Advertisement

ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂರರ ಬಾಲಕಿ ಮೃತ್ಯು

09:42 AM Sep 27, 2019 | Team Udayavani |

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ಪಟ್ಟಣದ ಯಲ್ಲಾಲಿಂಗ ನಗರದಲ್ಲಿ ಮಳೆಯಿಂದ ಮತ್ತೊಂದು ಅವಾಂತರ ಸೃಷ್ಟಿಯಾಗಿದೆ. ಮನೆ ಕಟ್ಟಲು ಅಗೆಯಲಾಗಿದ್ದ ಗುಂಡಿಯಲ್ಲಿ ಸಂಗ್ರಹವಾಗಿದ್ದ ಮಳೆ ನೀರಲ್ಲಿ ಬಿದ್ದು ಮೂರು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

Advertisement

ಸ್ಥಳೀಯ ನಿವಾಸಿ ಗಂಗಾಧರ್ ಎನ್ನುವವರ ಮಗಳು ರಂಜಿತಾ (3) ಮೃತ ಬಾಲಕಿ. ಯಲ್ಲಾಲಿಂಗ ನಗರದಲ್ಲಿ ಮನೆ ನಿರ್ಮಿಸಲು ಗುಂಡಿಗಳನ್ನು ಅಗೆಯಲಾಗಿದ್ದು, ಕಳೆ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ನೀರಿನಿಂದ ಗುಂಡಿ ತುಂಬಿಕೊಂಡಿದೆ. ಬುಧವಾರ ರಾತ್ರಿ ತಿಂಡಿ ತರಲೆಂದು ಮನೆಯಿಂದ ಹೊರಬಂದ ಬಾಲಕಿ ರಂಜಿತಾ ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾಳೆ.

ಗುಂಡಿ ಅಗೆಯಲಾಗಿದ್ದ ಜಾಗ ಪೊಲೀಸ್ ಇಲಾಖೆಯ ಎಎಸ್ಐ ನಾರಾಯಣ ಸ್ವಾಮಿ ಎನ್ನುವವರಿಗೆ ಸೇರಿದೆ ಎನ್ನಲಾಗುತ್ತಿದ್ದು, ಸ್ಥಳೀಯ ಸಂಸ್ಥೆಯಿಂದ ಪರವಾನಿಗೆ ರಹಿತವಾಗಿ ಮನೆ ನಿರ್ಮಿಸಲು ಗುಂಡಿಗಳನ್ನು ಅಗೆದು ಬಿಡಲಾಗಿತ್ತು ಎಂದು ತಿಳಿದು ಬಂದಿದೆ. ಈ ಕುರಿತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next