Advertisement

ಗುರುವಾರದ ರಾಶಿ ಫಲ : ಪರರ ಸಹಾಯದಿಂದ ಬಹು ಲಾಭ ಸಂಭವ, ಆರೋಗ್ಯದ ಕಡೆ ಗಮನವಿರಲಿ

07:30 AM Nov 03, 2022 | Team Udayavani |

ಮೇಷ: ವಿದ್ಯಾರ್ಥಿಗಳಿಗೆ, ಧಾರ್ಮಿಕ ಮುಖಂಡರಿಗೆ, ರಾಜಕೀಯ ಕ್ಷೇತ್ರದವರಿಗೆ ಆಹಾರೋದ್ಯಮ, ಧಾತುದ್ರವ್ಯ ಉದ್ಯಮದವರಿಗೆ ಉತ್ತಮ ಶುಭಫ‌ಲ. ದೀರ್ಘ‌ ಪ್ರಯಾಣದಿಂದ ನಿರೀಕ್ಷಿತ ಲಾಭ. ದಾಂಪತ್ಯ ಸುಖ. ವೈವಾಹಿಕ ವಿಚಾರದಲ್ಲಿ ಪ್ರಗತಿ.

Advertisement

ವೃಷಭ: ಭೂ ಗೃಹ ವಾಹನಾದಿ ವಿಚಾರದಲ್ಲಿ ಪ್ರಗತಿ. ಮಿತ್ರರಿಂದಲೂ ಮಾತೃ ಸಮಾನರಿಂದಲೂ ಪ್ರೋತ್ಸಾಹ. ಪರರಿಗೋಸ್ಕರ ಪ್ರಯಾಣ. ವಸ್ತ್ರೋದ್ಯಮ, ಆಭರಣೋದ್ಯಮದವರಿಗೆ ಶುಭ ಫ‌ಲ. ಸಮಾಜದಲ್ಲಿ ನಿರೀಕ್ಷಿತ ಸ್ಥಾನ ಸುಖ. ಆರೋಗ್ಯ ಸ್ಥಿರ. ಇಂದ್ರಿಯಗಳಲ್ಲಿ ನಿಗ್ರಹವಿರಲಿ.

ಮಿಥುನ: ಸಜ್ಜನರಲ್ಲಿ ಸ್ತ್ರೀಯರಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಜಲೋತ್ಪನ್ನ ವಸ್ತುಗಳ ಉದ್ಯಮಿಗಳಿಗೆ ಅಭಿವೃದ್ಧಿ. ವಿದೇಶ ವಿಚಾರದ ವ್ಯವಹಾರದಲ್ಲಿ ಅನುಕೂಲ. ನಿರೀಕ್ಷಿತ ಧನಾಗಮ. ಉದರ ಸಂಬಂಧೀ ಆರೋಗ್ಯದ ಕಡೆ ಗಮನವಿರಲಿ.

ಕರ್ಕ: ನೂತನ ಮಿತ್ರರ ಆಗಮನ. ಪ್ರಯಾಣ ಪಾಲುಗಾರಿಕಾ ವ್ಯವಹಾರದಲ್ಲಿ ಅಭಿವೃದ್ಧಿ. ಜಲೋತ್ಪನ್ನ ವಸ್ತುಗಳಿಂದ ಲಾಭ. ಆರೋಗ್ಯದಲ್ಲಿ ಸುದಾರಣೆ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಗೃಹೋಪಕರಣ ವಸ್ತು ಸಂಗ್ರಹ. ವಿದ್ಯಾರ್ಥಿಗಳಿಗೆ ಸ್ಥಾನ ಗೌರವಾದಿ ಸುಖ.

ಸಿಂಹ: ವಿದ್ಯಾರ್ಥಿಗಳಿಗೆ ಶ್ರಮದಿಂದ ನಿರೀಕ್ಷಿತ ಸ್ಥಾನ ಸುಖ. ದಂಪತಿಗಳು ಆರೋಗ್ಯದ ಬಗ್ಗೆ ಗಮನಹರಿಸಿ. ಸೌಂದರ್ಯವರ್ಧಕ ವಸ್ತುಗಳ ವ್ಯವಹಾರಸ್ಥರಿಗೆ, ಸಮುದ್ರೋತ್ಪನ್ನ ವಸ್ತುಗಳ ಕ್ರಯವಿಕ್ರಯದಾರರಿಗೆ, ವಿದೇಶ ಮೂಲದ ವ್ಯವಹಾರಸ್ಥರಿಗೆ ಅನಿರೀಕ್ಷಿತ ಧನಾಗಮ ಪ್ರಗತಿ.

Advertisement

ಕನ್ಯಾ: ಆರೋಗ್ಯದ ಬಗ್ಗೆ ಎಚ್ಚರವಿರಲಿ. ಸಂಸಾರದಲ್ಲಿ, ಪಾಲುದಾರಿಕಾ ವ್ಯವಹಾರದಲ್ಲಿ ಹೊಂದಾಣಿಕೆಯಿಂದ ಕಾರ್ಯ ಸಿದ್ಧಿ. ದೂರ ಪ್ರದೇಶದ ವ್ಯವಹಾರದಲ್ಲಿ ಹೊಂದಾಣಿಕೆಯಿಂದ ಕಾರ್ಯ ಸಿದ್ಧಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ.

