣಿಗೆ ಮೂಲಕ ವಿವಿಧ ತಂಡದೊಂದಿಗೆ ಸಾಗಿಬಂದರು.

ಪಿಲಿನಲಿಕೆ ಪ್ರತಿಷ್ಠಾನದಿಂದ ಹುಲಿ ಸಂತತಿ ಉಳಿವಿಗಾಗಿ ಹುಲಿಯ ತಲೆಯ ಪ್ರತಿಕೃತಿಯ ಸ್ಮರಣಿಕೆಯನ್ನು ಧರ್ಮಾಧಿಕಾರಿ ಡಾ.ಡಿ.ವೀರೆಂದ್ರ ಹೆಗ್ಗಡೆಯವರಿಗೆ ಮಿಥುನ್ ರೈ ಅವರು ನೀಡಿದರು.

ಶಾಸಕ ಹರೀಶ ಪೂಂಜ, ಧರ್ಮಸ್ಥಳದ ಹೇಮಾವತಿ ಹೆಗ್ಗಡೆ, ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್ , ಹರ್ಷೇಂದ್ರ ಕುಮಾರ್, ಸುಪ್ರಿಯ ಹರ್ಷೇಂದ್ರ ಕುಮಾರ್, ಡಿ.ಶ್ರೇಯಸ್ ಕುಮಾರ್ ಹಾಗೂ ಕುಟುಂಬಸ್ಥರು, ಧರ್ಮಸ್ಥಳ ಗ್ರಾಪಂ ಅಧ್ಯಕ್ಷ ಚಂದನ್ ಪ್ರಸಾದ್ ಕಾಮತ್, ಗ್ರಾಪಂ ಸದಸ್ಯ ಮತ್ತಿತರರು ಇದ್ದರು. ಶ್ರೀನಿವಾಸ್ ರಾವ್ ಕಾರ್ಯಕ್ರಮ‌ ನಿರ್ವಹಿಸಿದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next