Advertisement

ಪುತ್ರನಿಗೆ ಟಿಕೆಟ್‌: ಅಪ್ಪನಿಗೆ ಧರ್ಮಸಂಕಟ

01:16 AM Mar 31, 2019 | Sriram |

ನವದೆಹಲಿ: ಹಿಮಾಚಲ ಪ್ರದೇಶದ ಬಿಜೆಪಿ ಸರಕಾರದಲ್ಲಿ ಸಚಿವರಾಗಿರುವ ಅನಿಲ್‌ ಶರ್ಮಾ ಅವರಿಗೆ ಈಗ ಧರ್ಮಸಂಕಟ ಶುರುವಾಗಿದೆ. ಅವರ ಪುತ್ರ ಆಶ್ರಯ್‌ ಶರ್ಮಾ ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ಕಾರಣ, ಅವರಿಗೆ ಮಂಡಿ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ಆದರೆ, ಮಂಡಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಮಸ್ವರೂಪ್‌ ಶರ್ಮಾ ಸ್ಪರ್ಧಿಸುತ್ತಿದ್ದಾರೆ.

Advertisement

ಹೀಗಾಗಿ, ಅನಿಲ್‌ಗೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಬೇಕೋ, ಪುತ್ರನ ಪರ ನಡೆಸಬೇಕೋ ಎಂದು ತೋಚುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ, ನಾನು ಮಗನ ವಿರುದ್ಧ ಪ್ರಚಾರ ಮಾಡಲ್ಲ ಎಂದಿದ್ದಾರೆ.

ಸೇತುವೆಗಾಗಿ ಚುನಾವಣೆ ಬಹಿಷ್ಕಾರ: ಉತ್ತರ ಪ್ರದೇಶದ ಮುಜಾಫ‌ರನಗರದ ಯೋಗೇಂದ್ರ್ ನಗರ ಎಂಬ ಗ್ರಾಮದ ಬಳಿ ಹಾದುಹೋಗುವ ಸೋಲನಿ ನದಿಗೆ ಅಡ್ಡಲಾಗಿ ಸೇತುವೆಯನ್ನು ಸರಕಾರ ನಿರ್ಮಿಸದೇ ಇದ್ದಲ್ಲಿ ಇಡೀ ಗ್ರಾಮವೇ ಲೋಕಸಭಾ ಚುನಾವಣೆ ಬಹಿಷ್ಕರಿಸಲಿದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಪಂಚಾಯತ್‌ ಸಭೆಯಲ್ಲಿ ಈ ನಿರ್ಧಾರವನ್ನು ಒಮ್ಮತದಿಂದ ತೆಗೆದುಕೊಳ್ಳಲಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಗ್ರಾಮವು ನದಿ ತೀರದಲ್ಲೇ ಇರುವುದರಿಂದ ನದಿ ದಾಟಿ ಬೇರೆ ಊರಿಗೆ ಹೋಗುವುದು ದುಸ್ತರವಾಗಿದೆ ಎಂದಿದ್ದಾರೆ ಗ್ರಾಮಸ್ಥರು.

Advertisement

Udayavani is now on Telegram. Click here to join our channel and stay updated with the latest news.

Next