Advertisement

ತ್ರಾಸಿ ದುರಂತಕ್ಕೆ ಮೂರು ವರ್ಷ

12:08 PM Jun 21, 2019 | Suhan S |

ಕುಂದಾಪುರ, ಜೂ. 20: ತ್ರಾಸಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಖಾಸಗಿ ಬಸ್‌ವೊಂದು ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಓಮ್ನಿ ಕಾರಿಗೆ ಢಿಕ್ಕಿಯಾಗಿ 8 ಮಕ್ಕಳು ಸಾವನ್ನಪ್ಪಿದ ದುರಂತ ಸಂಭವಿಸಿ ಜೂ.21 ಕ್ಕೆ ಮೂರು ವರ್ಷಗಳಾಗುತ್ತಿವೆ. ಸದ್ಯ ಚತುಷ್ಪಥ ಕಾಮಗಾರಿ ನಡೆಯು ತ್ತಿದ್ದು, ಇನ್ನೂ ಮೊವಾಡಿ ಕ್ರಾಸ್‌ ಬಳಿ ಯಾವುದೇ ಸುರಕ್ಷತಾ ಕ್ರಮಗಳನ್ನು ಮಾತ್ರ ಕೈಗೊಂಡಿಲ್ಲ.

Advertisement

2016ರ ಜೂ. 21ರಂದು ಬೆಳಗ್ಗೆ 9.15 ರ ಸುಮಾರಿಗೆ ಈ ದುರಂತ ಸಂಭವಿಸಿದ್ದು, ಇದರಲ್ಲಿ ಡಾನ್‌ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆಯ 8 ಮಂದಿ ವಿದ್ಯಾರ್ಥಿಗಳು ಮಡಿದಿದ್ದರು. ಕುಂದಾಪುರ – ಬೈಂದೂರು ಚತುಷ್ಪಥ ಕಾಮಗಾರಿ ಪ್ರಗತಿಯಲ್ಲಿದ್ದು, ಆದರೆ ಮೊವಾಡಿ ಕ್ರಾಸ್‌ ಬಳಿ ವಾಹನ ಯೂ ಟರ್ನ್ ತೆಗೆದುಕೊಳ್ಳುವ ಸ್ಥಳದಲ್ಲಿ ಇನ್ನೂ ಕೂಡ ಸರಿಯಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದ ಮತ್ತಷ್ಟು ಅಪಘಾತಕ್ಕೆ ದಾರಿ ಮಾಡಿ ಕೊಡುವ ಆತಂಕ ಜನರದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next