Advertisement

ಮೂರು ಶುದ್ಧ ನೀರಿನ ಘಟಕ ಲೋಕಾರ್ಪಣೆ

12:36 PM Oct 14, 2018 | Team Udayavani |

ಕೆಂಗೇರಿ: ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಬಿಎಂಪಿಯ 198ನೇ ವಾರ್ಡ್‌ನ ಹೆಮ್ಮಿಗೆಪುರ ವ್ಯಾಪ್ತಿಯಲ್ಲಿ ನಾಲ್ಕು ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಶಾಸಕ ಎಸ್‌.ಟಿ.ಸೋಮಶೇಖರ್‌ ಶನಿವಾರ ಲೋಕಾರ್ಪಣೆ ಮಾಡಿದರು.

Advertisement

ಹೆಮ್ಮಿಗೆಪುರ ವ್ಯಾಪ್ತಿಯ ತಲಘಟ್ಟಪುರ, ಕೋನಸಂದ್ರ, ಗಾಣಕಲ್‌ ಹಾಗೂ ಬೃಂದಾವನ ಲೇಔಟ್‌ನಲ್ಲಿ ನೀರಿನ ಘಟಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಶಾಸಕರು, ನಾಗರಿಕರ ಆರೋಗ್ಯ ದೃಷ್ಟಿಯಿಂದ ಕ್ಷೇತ್ರದಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದು, ಬೇಡಿಕೆ ಬಂದಲ್ಲಿ ಮತ್ತಷ್ಟು ಕಡೆ ಘಟಕ ಸ್ಥಾಪಿಸಲಾಗುವುದು ಎಂದರು.

ರಸ್ತೆ ಅಭಿವೃದ್ಧಿಗೆ ಮನವಿ: ಮಳೆ ಬಂದರೆ ರಾಜಕಾಲುವೆಯ ನೀರು ಬಾಲಾಜಿ ಬಡಾವಣೆಯ ರಸ್ತೆ ತುಂಬ ಹರಿದು, ಮನೆಗಳ ಒಳಗೆ ಬರುತ್ತದೆ. ಈ ಸಮಸ್ಯೆ ಪರಿಹರಿಸಲು ತಡೆಗೋಡೆ ನಿರ್ಮಿಸಬೇಕು. ಬಡಾವಣೆಯ ರಸ್ತೆ ಅಬಿವೃದ್ಧಿಪಡಿಸಬೇಕು ಎಂದು ನಾಗರಿಕರು ಶಾಸಕರಿಗೆ ಮನವಿ ಮಾಡಿದರು. ಪಾಲಿಕೆ ಸದಸ್ಯ ಆರ್ಯ ಶ್ರೀನಿವಾಸ್‌, ವಾರ್ಡ್‌ ಕಾಂಗ್ರೆಸ್‌ ಅಧ್ಯಕ್ಷ ನಾಗರಾಜ, ನಜೀರ್‌, ಬಿ.ಕೃಷ್ಣಪ್ಪ, ಲತಾ ಹಾಗೂ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next