ತುಲಾ: ಪರರ ಸಹಾಯದಿಂದ ಬಹು ಲಾಭ ಸಂಭವ. ಶಾಸ್ತ್ರ ಆಸಕ್ತಿ. ಸರಸ ಸಲ್ಲಾಪದಲ್ಲಿ ಆಸಕ್ತಿ. ದೂರದ ವ್ಯವಹಾರದಲ್ಲಿ ಹೆಚ್ಚಿನ ಧನ ಲಾಭ. ಪಾಲುದಾರರಿಂದ ಸಹಕಾರ ಪ್ರೋತ್ಸಾಹ. ದಾಂಪತ್ಯ ಸುದೃಢ. ಹಿರಿಯರ ಆರೋಗ್ಯ ಗಮನಿಸಿ.

ವೃಶ್ಚಿಕ: ಆರೋಗ್ಯ ಉತ್ತಮ. ನಿರೀಕ್ಷಿತ ಸ್ಥಾನ ಸುಖ. ಎಲ್ಲಾ ವಿಚಾರಗಳಲ್ಲಿ ಲಾಭದ ನಿರೀಕ್ಷೆ. ಪ್ರಸಿದ್ಧಿಗೆ ಪರಿಶ್ರಮ. ಆಸ್ತಿ ವಿಚಾರಗಳಿಂದ ನಿರೀಕ್ಷಿತ ಧನಾಗಮ. ಸಾಂಸಾರಿಕ ಸುಖ ವೃದ್ಧಿ. ಮಕ್ಕಳಿಂದ ಸಂತೋಷ. ಗುರುಹಿರಿಯರಿಗೆ ಸಹಕಾರ. ದೇವತಾ ಕಾರ್ಯಗಳಲ್ಲಿ ಮಗ್ನ.

ಧನು: ಅಭಿವೃದ್ಧಿ, ಆರೋಗ್ಯ, ಬುದ್ಧಿವಂತಿಕೆ ತಿಳುವಳಿಕೆಯಿಂದ ಕೂಡಿದ ಸ್ಥಿರ ಬುದ್ಧಿ ಪ್ರದರ್ಶನ. ಹಣಕಾಸಿನ ವಿಚಾರದಲ್ಲಿ ಕೃಪಣತೆ. ಚರ್ಚೆಯಿಂದ ಧನ ಲಾಭ. ಉದ್ಯೋಗ ವ್ಯವಹಾರಗಳಿಂದ ಸಂಪತ್ತು ಸಂಗ್ರಹ. ಸಣ್ಣ ಪ್ರಯಾಣ.

ಮಕರ: ಶಾರೀರಿಕ ಸುಖ ವೃದ್ಧಿ. ಸುಂದರತೆಗೆ ಪ್ರಾಧಾನ್ಯತೆಗೆ ಚಂಚಲ ಮನಃಸ್ಥಿತಿ. ಸರಸ ಸಲ್ಲಾಪದಲ್ಲಿ ಆಸಕ್ತಿ. ಗಣ್ಯ ವ್ಯಕ್ತಿಗಳ ಸಂಪರ್ಕ. ಗುಪ್ತ ಧನ ವೃದ್ಧಿ. ಏಕಾಗ್ರತೆಯಿಂದ ಕೂಡಿದ ಉದ್ಯೋಗ ವ್ಯವಹಾರ. ಧಾರ್ಮಿಕ ಕಾರ್ಯಗಳಿಗೆ ಅಡಚಣೆ. ಸ್ವಪ್ರಯತ್ನದಿಂದ ಕೂಡಿದ ವಿದ್ಯಾರ್ಜನೆ.

ಕುಂಭ: ಪರಿಶ್ರಮದಿಂದ ಆರೋಗ್ಯ ಸುದೃಢ. ದೀರ್ಘ‌ ಪ್ರಯಾಣ. ತಾಳ್ಮೆ ಸಹನೆ ಅಗತ್ಯ. ಉದ್ಯೋಗದಲ್ಲಿ ಅಕಸ್ಮಾತ್‌ ಧನವೃದ್ಧಿ. ವ್ಯವಹಾರ ನಿಮಿತ್ತ ಮಿತ್ರರೊಂದಿಗೆ ಪ್ರಯಾಣ ಸಂಭವ. ದಾಂಪತ್ಯ ತೃಪ್ತಿಕರ. ದೇವತಾ ಮಂತ್ರ ಅನುಷ್ಠಾನದಿಂದ ನೆಮ್ಮದಿ.

ಮೀನ: ಸರಿಯಾದ ನಿಯಮ ಪಾಲಿಸುವುದರಿಂದ ಆರೋಗ್ಯ ವೃದ್ಧಿ. ದೂರ ಪ್ರಯಾಣದಿಂದ ವ್ಯರ್ಥ ಧನವ್ಯಯ ಸಂಭವ. ಆದರೆ ಸತ್ಕರ್ಮದಿಂದ ಜನಮನ್ನಣೆಯಿಂದ ಗೌರವದಿಂದ ಕೂಡಿದ ಧನಾಗಮ ಪ್ರಾಪ್ತಿ. ಅವಿವಾಹಿತರಿಗೆ ವಿವಾಹ ಭಾಗ್ಯ. ಗುರುಹಿರಿಯರಿಂದ ಸಂದಭೋìಚಿತ ಸಹಾಯ ಲಭ್ಯ.

Advertisement

Udayavani is now on Telegram. Click here to join our channel and stay updated with the latest news.

Next