Advertisement
ಉದ್ಯಾನದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿ.ಬಿ.ಕುಪ್ಪೆ ವನ್ಯಜೀವಿ ವಲಯ ವ್ಯಾಪ್ತಿಯ ಕಬಿಸಿ-ತರಿಕಿಹಳ್ಳ ಅರಣ್ಯ ಪ್ರದೇಶದಲ್ಲಿ ಭಾನುವಾರ ಸಂಜೆ 6.30ರ ಸಮಯದಲ್ಲಿ ಸಿಬಂದಿಗಳು ಎಂದಿನಂತೆ ಗಸ್ತು ನಡೆಸುತ್ತಿರುವಾಗ ಹುಲಿಯು ಸತ್ತು ಬಿದ್ದಿರುವುದು ಕಂಡುಬಂತು. ಮೇಲ್ನೋಟಕ್ಕೆ ಹುಲಿಯ ದೇಹದ ಮೇಲೆ ಗಾಯದ ಗುರುತುಗಳು ಕಂಡು ಬಂದಿರುವುದನ್ನು ಮೇಲಾಧಿಕಾರಿಗಳಿಗೆ ಗಮನಕ್ಕೆ ತರಲಾಗಿ ರಾತ್ರಿಯೇ ಎಸಿಎಫ್ ರಂಗಸ್ವಾಮಿ, ವಲಯ ಅರಣ್ಯಾಧಿಕಾರಿ ಕೆ.ಎಲ್.ಮಧು ಭೇಟಿ ಇತ್ತು ಪರಿಶೀಲಿಸಿ, ರಾತ್ರಿಯಾದ್ದರಿಂದ ಹುಲಿಯ ಮೃತದೇಹವನ್ನ ಸ್ಥಳದಲ್ಲಿ ಯತಾಸ್ಥಿತಿಯಲ್ಲಿ ಇರಿಸಿ, ಸಿಬಂದಿ ಕಾವಲು ಇರಿಸಲಾಗಿತ್ತು.
Advertisement
Nagarhole ಕಾದಾಟದಲ್ಲಿ ಹೆಣ್ಣು ಹುಲಿ ಮರಿ ಮೃತ್ಯು
11:14 PM Jun 12, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.