Advertisement

ಸಿಡಿಲಿಗೆ ಮೂವರ ದುರ್ಮರಣ

06:40 AM Sep 29, 2018 | Team Udayavani |

ಬೆಂಗಳೂರು: ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಕೆಲವೆಡೆ ಮಳೆಯಾಗಿದ್ದು,ಸಿಡಿಲಬ್ಬರದ ಮಳೆಗೆ ಮೂವರು ಬಲಿಯಾಗಿದ್ದಾರೆ. ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚಿಕ್ಕನಿಂಗದಳ್ಳಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಹೊಲದಿಂದ ಮರಳುವಾಗ ಸಿಡಿಲು ಬಡಿದು ಜಯಮ್ಮ ಮಲ್ಲೇಶಪ್ಪ (42) ಮೃತಪಟ್ಟಿದ್ದಾರೆ.

Advertisement

ಖೀರಿಬಾಯಿ ತುಳಸೀರಾಮ, ಭೀಮಲಿಬಾಯಿ ಲಕ್ಷ್ಮಣ ಎಂಬುವರು ಗಾಯಗೊಂಡಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಬಸವನಮತ್ತಿಕೆರೆ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ತಿಮ್ಮಕ್ಕ (55) ಎಂಬುವರು ಮೃತಪಟ್ಟಿದ್ದಾರೆ. ಪುತ್ತೂರು ಸಮೀಪದ ಸವಣೂರಿನಲ್ಲಿ ಸಿಡಿಲು ಬಡಿದು ಮೂವರು,ಕಾಣಿಯೂರಿನಲ್ಲಿ ಸೀತಮ್ಮ ಎಂಬುವರು ಗಾಯಗೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸೀತಾಪುರದಲ್ಲಿ ಮಲಗಿದ್ದ ವೇಳೆ ಮನೆಯ ಚಾವಣಿ ಕುಸಿದು ಮಾಯವನ್‌ (45) ಎಂಬುವರು ಮೃತಪಟ್ಟಿದ್ದಾರೆ. ಇದೇ ವೇಳೆ, ಹುಣಸೂರು,ಶಿರಸಿ, ಸಿದ್ದಾಪುರ, ಇಟಗಿ, ಶೃಂಗೇರಿ, ಹಾಸನ ಸೇರಿ ಇತರೆಡೆಯೂ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next