Advertisement

ಪಶ್ಚಿಮ ಬಂಗಾಳ: ಪೊಲೀಸ್‌ ಇಲಾಖೆಯ ಕ್ಷಮತೆ ಮೇಲೆಯೇ ಪ್ರಶ್ನೆ; 18 ದಿನಗಳಲ್ಲಿ 5 ಕೇಸು ಸಿಬಿಐಗೆ

09:30 PM Apr 14, 2022 | Team Udayavani |

ಕೋಲ್ಕತಾ/ನವದೆಹಲಿ: ಹದಿನೆಂಟು ದಿನಗಳ ಅವಧಿಯಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಐದು ಪ್ರಕರಣಗಳ ವಿರುದ್ಧ ಸಿಬಿಐ ತನಿಖೆ ನಡೆಸಲಾರಂಭಿಸಿದೆ.

Advertisement

ತೀರಾ ಹೊಸತು ಎಂದರೆ ನಾದಿಯಾ ಜಿಲ್ಲೆಯ ಹನ್ಸ್‌ಖಾಲಿ ಎಂಬಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ. ರಾಜ್ಯ ಸರ್ಕಾರ ನಡೆಸಿದ ತನಿಖೆ ತೃಪ್ತಿಕರವಾಗಿಲ್ಲವೆಂದು ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಿದ್ದ ಕಲ್ಕತಾ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠದ ಆದೇಶದ ಹಿನ್ನೆಲೆಯಲ್ಲಿ ಅಪ್ರಾಪ್ತೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಕೇಸು ಸಿಬಿಐಗೆ ವರ್ಗಾವಣೆಗೊಂಡಿದೆ. ಇದರಿಂದಾಗಿ ಆ ರಾಜ್ಯದಲ್ಲಿ ಪೊಲೀಸ್‌ ಇಲಾಖೆಯ ಕಾರ್ಯಕ್ಷಮತೆಯ ಮೇಲೆ ಪ್ರಶ್ನೆಗಳು ಮೂಡುವಂತಾಗಿದೆ.

ಮಾ.25ರಂದು ಭಿರ್‌ಭೂಮ್‌ ಜಿಲ್ಲೆಯಲ್ಲಿ ಟಿಎಂಸಿ ನಾಯಕನ ಕೊಲೆ ಪ್ರಕರಣ ಖಂಡಿಸಿ, 9 ಮಂದಿಯನ್ನು ಜೀವಂತ ಸುಟ್ಟು ಹಾಕಿದ ಕೇಸು ಮತ್ತು ಟಿಎಂಸಿ ನಾಯಕನ ಕೊಲೆ ಪ್ರಕರಣ ಈಗಾಗಲೇ ಸಿಬಿಐಗೆ ಹಸ್ತಾಂತರವಾಗಿದೆ. ಏ.4ರಂದು ಪುರೂಲಿಯಾ ಜಿಲ್ಲೆಯಲ್ಲಿ ಕಾಂಗ್ರೆಸ್‌ ಮುಖಂಡನ ಹತ್ಯೆ, ಏ.8ರಂದು ಟಿಎಂಸಿಯ ಮತ್ತೂಬ್ಬ ನಾಯಕ ಸಾವಿನ ಪ್ರಕರಣವೂ ಹೈಕೋರ್ಟ್‌ ಆದೇಶದ ಮೇರೆಗೆ ಕೇಂದ್ರ ತನಿಖಾ ಸಂಸ್ಥೆ ವ್ಯಾಪ್ತಿಗೆ ಬಂದಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸುಪ್ರೀಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಶೋಕ್‌ ಗಂಗೂಲಿ “ವಿಭಾಗೀಯ ನ್ಯಾಯಪೀಠಗಳು ಸಿಬಿಐ ತನಿಖೆಗೆ ಆದೇಶ ನೀಡುವುದು ಹೊಸತೇನಲ್ಲ. ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್‌ ಇಲಾಖೆ ನಡೆಸಿದ ತನಿಖೆ ಮತ್ತು ಕೇಂದ್ರ ತನಿಖಾ ಸಂಸ್ಥೆಗಳಿಗೆ ಇರುವ ಅವಕಾಶ ಗಮನಿಸಿ ತೀರ್ಪು ನೀಡುತ್ತವೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next