Advertisement

ಶಾಸಕ ಭೀಮಾನಾಯ್ಕ್ ಪುತ್ರ ಸೇರಿ ಮೂವರಿಗೆ ಗಾಯ

11:51 PM Aug 18, 2019 | Team Udayavani |

ಬಳ್ಳಾರಿ: ಕಾರು ಹಾಗೂ ಟಾಟಾ ಏಸ್‌ ನಡುವೆ ಡಿಕ್ಕಿಯಾಗಿ ಹಗರಿ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಭೀಮಾನಾಯ್ಕ್ ಪುತ್ರ ಅಶೋಕ್‌ ಸೇರಿ ಮೂವರು ಗಾಯಗೊಂಡಿರುವ ಘಟನೆ ಹೊಸಪೇಟೆ ತಾಲೂಕು ಮರಿಯಮ್ಮನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸಂಭವಿಸಿದೆ.

Advertisement

ಶಾಸಕ ಭೀಮಾನಾಯ್ಕ್ ಪುತ್ರ ಅಶೋಕ್‌, ಹಗರಿಬೊಮ್ಮನಹಳ್ಳಿಯಿಂದ ಹೊಸಪೇಟೆ ಮಾರ್ಗವಾಗಿ ಜಿಂದಾಲ್‌ ವಿಮಾನ ನಿಲ್ದಾಣಕ್ಕೆ ಕಾರಲ್ಲಿ ಸಂಚರಿಸುತ್ತಿದ್ದಾಗ ಎದುರಿನಿಂದ ಬಂದ್‌ ಟಾಟಾ ಏಸ್‌ ಡಿಕ್ಕಿ ಹೊಡೆಯಿತು. ಈ ವೇಳೆ, ಶಾಸಕರ ಪುತ್ರ ಅಶೋಕ್‌ ಮತ್ತು ಕಾರು ಚಾಲಕ ಹಾಗೂ ಟಾಟಾ ಏಸ್‌ ಚಾಲಕ ಚಾಂದ್‌ಬಾಷಾನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳು ಹೊಸಪೇಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಶಾಸಕ ಭೀಮಾನಾಯ್ಕ್, ಮರಿಯಮ್ಮನಹಳ್ಳಿ ಪಿಎಸ್‌ಐ ಎಂ.ಶಿವಕುಮಾರ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next