Advertisement

Thumbe: ಅಗೆದಲ್ಲಿ ಕಡೆಗೂ ಡಾಮರು

12:54 PM Sep 20, 2024 | Team Udayavani |

ಬಂಟ್ವಾಳ: ತುಂಬೆಯಿಂದ ಮಂಗಳೂರಿಗೆ ನೀರು ಪೂರೈಕೆ ಮಾಡುವ ಪೈಪ್‌ಲೈನ್‌ ಒಡೆದ ಹಿನ್ನೆಲೆಯಲ್ಲಿ ತುಂಬೆಯಲ್ಲಿ ಹೆದ್ದಾರಿ ಅಗೆದು ದುರಸ್ತಿ ಮಾಡಲಾಗಿದ್ದು, ಹೆದ್ದಾರಿ ಅಗೆತದಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಅಗೆದ ಭಾಗಕ್ಕೆ ಡಾಮರು ಹಾಕಲಾಗಿದ್ದು, ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.

Advertisement

ಸುಮಾರು ಒಂದು ತಿಂಗಳ ಹಿಂದೆ ತುಂಬೆ ತಿರುವಿನ ಬಳಿ ಪೈಪ್‌ಲೈನ್‌ ಒಡೆದು ಮಂಗಳೂರು ನಗರಕ್ಕೆ ನೀರು ಪೂರೈಕೆಗೆ ಸಮಸ್ಯೆಯಾಗುತ್ತಿದೆ ಎಂದು ಪಾಲಿಕೆಯ ಗುತ್ತಿಗೆ ಸಂಸ್ಥೆ ಹೊಂಡ ಅಗೆದು ಪೈಪ್‌ಲೈನ್‌ ದುರಸ್ತಿ ಮಾಡಿ ಮಣ್ಣು ತುಂಬಿಸಿ ಬಳಿಕ ಮೇಲಿನ ಭಾಗಕ್ಕೆ ಜಲ್ಲಿ ಹುಡಿ ಹಾಕಿತ್ತು. ಆದರೆ ಮಳೆಯ ಪರಿಣಾಮ ಮಣ್ಣು ತಗ್ಗಿ ಹೊಂಡ ಸೃಷ್ಟಿಯಾಗಿದೆ. ಪದೇ ಪದೇ ಜಲ್ಲಿ ಹುಡಿ ಹಾಕಿದರೂ ಹೊಂಡದ ಸಮಸ್ಯೆ ಪುನರಾವರ್ತನೆಯಾಗುತ್ತಿತ್ತು.

ಉಳಿದ ಭಾಗದಲ್ಲಿ ರಸ್ತೆ ಚೆನ್ನಾಗಿರುವುದ ರಿಂದ ವಾಹನಗಳು ವೇಗವಾಗಿ ಬಂದು ಹೊಂಡದ ಬಳಿ ನಿಯಂತ್ರಣ ಕಳೆದುಕೊಳ್ಳುತ್ತಿ ದ್ದವು. ಹಲವು ದ್ವಿಚಕ್ರ ವಾಹನಗಳು ಬಿದ್ದು ಸವಾರರು ಗಾಯಗೊಂಡ ಘಟನೆಗಳು ನಡೆಯುತ್ತಿತ್ತು. ಈ ಕುರಿತು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಮಂಗಳೂರು ಮಹಾನಗರ ಪಾಲಿಕೆಗೆ ತಿಳಿಸಿದರೂ ದುರಸ್ತಿ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು.

ಇದೀಗ ಅಗೆದ ಜಾಗಕ್ಕೆ ಡಾಮಾರು ಹಾಕಿ ಪರಿಹಾರ ಕಲ್ಪಿಸಲಾಗಿದ್ದು, ಆತಂಕ ದೂರವಾಗಿದೆ. ಮಳೆ ಕಡಿಮೆಯಾದ ಬಳಿಕ ಮಂಗಳೂರು ಮಹಾನಗರ ಪಾಲಿಕೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next